ಬೆಂಗಳೂರು: ಮೂರು ದಿನದ ದೀಪಾವಳಿ ಹಬ್ಬದ ಸಂಭ್ರಮ ಸಡಗರದಿಂದ ಬೆಂಗಳೂರು ಸಿಟಿ ಮತ್ತೆ ಮಾಲಿನ್ಯಕ್ಕೆ ತುತ್ತಾಗಿದೆ. ಪಟಾಕಿ ಸೇರಿದಂತೆ ನಾನಾ ಕಾರಣಗಳಿಂದ ಸಿಟಿಯಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿದೆ ಎಂದು ಕೆಎಸ್ಪಿಸಿಬಿ ಕಾರ್ಯದರ್ಶಿ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯ ದಿನಗಳಿಗೆ ಹೊಲಿಸಿದ್ರೆ, ಸಿಟಿಯಲ್ಲಿ ಹಬ್ಬದಂದು ಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದರಲ್ಲೂ ನಿಮ್ಹಾನ್ಸ್, ಬಸವೇಶ್ವರ ನಗರ ಹಾಗೂ ಸಿಟಿ ಸೆಂಟ್ರಲ್ ರೈಲ್ವೆ ನಿಲ್ದಾಣಗಳಲ್ಲಿ ಗರಿಷ್ಠ ಏರಿಕೆಯಾಗಿದೆ. ಕೆಎಸ್ಪಿಸಿಬಿ ಸೇರಿದಂತೆ ಹಲವು ಇಲಾಖೆಗಳ ಅಭಿಯಾನ ಈ ಬಾರಿಯೂ ಫೇಲ್ ಆಗಿದ್ದು, ಇದರ ಇಂಪ್ಯಾಕ್ಟ್ ಮುಂದಿನ ದಿನಗಳಲ್ಲಿ ಸಿಟಿಯಲ್ಲಿ ತೀವ್ರವಾಗಿ ಇರಲಿದೆ. ಹೀಗಾಗಿ ಜನರಲ್ಲಿ ಆದಷ್ಟು ಜಾಗೃತಿ ಮೂಡಿಸಿ ಕೆಲಸ ಮಾಡಬೇಕಾಗಿದೆ. ಮುಂದಿನ ವರ್ಷ ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯಗಳನ್ನ ಮಾಡುತ್ತೇವೆ ಎಂದರು.
ದೀಪಾವಳಿ ಸಮಯದಲ್ಲಿ ಸಿಡಿದ ಪಟಾಕಿಗಳಿಂದ ಹಲವು ಕಡೆ ಸಂಪೂರ್ಣ ಹೊಗೆ ತುಂಬಿಹೋಗಿದೆ. ಹಬ್ಬದ ದಿನವಾದ 27, 28, 29 ರಂದು ಸಿಟಿ ಸೆಂಟ್ರಲ್ ರೈಲ್ವೆ ನಿಲ್ದಾಣ 115, ಬಸವೇಶ್ವರ ನಗರ 92, ಹೆಬ್ಬಾಳ 69, ಜಯನಗರ 5ನೇ ಹಂತ 97, ಮೈಸೂರು ರೋಡ್ 75, ನಿಮ್ಹಾನ್ಸ್ 67, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ 98ರಷ್ಟು ಮಾಲಿನ್ಯ ಏರಿಕೆಯಾಗಿದೆ.