ETV Bharat / city

ಕುಡಿದ ನಶೆಯಲ್ಲಿ ಗಲಾಟೆ: ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

author img

By

Published : Dec 30, 2019, 4:05 PM IST

ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬರ್ಬರ ಹತ್ಯೆ
Murder

ಬೆಂಗಳೂರು: ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೂವಿನ ವ್ಯಾಪಾರಿ ಇರ್ಷಾದ್ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಮರ್ಷಿಲ್ ಸ್ಟ್ರೀಟ್ ನಿವಾಸಿ ಇರ್ಷಾದ್ ಸ್ನೇಹಿತರಾದ ಶಕ್ತಿವೇಲು ಮತ್ತು ಮಣಿ ಎಂಬುವವರು ನಿನ್ನೆ ರಾತ್ರಿ ಕುಡಿದು ಫುಲ್​ ಟೈಟ್​ ಆಗಿದ್ರಂತೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಕುಡಿದ ನಶೆಯಲ್ಲಿ ಶಕ್ತಿವೇಲು ಹಾಗೂ ಮಣಿ, ಇರ್ಷಾದ್ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯಕ್ಕೆ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:ಕುಡಿದ ನಶೆಯಲ್ಲಿ ಗಲಾಟೆ ಯುವಕನ ಬರ್ಬರ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ಯುವಕನ ಬರ್ಬರ ಕೊಲೆ‌ ನಡೆದಿರುವ ಘಟನೆ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೂವಿನ ವ್ಯಾಪರಿಯಾಗಿದ್ದ ಇರ್ಷಾದ್ ಕೊಲೆಯಾದ ದುರ್ದೆವಿ..

ಕಮರ್ಷಿಲ್ ಸ್ಟ್ರೀಟ್ ನಿವಾಸಿ ಇರ್ಷಾದ್ ಹಾಗೂ
ಶಕ್ತಿವೇಲು ಹಾಗೂ ಮಣಿ ಎಂಬುವವರು ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕುಡಿತ ಇದ್ರು‌. ಈ ವೇಳೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದು ಕುಡಿದ ನಶೆಯಲ್ಲಿ ಶಕ್ತಿವೇಲು ಹಾಗೂ ಮಣಿ ಹೂವಿನ ವ್ಯಾಪರಿಯಾಗಿದ್ದ ಇರ್ಷಾದ್ ನಡುವೆ ಗಲಾಟೆ ಉಂಟಾಗಿದೆ.

ಹೀಗಾಗಿ ಶಕ್ತಿವೇಲು ಹಾಗೂ ಮಣಿ ಇರ್ಷಾದ್ ನನ್ನ ಕೊಲೆ ಮಾಡಿರುವ ಶಂಕೆ ಪೊಲಿಸರು ಹೊರ ಹಾಕಿದ್ದಾರೆ. ಸದ್ಯ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

Body:KN_bNG_06_MURDER_7204498Conclusion:KN_bNG_06_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.