ETV Bharat / city

ಸಾಂಕೇತಿಕ ಪ್ರತಿಭಟನೆಗೆ ಹುಬ್ಬಳ್ಳಿ ರೈತ ಸಂಘಟನೆಗಳ ತೀರ್ಮಾನ

author img

By

Published : Sep 26, 2021, 4:06 PM IST

Updated : Sep 26, 2021, 4:45 PM IST

ನಾಳೆ ಭಾರತ್ ಬಂದ್​ಗೆ ಹುಬ್ಬಳ್ಳಿಯಲ್ಲಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ‌ ಸೂಚಿಸಿವೆ.

Hubli  Farmers Organizations Support to Bharat Bund
ನಾಳೆ ಭಾರತ್ ಬಂದ್

ಹುಬ್ಬಳ್ಳಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್​ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ‌ವನ್ನಷ್ಟೇ ಸೂಚಿಸಿವೆ.

ಸಾಂಕೇತಿಕ ಪ್ರತಿಭಟನೆಗೆ ಹುಬ್ಬಳ್ಳಿ ರೈತ ಸಂಘಟನೆಗಳ ತೀರ್ಮಾನ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, AITUC, CITU, ಟ್ರೇಡ್ ಯೂನಿಯನ್ ಕೋಆರ್ಡಿನೇಷನ್ ಕಮಿಟಿ (TUCC), ಅಟೋರಿಕ್ಷಾ ಚಾಲಕರ ಸಂಘ, ಮಹದಾಯಿ ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ, ಹುಬ್ಬಳ್ಳಿ ತಾಲೂಕು ಸಮಿತಿಗಳು ಭಾರತ್ ಬಂದ್‌ಗೆ ಬೆಂಬಲ ಕೊಟ್ಟಿವೆ.

NWKRTC ಸಾರಿಗೆ ಸಂಸ್ಥೆ, ಟ್ಯಾಕ್ಸಿ-ಖಾಸಗಿ ವಾಹನಗಳ ಒಕ್ಕೂಟ, ಬಿಜೆಪಿ ಜಿಲ್ಲಾ ಘಟಕ, ಹೋಟೆಲ್ ಮಾಲೀಕರ ಸಂಘ, ಬೇಂದ್ರೆ ನಗರ ಸಾರಿಗೆ ಬೆಂಬಲ ನೀಡಿಲ್ಲ.

ಇಂದಿರಾ ಗ್ಲಾಸ್ ಹೌಸ್​ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಚನ್ನಮ್ಮ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಕೇವಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಸಂಘಟನೆಗಳು ತೀರ್ಮಾನಿಸಿವೆ.

ಇದನ್ನೂ ಓದಿ: ದಿ.ಗುಂಡೂರಾವ್ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 'ಕೈ' ನಾಯಕರ ವಾಗ್ದಾಳಿ

Last Updated :Sep 26, 2021, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.