ಚಾಮರಾಜಪೇಟೆ ಈದ್ಗಾ ಮೈದಾನದ ಕುರಿತ ವಕ್ಫ್​ ಬೋರ್ಡ್ ಅರ್ಜಿ ವಜಾ: ಪಾಲಿಕೆ ಜಂಟಿ ಆಯುಕ್ತ ಶ್ರೀನಿವಾಸ್

author img

By

Published : Aug 6, 2022, 10:09 PM IST

Waqf Board application rejected by bbmp

ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್​ ಬೋರ್ಡ್​ಗೆ ಬಿಬಿಎಂಪಿ ಆದೇಶ ನೀಡಿದ್ದು, ಸರ್ಕಾರದ ಕಂದಾಯ ಇಲಾಖೆಯ ಜಾಗ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೆಂದು ವಾದಿಸಿ ವಕ್ಫ್​ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾ ಮಾಡಿದೆ. ಈ ಮೂಲಕ ಈದ್ಗಾ ಮೈದಾನ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ ಜಾಗ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.

ಚಾಮರಾಜಪೇಟೆ ಆಟದ ಮೈದಾನವನ್ನ ವಕ್ಫ್​ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿದೆ. ಬಿಬಿಎಂಪಿ ದಾಖಲೆಗಳಲ್ಲಿ ಈ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಸ್ತಿಯೆಂದು ನಮೂದಿಸಲು ಸೂಚಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

Waqf Board application rejected by bbmp
ಚಾಮರಾಜಪೇಟೆ ಈದ್ಗಾ ಮೈದಾನದ ಕುರಿತ ವರ್ಕ್ಸ್ ಬೋರ್ಡ್ ಅರ್ಜಿ ವಜಾ

ಬಿಬಿಎಂಪಿ ವಕ್ಫ್​ ಬೋರ್ಡ್ ಮುಂದಕ್ಕೆ ಮೈದಾನದ ದಾಖಲೆ ಇಚ್ಛಿಸಿದಲ್ಲಿ ನೇರವಾಗಿ ರಾಜ್ಯ ಕಂದಾಯ ಇಲಾಖೆಯ ಜೊತೆಗೆ ವ್ಯವಹರಿಸಲು ಹಾಗೂ ದಾಖಲೆ ಸಲ್ಲಿಸಲು ಈ ಆದೇಶ ಅಡ್ಡಿಯಾಗುವುದಿಲ್ಲವೆಂದೂ ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ವೆಬ್​ಸೈಟ್​ನಿಂದ ಹಿಂದಿ ಬ್ಯಾನರ್ ತೆಗೆದು ಹಾಕಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.