ETV Bharat / city

ಕಲಬುರಗಿ ಪಾಲಿಕೆ ಮೈತ್ರಿ ಕಸರತ್ತು: ಹೆಚ್​ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್. ಅಶೋಕ್!

author img

By

Published : Sep 11, 2021, 5:40 PM IST

Updated : Sep 11, 2021, 5:54 PM IST

ಕಲಬುರಗಿ ಪಾಲಿಕೆ ಮೈತ್ರಿ ಕಗ್ಗಂಟಾದ ಹಿನ್ನೆಲೆಯಲ್ಲಿ ಸಚಿವ ಆರ್. ಅಶೋಕ್ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್​ ಜೊತೆ ಮೈತ್ರಿ ಸಂಬಂಧ ಮಾತುಕತೆ ನಡೆಸಲು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲು ಬಿಡದಿಗೆ ಅಶೊಕ್ ತೆರಳಿದ್ದಾರೆ.

ಹೆಚ್​ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್.ಅಶೋಕ್
ಹೆಚ್​ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್.ಅಶೋಕ್

ಬೆಂಗಳೂರು: ಕಲಬುರಗಿ ನಗರ ಪಾಲಿಕೆ ಜಿದ್ದಾಜಿದ್ದಿ ವಿಚಾರವಾಗಿ ಇದೀಗ ಸಚಿವ ಆರ್.ಅಶೋಕ್ ಅಖಾಡಕ್ಕೆ ಇಳಿದಿದ್ದಾರೆ. ಕಲಬುರಗಿ ಪಾಲಿಕೆ ಮೈತ್ರಿ ಕಗ್ಗಂಟು ಮುಂದುವರೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯಲು ಜೆಡಿಎಸ್ ಜೊತೆ ತೀವ್ರ ಕಸರತ್ತು ನಡೆಸುತ್ತಿದೆ. ಜೆಡಿಎಸ್​​ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿದೆ. ಇದೀಗ ಸಚಿವ ಆರ್.ಅಶೋಕ್ ಅಖಾಡಕ್ಕೆ ಇಳಿದಿದ್ದಾರೆ.

ಸಿಎಂ ಬೊಮ್ಮಾಯಿ ಸೂಚನೆ ಹಿನ್ನೆಲೆಯಲ್ಲಿ ಹೆಚ್​​ಡಿಕೆ ಭೇಟಿಗೆ ಸಚಿವ ಆರ್.ಅಶೋಕ್ ಮುಂದಾಗಿದ್ದಾರೆ. ಬಿಡದಿಯ ಫಾರ್ಮ್ ಹೌಸ್​​ಗೆ ತೆರಳಿರುವ ಆರ್.ಅಶೋಕ್, ಮಾಜಿ ಸಿಎಂ ಹೆಚ್​ಡಿಕೆ ಜೊತೆ ಕಲಬುರಗಿ ಪಾಲಿಕೆ ಮೈತ್ರಿ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಜೊತೆ ಮೈತ್ರಿ ಪಕ್ಕಾ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ. ಮೈತ್ರಿ‌ ಮಾತುಕತೆಯಲ್ಲಿ ಬಿಜೆಪಿ ಯಾವ ಸೂತ್ರ ಮುಂದಿಡುತ್ತೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ. ಕಾಂಗ್ರೆಸ್​​ನ ಕೆಲ ಕಾರ್ಪೊರೇಟರ್​​ಗಳು ಜೆಡಿಎಸ್​​ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಜೆಡಿಎಸ್​​ಗೇ ಮೇಯರ್ ಸ್ಥಾನ ಬಿಟ್ಟು ಕೊಡುತ್ತಾ ಎಂಬ ಕುತೂಹಲ ಮೂಡಿದೆ.

ಜೆಡಿಎಸ್ ಮೈತ್ರಿ ಸಂಧಾನಕ್ಕೆ ಆರ್.ಅಶೋಕ್ ಅವರನ್ನು ಸಿಎಂ ಕಳಿಸಿದ್ದಾರೆ. ಬಿಡದಿ ಫಾರ್ಮ್ ಹೌಸ್​​ನಲ್ಲಿ ಮೈತ್ರಿ ಕುರಿತು ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪಾಲಿಕೆ ವಿಚಾರವಾಗಿ ರಾಷ್ಟ್ರೀಯ ನಾಯಕರಾದ ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ : ಡಿಕೆಶಿ

Last Updated : Sep 11, 2021, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.