ETV Bharat / city

ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ರಾಷ್ಟ್ರಧ್ವಜ ಹಾರಿಸಿದ ಪಕ್ಷ ಬಿಜೆಪಿ: ಸಚಿವ ಮಾಧುಸ್ವಾಮಿ

author img

By

Published : Feb 16, 2022, 10:40 PM IST

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಬಗ್ಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಹೇಗೆ ದೇಶದ್ರೋಹಿ ಆಗ್ತಾರೆ?. ನಿಲುವಳಿ ಸೂಚನೆ ವ್ಯಾಪ್ತಿಗೆ ಬರಲ್ಲ, ತಿರಸ್ಕಾರ ಮಾಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

minister-madhuswamy
ಸಚಿವ ಮಾಧುಸ್ವಾಮಿ

ಬೆಂಗಳೂರು: ಈಶ್ವರಪ್ಪ ಅವರ ರಾಷ್ಟ್ರಧ್ವಜ ವಿವಾದ ಚರ್ಚೆಯ ವೇಳೆ ಕಾಂಗ್ರೆಸ್​ ಸದಸ್ಯರು ಹೇಳಿದ 'ಬಂದೂಕು ಕೈಯಲ್ಲಿ ಕೊಟ್ಟು ಬಾವುಟ ಹಾರಿಸಬೇಡಿ' ಎಂಬ ಮಾತಿಗೆ ಕುಪಿತಗೊಂಡ ಸಚಿವ ಜೆ.ಸಿ.ಮಾಧುಸ್ವಾಮಿ 'ದೇಶಾದ್ಯಂತ ಬಾವುಟ ಹಾರಿಸಿದ ಪಕ್ಷ ಬಿಜೆಪಿ. ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ಬಾವುಟ ಹಾರಿಸಿದ ಪಕ್ಷ ನಮ್ಮದು ಎಂದು ಕಾಂಗ್ರೆಸ್​ ಸದಸ್ಯರಿಗೆ ತಿರುಗೇಟು ನೀಡಿದರು.

ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ರಾಷ್ಟ್ರಧ್ವಜ ಹಾರಿಸಿದ ಪಕ್ಷ ಬಿಜೆಪಿ: ಸಚಿವ ಮಾಧುಸ್ವಾಮಿ

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಬಗ್ಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಹೇಗೆ ದೇಶದ್ರೋಹಿ ಆಗ್ತಾರೆ?. ನಿಲುವಳಿ ಸೂಚನೆ ವ್ಯಾಪ್ತಿಗೆ ಬರಲ್ಲ, ತಿರಸ್ಕಾರ ಮಾಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

ಮಾಧ್ಯಮದವರ ಜೊತೆ ಈಶ್ವರಪ್ಪ ಅವರು ಮಾತನಾಡುವಾಗ, ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸ್ತೀರಾ ಎಂದು ಕೇಳಿದಾಗ, ಎಲ್ಲಿ ಬೇಕಾದರೂ ಹಾರಿಸ್ತೀವಿ ಅಂತ ಹೇಳಿದ್ದಾರೆ. ಈಶ್ವರಪ್ಪ ಅವರು ರಾಷ್ಟ್ರಧ್ವಜ ಕೆಳಗಿಳಿಸಿ ಭಗವಾಧ್ವಜ ಹಾರಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಕೇಸರಿ ಧ್ವಜ ಹಾರಿಸ್ತೀವಿ ಅಂತಾನೂ ಹೇಳಿಲ್ಲ. ತ್ರಿವರ್ಣ ಧ್ವಜ ಹಾರಿಸಲು ಬಿಡಲ್ಲ ಅಂತಾನೂ ಹೇಳಿಲ್ಲ ಎಂದು ಹೇಳಿದರು.

ಓದಿ: ಬೋರ್​ವೆಲ್​ ಕೊರೆಸಲು ಹಣ ಕೊಡಲ್ಲ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ವಿಧಾನಸಭೆಯಲ್ಲಿ ಗದ್ದಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.