ETV Bharat / city

ರಾಜ್ಯದಲ್ಲಿ ಇಂದು 1268 ಮಂದಿಗೆ ಕೋವಿಡ್ ದೃಢ.. ಸೋಂಕಿಗೆ ಆರು ಮಂದಿ ಸಾವು

author img

By

Published : Aug 22, 2022, 9:39 PM IST

ಇಂದು ಆರುಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 10,541ಕ್ಕೆ ಏರಿಕೆಯಾಗಿದೆ.

today Karnataka covid  heath bulletin
ಕೋವಿಡ್​ ವರದಿ

ಬೆಂಗಳೂರು : ರಾಜ್ಯದಲ್ಲಿ ಇಂದು 18,800 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,268 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 1,229 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 39,91,342 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ ಸೋಂಕಿಗೆ ಆರು ಮಂದಿ ಮೃತಪಟ್ಟಿದ್ದಾರೆ.

ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 10,541ಕ್ಕ ಏರಿಕೆಯಾಗಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ. 6.74 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ.5.58 ರಷ್ಟಿದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 6,84,10,831. ವಾರದ ಸಾವಿನ ಪ್ರಮಾಣ ಶೇ. 0.30 ರಷ್ಟಿದೆ.

ವಿಮಾನ ನಿಲ್ದಾಣದಿಂದ ಇಂದು 4,506 ಮಂದಿ ತಪಾಸಣೆಗೆ ಒಳಪಟ್ಟಿದ್ದು, ಇದುವರೆಗೂ 14,00,966 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಇಂದು 931 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,58,948 ಕ್ಕೆ ಏರಿಕೆ ಆಗಿದೆ.

ಸೋಮವಾರ 719 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೂ 18,34,504 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ಶೂನ್ಯವಾಗಿದೆ. ಸಕ್ರಿಯ ಪ್ರಕರಣಗಳು 7,463 ಇದೆ. ಇದುವರೆಗಿನ ಕೋವಿಡ್ ಸಾವಿನ ಸಂಖ್ಯೆ 16,980 ರಷ್ಟಿದೆ.

ಇದನ್ನೂ ಓದಿ : ಲೈಂಗಿಕಾಸಕ್ತಿ ಕುಗ್ಗಿಸುತ್ತವೆ 7 ಔಷಧಿಗಳು.. ಸೇವಿಸುವಾಗ ಜಾಗ್ರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.