ETV Bharat / city

ಲಾಕ್​ಡೌನ್ ಮಧ್ಯೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ

author img

By

Published : May 21, 2021, 9:28 PM IST

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗಿದ್ದು, ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌.

ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಐಪಿಎಸ್ ಅಧಿಕಾರಿಗಳ ವರ್ಗಾವಣೆ


ಬೆಂಗಳೂರು: ಲಾಕ್​​ಡೌನ್ ನಡುವೆಯೂ ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌.

ಐಪಿಎಸ್ ಅಧಿಕಾರಿಗಳಾದ ಶರತ್ ಚಂದ್ರ (ಆಡಳಿತ ವಿಭಾಗದಿಂದ ಸಿಐಡಿ ಅರಣ್ಯ ಘಟಕ ಐಜಿಪಿ, ನಂಜುಂಡಸ್ವಾಮಿ (ಬಳ್ಳಾರಿ ಐಜಿಪಿಯಿಂದ ಕಾರಾಗೃಹ ಇಲಾಖೆ ಐಜಿಪಿ), ಮನಿಶ್ ಖರ್ಬಿಕರ್ (ಈಶಾನ್ಯ ವಲಯದಿಂದ ಐಜಿಪಿ ಬಳ್ಳಾರಿ ವಲಯ), ರಾಘವೇಂದ್ರ ಸುಹಾಸ್ (ಉತ್ತರ ವಲಯದಿಂದ ಆಂತರಿಕ ಭದ್ರತಾ ವಿಭಾಗ) ಹಾಗೂ ಸತೀಶ್ ಕುಮಾರ್ (ಕಲಬುರಗಿ ನಗರ ಕಮಿಷನರ್​ ಹುದ್ದೆಯಿಂದ ಐಜಿಪಿ ಉತ್ತರ ವಲಯ), ಡಾ‌. ವೈ.ಎಸ್.ರವಿಕುಮಾರ್ (ನೇಮಕಾತಿ ವಿಭಾಗದ ಡೆಪ್ಯೂಟಿ ಐಜಿಪಿಯಿಂದ ಕಲಬುರಗಿ ನಗರ ಕಮಿಷನರ್) ಆಗಿ ವರ್ಗಾವಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.