ETV Bharat / city

ಕವಿವಿಗೆ ಭೇಟಿ ನೀಡಿದ ಹೆಚ್​ಡಿಕೆ.. ಮುತ್ತಿಗೆಗೆ ಯತ್ನಿಸಿದ ಪಿಎಸ್​ಐ ಅಭ್ಯರ್ಥಿ ಮೇಲೆ ಗನ್​ಮ್ಯಾನ್​ನಿಂದ ಹಲ್ಲೆ!

author img

By

Published : Jun 4, 2022, 2:42 PM IST

Updated : Jun 4, 2022, 3:16 PM IST

ಅತಿಥಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಎಸ್​ಐ ಮರು ಪರೀಕ್ಷೆ ಬಯಸುವ ಅಭ್ಯರ್ಥಿಗಳು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಹೆಚ್​ಡಿಕೆ ಗನ್​ಮ್ಯಾನ್​ ಪಿಎಸ್​ಐ ಅಭ್ಯರ್ಥಿ ಮೇಲೆ ಕೈ ಮಾಡಿದ್ದಾನೆ.

HD Kumaraswamy gunman slap to PSI candidate, HD Kumaraswamy visit to Dharwad, PSI candidate protest in Dharwad, Dharwad news, ಪಿಎಸ್​ಐ ಅಭ್ಯರ್ಥಿಗೆ ಹೆಚ್​ಡಿ ಕುಮಾರಸ್ವಾಮಿ ಗನ್​ಮ್ಯಾನ್​ನಿಂದ ಕಪಾಳ ಮೋಕ್ಷ, ಹೆಚ್ ಡಿ ಕುಮಾರಸ್ವಾಮಿ ಧಾರವಾಡಕ್ಕೆ ಭೇಟಿ, ಧಾರವಾಡದಲ್ಲಿ ಪಿಎಸ್​ಐ ಅಭ್ಯರ್ಥಿಗಳ ಪ್ರತಿಭಟನೆ, ಧಾರವಾಡ ಸುದ್ದಿ,
ಪಿಎಸ್​ಐ ಅಭ್ಯರ್ಥಿ ಮೇಲೆ ಕುಮಾರಸ್ವಾಮಿ ಗನ್​ಮ್ಯಾನ್​ನಿಂದ ಹಲ್ಲೆ

ಧಾರವಾಡ: ವಿಧಾನ ಪರಿಷತ್​ ಚುನಾವಣೆ ಪ್ರಚಾರಕ್ಕೆಂದು ಧಾರವಾಡಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ವಾಹನಕ್ಕೆ ಪಿಎಸ್​ಐ ಮರು ಮರೀಕ್ಷೆ ಬಯಸುವ ಅಭ್ಯರ್ಥಿಗಳು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆಗ ಹೆಚ್​ಡಿಕೆ ವಾಹನದ ಹಿಂದೆ ಬಂದ ಅಭ್ಯರ್ಥಿಯೊಬ್ಬರ ಮೇಲೆ ಗನ್​ಮ್ಯಾನ್​​ ಹಲ್ಲೆ ಮಾಡಿದ ಘಟನೆ ನಡೆದಿದೆ.

ವಿಧಾನ ಪರಿಷತ್​ ಚುನಾವಣೆ ಪ್ರಚಾರಕ್ಕೆಂದು ಕುಮಾರಸ್ವಾಮಿ ಧಾರವಾಡಕ್ಕೆ ತೆರಳಿದ್ದಾರೆ. ಬಳಿಕ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಮರು ಪರೀಕ್ಷೆ ನಡೆಸದಂತೆ ಮನವಿ ಮಾಡಿದರು. ತಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವುದಾಗಿ ಅಳಲು ತೋಡಿಕೊಂಡರು.

ಕವಿವಿಗೆ ಭೇಟಿ ನೀಡಿದ ಹೆಚ್​ಡಿಕೆ.. ಮುತ್ತಿಗೆಗೆ ಯತ್ನಿಸಿದ ಪಿಎಸ್​ಐ ಅಭ್ಯರ್ಥಿ ಮೇಲೆ ಗನ್​ಮ್ಯಾನ್​ನಿಂದ ಹಲ್ಲೆ!

ಆದರೂ ಮತ್ತೊಮ್ಮೆ ಪರೀಕ್ಷೆ ಏಕೆ ಅಂತಾ ಪಿಎಸ್​ಐ ಪಾಸ್​ ಆದ ಅಭ್ಯರ್ಥಿಗಳು ಪ್ರಶ್ನಿಸಿದರು. ಇದೇ ವೇಳೆ ಸ್ಥಳಕ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳು ಆಗಮಿಸಿ ಮರುಪರೀಕ್ಷೆ ನಡೆಯಲೇಬೇಕು ಅಂತಾ ಆಗ್ರಹಿಸಿದರು.

ಓದಿ: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ : ಆರ್ ಡಿ ಪಾಟೀಲ್​ನ ಮತ್ತಿಬ್ಬರು ಆಪ್ತರ ಬಂಧನ

ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, 545 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೆಚ್​ಡಿಕೆ ಹೇಳಿದರು. ನಮಗೆ ಅನ್ಯಾಯವಾಗಿಲ್ಲವೇ ಅಂತಾ ತೇರ್ಗಡೆಯಾದ ಅಭ್ಯರ್ಥಿಗಳು ಪ್ರಶ್ನಿಸಿದರು. ಹೆಚ್​ಡಿಕೆ ವಿರುದ್ಧ ಘೋಷಣೆ ಹಾಕಿದ ಮರು ಪರೀಕ್ಷೆ ಬಯಸುವ ಅಭ್ಯರ್ಥಿಗಳು, ಡಬಲ್‌ ಸ್ಟ್ಯಾಂಡರ್ಡ್ ಏಕೆ ಅಂತಾ ಪ್ರಶ್ನೆ ಮಾಡಿದರು.

ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕುಮಾರಸ್ವಾಮಿ ಅಲ್ಲಿಂದ ಹೊರಡಲು ಮುಂದಾದರು. ಈ ವೇಳೆ ಮರುಪರೀಕ್ಷೆ ಬಯಸುವ ಅಭ್ಯರ್ಥಿಗಳು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಭ್ಯರ್ಥಿಗಳು ಕಾರಿಗೆ ಅಡ್ಡ ಬಂದು ಹೈಡ್ರಾಮಾ ಮಾಡಲು ಮುಂದಾದರು. ಆಗ ಎಲ್ಲರನ್ನು ಬದಿಗೆ ಸರಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೂ ಅಲ್ಲಿಂದ ತೆರಳಲು ಕುಮಾರಸ್ವಾಮಿ ಮುಂದಾದರು. ಈ ವೇಳೆ ಪಿಎಸ್​ಐ ಪರೀಕ್ಷೆ ಬರೆಯಲು ಇಚ್ಛಿಸಿದ ಅಭ್ಯರ್ಥಿಗಳು ‘ಮೋದಿ.. ಮೋದಿ..’ ಅಂತಾ ಘೋಷಣೆ ಕೂಗಿದರು.

ಕುಮಾರಸ್ವಾಮಿ ಕವಿವಿಗೆ ತೆರಳುವ ಮುನ್ನ ಪೊಲೀಸರ ಹಾಗೂ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪಿಎಸ್​ಐ ಅಭ್ಯರ್ಥಿಯೊಬ್ಬ ಕುಮಾರಸ್ವಾಮಿ ವಾಹನವನ್ನು ಬೆನ್ನಟ್ಟಿದರು. ಈ ವೇಳೆ ಕುಮಾರಸ್ವಾಮಿ ಗನ್ ಮ್ಯಾನ್​ ಪಿಎಸ್​ಐ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದರು.

Last Updated : Jun 4, 2022, 3:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.