ETV Bharat / city

ಧಾರವಾಡ: ನಡುರಸ್ತೆಯಲ್ಲಿ ಅಣ್ಣನನ್ನೇ ಕೊಚ್ಚಿಹಾಕಿದ ತಮ್ಮಂದಿರು... ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : May 17, 2020, 9:59 AM IST

Updated : May 18, 2020, 11:31 AM IST

ಆಸ್ತಿ ವಿವಾದಕ್ಕೆ ಅಣ್ಣನನ್ನೇ ಸಹೋದರ ಸಂಬಂಧಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡದ ಕಮಲಾಪುರ ಬಡಾವಣೆಯಲ್ಲಿ ನಡೆದಿತ್ತು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಧಾರವಾಡ: ಆಸ್ತಿ ವಿವಾದಕ್ಕಾಗಿ ನಗರದ ಕಮಲಾಪುರದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಈ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಮೇಶ ಬಾಳಗಿಯನ್ನು ಆತನ ಸಹೋದರರಾದ ಚೆನ್ನಪ್ಪ ಬಾಳಗಿ‌ (೨೩) ಮತ್ತು ಬಸಪ್ಪ ಬಾಳಗಿ (೨೦) ಮೊನ್ನೆ ಮಧ್ಯಾಹ್ನ ನಡು ರಸ್ತೆಯಲ್ಲೇ ಕೊಲೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಹಲವು ವರ್ಷಗಳಿಂದ ಎರಡು ಕುಟುಂಬದ ನಡುವೆ 13 ಗುಂಟೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಈ ಸಂಘರ್ಷ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ‌

ಆಸ್ತಿ ವಿವಾದ: ಒಡಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣ!

ಪತಿಯನ್ನು ನನ್ನ ಎದುರೇ ಕೊಲೆ ಮಾಡಿದ್ದಾರೆ ಎಂದು ಉಮೇಶನ ಪತ್ನಿ ಉಮಾ ಏಳು ಜನರ ವಿರುದ್ಧ ದೂರು ನೀಡಿದ್ದರು. ಆದ್ರೆ ಸಿಸಿಟಿವಿಯಲ್ಲಿ ಇಬ್ಬರು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾದ ಹಿನ್ನೆಲೆ ದೃಶ್ಯದಲ್ಲಿ ಕಂಡು ಬಂದ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Last Updated : May 18, 2020, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.