ETV Bharat / city

ಜವಾಬ್ದಾರಿ ಹೊತ್ತು, ಅಣ್ಣನ ಸಿನಿಮಾ ಕಾರ್ಯಕ್ರಮ ಮುಗಿಸಿ ಮಾಯವಾದ 'ಪರಮಾತ್ಮ'

author img

By

Published : Oct 29, 2021, 4:10 PM IST

ರಾಷ್ಟ್ರ ಪ್ರಶಸ್ತಿ ವಿಜೇತ, ಯುವರತ್ನ, ನಟ ಪುನೀತ್​ ರಾಜ್​ಕುಮಾರ್​ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೊನೆಯ ಜವಾಬ್ದಾರಿ ಎಂಬಂತೆ ಅಣ್ಣ ಭಜರಂಗಿ 2 ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗು ನಗುತ್ತಾ ಯಶಸ್ವಿಗೊಳಿಸಿ ಇಂದು ಕಾಣದಂತೆ ಮಾಯವಾಗಿದ್ದಾರೆ 'ಪರಮಾತ್ಮ'. ಅಣ್ಣನ ಜೊತೆ ಕಳೆದ ಕೊನೆಯ ಕಾರ್ಯಕ್ರಮದ ವಿಡಿಯೋ, ಮಾತುಗಳು ಮರುಕಳಿಸುತ್ತಿವೆ..

puneeth-rajkumar-last-program-video
ನಟ ಪುನೀತ್​ ರಾಜ್​ಕುಮಾರ್​

ಬೆಂಗಳೂರು : ಕರುನಾಡಿನ ಜನರ ಮುದ್ದಿನ ಅಪ್ಪು, ದೊಡ್ಡಮನೆಯ ಮಗ, ಯುವರತ್ನ, ನಟ ಪುನೀತ್​ ರಾಜ್​ಕುಮಾರ್​ ಇಂದು ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ. ಅಣ್ಣ, ನಟ ಶಿವರಾಜ್​ಕುಮಾರ್​ ಅವರ ಭಜರಂಗಿ 2ಗೆ ಸಾಥ್​​ ನೀಡಿ ದೇವರ ಮುಡಿ ಸೇರಿದ 'ಬೆಟ್ಟದ ಹೂ' ಇನ್ನು ನೆನಪು ಮಾತ್ರ.

ಮಾಯವಾದ 'ಪರಮಾತ್ಮ'

ಭಜರಂಗಿ 2 ಸಿನಿಮಾ ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿದ್ದ ಯುವರತ್ನ, ನಟ ಪುನೀತ್ ರಾಜ್‌ಕುಮಾರ್​ ಅವರು ತಾವು ಶಿವರಾಜ್ ಕುಮಾರ್​ ಫ್ಯಾನ್​ ಅಂತಾ ಹೇಳಿಕೊಂಡಿದ್ದರು.

ಅಲ್ಲದೆ ಶಿವಣ್ಣ ಸಿನಿಮಾಗಳಲ್ಲಿ ತಮ್ಮ ಮೆಚ್ಚಿನ ಸಿನಿಮಾ ಹಾಗೂ ಗೆಟಪ್​ ಕುರಿತು ಹಂಚಿಕೊಂಡಿದ್ದರು. ಹಾಗೂ ಅಣ್ಣನ ಸಿನಿಮಾ ಹಾಡಿಗೆ ನಟ ಯಶ್​​ ಜೊತೆ ಸೇರಿ ಕುಣಿದು ಕುಪ್ಪಳಿಸಿದ್ದರು. ಇದು ಅಪ್ಪು ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವಾಗಿದೆ.

ಇವ್ರ ಥರ ಡ್ಯಾನ್ಸ್​, ಪೈಟ್​ ಮಾಡ್ಬೇಕು, ಕಲಿಬೇಕು ಅಂತ ಭಾಳ ಆಸೆ ಇತ್ತು: ಅಪ್ಪು ಕುರಿತು ಯಶ್​​ ಮಾತು

ಬಿಗ್​ ಸ್ಟಾರ್​ ಆದ್ರೂ ದೊಡ್ಡಮನೆಯ ಫ್ಯಾನ್​ ನಾನು ಎಂದು ಹೇಳಿಕೊಳ್ಳುವ ನಟ ಯಶ್​​​, ಯುವ ಸಾಮ್ರಾಟ್​​​ ಅಪ್ಪುವಿನ ಬಗ್ಗೆ ಅಭಿಮಾನಿಯಾಗಿ ಹೇಳಿದ್ದ ಮಾತುಗಳು ಇಂದು ನೆನೆಪಿಗೆ ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.