ETV Bharat / city

ಕುಡಿದ ಮತ್ತಲ್ಲಿ ಮಗು ಕಳ್ಳತನ ಮಾಡಲು ಯತ್ನಿಸಿದ ಆರೋಪಿ ಪೊಲೀಸರ ವಶಕ್ಕೆ

author img

By

Published : Feb 23, 2020, 12:33 PM IST

ಶಂಕರ ವಿಹಾರ ನಗರದಲ್ಲಿ ಮಗು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯ ವಿಚಾರಣೆ ನಡೆದಿದೆ.

police-arrested-child-steel-thief-in-davanagere
ದಾವಣಗೆರೆ ಮಕ್ಕಳ ಕಳ್ಳ

ದಾವಣಗೆರೆ: ಮಗು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಂಕರ ವಿಹಾರ ನಗರದಲ್ಲಿ ನಡೆದಿದೆ.

ಮಗು ಕಳ್ಳತನ ಮಾಡಲು ಯತ್ನಿಸಿದ ಆರೋಪಿ ಪೊಲೀಸರ ವಶಕ್ಕೆ

ನಗರದ ಬಿಎಸ್​​ಎನ್​ಎಲ್ ಕಚೇರಿ ಹಿಂಭಾಗದಲ್ಲಿರುವ ಶಂಕರ ವಿಹಾರ ನಗರದಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಓಡಲು ಪರಸಪ್ಪ ಎಂಬ ವ್ಯಕ್ತಿ ಯತ್ನಿಸಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಮಗುವನ್ನು ಕಸಿದುಕೊಂಡು ಆರೋಪಿಯನ್ನು ನಗರದ ಮಹಿಳಾ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಆರೋಪಿಯ ಕುರಿತು ಪೊಲೀಸರ ತನಿಖೆಯ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.