ಬೆಂಗಳೂರು: ಕಾವೇರಿ ಸೇರಿದಂತೆ ರಾಜ್ಯದ ನದಿಗಳನ್ನು ಸಂರಕ್ಷಣೆ ಮಾಡುವ ಅಭಿಯಾನದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ ಆಧ್ಯಾತ್ಮ ಗುರು, ಕಾವೇರಿ ಕೂಗು - ನದಿಗಳನ್ನು ರಕ್ಷಿಸಿ ಅಭಿಯಾನದ ಕುರಿತು ಸಿಎಂ ಜೊತೆ ಚರ್ಚೆ ನಡೆಸಿದರು. ಇಷ್ಟು ದಿನ ನಡೆಸಿದ ಅಭಿಯಾನ, ಜನರಲ್ಲಿ ಮಾಡುತ್ತಿರುವ ಜಾಗೃತಿ ಕುರಿತು ಮಾಹಿತಿ ನೀಡಿ ಸರ್ಕಾರದ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಆಧ್ಯಾತ್ಮ ಗುರುಗಳಿಂದ ಸಿಎಂ ಬಿಎಸ್ವೈ ಮತ್ತು ಬಿಎಎಸ್ವೈ ಪುತ್ರ ವಿಜಯೇಂದ್ರ ಆಶೀರ್ವಾದ ಪಡೆದರು.