ETV Bharat / city

ಕಲಾಪ ಬಹಿಷ್ಕಾರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ: ಕಾಂಗ್ರೆಸ್ ನಡೆಗೆ ಶೆಟ್ಟರ್ ಅಸಮಾಧಾನ

author img

By

Published : Mar 9, 2021, 1:06 PM IST

ನಮ್ಮದು ಅನೈತಿಕ ಸರ್ಕಾರವಾಗಿದ್ದರೆ, ನೀವು ಸದನದಲ್ಲಿ ಚರ್ಚಿಸಿ. ಅದನ್ನು ಬಿಟ್ಟು ಸದನ ಬಹಿಷ್ಕರಿಸಿದರೆ ಏನು ಪ್ರಯೋಜನ? ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಸಭಾತ್ಯಾಗ ಮಾಡಬಾರದು. ಸದನದೊಳಗೆ ಏನೇ ಇದ್ದರೂ ಚರ್ಚೆ ಮಾಡಿ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದರು. ಈಗ ಅವರೇ ಈ ರೀತಿ ತಪ್ಪಿಸಿಕೊಂಡರೆ ಹೇಗೆ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಡೆಗೆ ಶೆಟ್ಟರ್ ಅಸಮಧಾನ
ಕಾಂಗ್ರೆಸ್ ನಡೆಗೆ ಶೆಟ್ಟರ್ ಅಸಮಧಾನ

ಬೆಂಗಳೂರು: ಕಾಂಗ್ರೆಸ್ ಇಂದು ವಿಧಾನಸಭೆ ಕಲಾಪವನ್ನು ಬಹಿಷ್ಕರಿಸಿದೆ. ನಿನ್ನೆ ಬಜೆಟ್ ಕಲಾಪವನ್ನೂ ಬಹಿಷ್ಕರಿಸಿತ್ತು. ಇಂತಹ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಕಾಂಗ್ರೆಸ್ ನಡೆಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಅನೈತಿಕ ಸರ್ಕಾರವಾಗಿದ್ದರೆ, ನೀವು ಸದನದಲ್ಲೇ ಇದ್ದು ಚರ್ಚಿಸಿ. ಅದನ್ನು ಬಿಟ್ಟು ಸದನ ಬಹಿಷ್ಕರಿಸಿದರೆ ಏನು ಪ್ರಯೋಜನ? ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಸಭಾತ್ಯಾಗ ಮಾಡಬಾರದು. ಸದನದೊಳಗೆ ಏನೇ ಇದ್ದರೂ ಚರ್ಚೆ ಮಾಡಿ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದರು. ಈಗ ಅವರೇ ಈ ರೀತಿ ತಪ್ಪಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಓದಿ: ಜಾರಕಿಹೊಳಿ‌ ಸಹೋದರರು ಹೇಳಿದ 2+3+4 ಸೂತ್ರ ಏನು ಗೊತ್ತಾ?

ರಮೇಶ್ ಜಾರಕಿಹೊಳಿ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎಂಬ ಆರೋಪದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯಾವುದೇ ಷಡ್ಯಂತ್ರವಿದ್ದರೂ ಅದು ಹೊರಬರಲಿದೆ. ಸಂತ್ರಸ್ತೆಯೇ ದೂರು ಕೊಡಬೇಕಿತ್ತು. ಆದರೆ, ಇಲ್ಲಿ ಸಂತ್ರಸ್ತೆ ದೂರು ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಹೇಳಿದಂತೆ ಇದರ ಹಿಂದೆ ಯಾರಿದ್ದಾರೋ‌ ಗೊತ್ತಿಲ್ಲ. ತನಿಖೆಯಾದರೆ ಷಡ್ಯಂತ್ರ ಬಯಲಾಗಲಿದೆ. ಹಾಗಾಗಿ ತನಿಖೆಯ ಅಗತ್ಯವಿದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.