ETV Bharat / city

ನಾಲ್ಕು ಬಾರಿ ಸಿಎಂ ಆದ್ರೂ ಪೂರ್ಣಾವಧಿ ಪೂರೈಸಲಿಲ್ಲ; ಏಳು-ಬೀಳುಗಳಲ್ಲೇ ನಡೀತು ಬಿಎಸ್‌ವೈ ಅಧಿಕಾರಾವಧಿ

author img

By

Published : Jul 26, 2021, 8:01 PM IST

Updated : Jul 26, 2021, 8:25 PM IST

ಬಿ.ಎಸ್‌ ಯಡಿಯೂರಪ್ಪ 4 ನಾಲ್ಕು ಬಾರಿ ಸಿಎಂ ಆದ್ರೂ ಒಮ್ಮೆಯೂ 5 ವರ್ಷ ಪೂರ್ಣಗೊಳಿಸಲಿಲ್ಲ. 2019ರಲ್ಲಿ ಮೈತ್ರಿ ಪಕ್ಷದ 17 ಶಾಸಕರನ್ನು ಸೆಳೆದು ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್‌ವೈ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಿರುವ ಬಿಜೆಪಿ ಹೈಕಮಾಂಡ್‌ ನಾಯಕತ್ವ ಬದಲಾವಣೆಗೆ ಮುಂದಾಗಿದ್ದು ಯಾಕೆ ಗೊತ್ತಾ?

BS Yediyurappa 4 times cm in karnataka, but could not complete term even once
ನಾಲ್ಕು ಬಾರಿ ಸಿಎಂ ಆದ್ರೂ ಐದು ವರ್ಷ ಪೂರೈಸಲಿಲ್ಲ; ಏಳು ಬೀಳುಗಳಲ್ಲೇ ಅಧಿಕಾರ ಮುಗಿಸಿದ ಯಡಿಯೂರಪ್ಪ

ಬೆಂಗಳೂರು: ಭಾರತೀಯ ಜನತಾ ಪಕ್ಷದಲ್ಲೊಂದು ನಿಯಮವಿದೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ ಅನ್ನೋದೇ ಆ ಕಟ್ಟುನಿಟ್ಟಿನ ನಿಯಮ. ಇದರ ಜೊತೆಗೆ ಭ್ರಷ್ಟಾಚಾರರಹಿತವಾಗಿ ಕ್ಲೀನ್‌ ಇಮೇಜ್‌ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ ಅನ್ನುತ್ತೆ ಕೇಸರಿ ಪಕ್ಷ. ಆದ್ರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಅನ್ನಿಸುತ್ತೆ. ಪ್ರವಾಹ, ಕೋವಿಡ್‌ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ್ರೂ ಸಚಿವರು, ಸಿಎಂ ಪುತ್ರನ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರದ ಗಂಭೀರ ಆರೋಪಗಳು ಮೇಲಿಂದ ಮೇಲೆ ಕೇಳಿಬಂದಿದ್ದವು.

ನಾಲ್ಕು ಬಾರಿ ಸಿಎಂ ಆದ್ರೂ ಪೂರ್ಣಾವಧಿ ಪೂರೈಸಲಿಲ್ಲ; ಏಳು ಬೀಳುಗಳಲ್ಲೇ ಬಿಎಸ್‌ವೈ ಅಧಿಕಾರ

ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಅಧಿಕಾರವನ್ನು ಮುಂದುವರಿಸಿ ಇತರೆ ರಾಜ್ಯಗಳಿಗೆ ಮಾದರಿಯನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಆದ್ರೆ 2019ರಲ್ಲಿ ಉಂಟಾಗಿದ್ದ ಮಹಾ ಪ್ರವಾಹ ಹಾಗೂ ಮಾರಕ ಕೋವಿಡ್‌ ಪರಿಹಾರದಲ್ಲಿ ಸಚಿವರುಗಳ ವಿರುದ್ಧವೇ ಭ್ರಷ್ಟಾಚಾರದ ಗುರುತರ ಆರೋಪವಿತ್ತು.

ಕಾಂಗ್ರೆಸ್-ಜೆಡಿಎಸ್‌ನಿಂದ ಹೊರಬಂದಿದ್ದ 17 ಶಾಸಕರ ನೆರವಿನಿಂದ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಹೆಜ್ಜೆ ಹೆಜ್ಜೆಗೂ ಸವಾಲುಗಳ ಸರಮಾಲೆಯನ್ನೇ ಎದುರಿಸಿದ್ದಾರೆ. ಕೆಲವು ಸಚಿವರು ಹಾಗೂ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಅವರು ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಸೂಪರ್‌ ಸಿಎಂ ಎಂಬ ಆರೋಪಗಳನ್ನು ಮಾಡಿದ್ರು. ಕೆಲವು ಸಚಿವರು ತಮ್ಮ ಇಲಾಖೆಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಮೂಗು ತೂರಿಸುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ರು. ಅಷ್ಟೇ ಅಲ್ಲ, ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರು ಕೇಳಿ ಬಂದಿತ್ತು.

ಇದನ್ನೂ ಓದಿ: 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ವ..

ಮೊದಲೇ ಕ್ಲೀನ್‌ ಇಮೇಜ್‌ ಹಾಗೂ ಭ್ರಷ್ಟಚಾರರಹಿತ ಆಡಳಿತ ನೀಡಬೇಕೆಂಬುದು ಬಿಜೆಪಿಯ ಕಟ್ಟಪ್ಪಣೆ. ಆದ್ರೆ ರಾಜ್ಯದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಾಸನೆ ದೆಹಲಿವರೆಗೂ ತಲುಪಿತ್ತು. ಜೊತೆಗೆ ಕೆಲ ಸಚಿವರು ಹಾಗೂ ಶಾಸಕ ಯತ್ನಾಳ್‌ ಆಗಾಗ ದೆಹಲಿಗೆ ಹೋಗಿ ಬರುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಮೊದಲೇ ಪ್ಲಾನ್‌ ಮಾಡಿದ್ದ ಹೈಕಮಾಂಡ್‌, ಸಮರ್ಥ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿತ್ತು.

ಬಿಎಸ್‌ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮುಂದಿನ ದಂಡನಾಯಕ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಆದ್ರೆ ಎಲ್ಲರನ್ನೂ ಒಟ್ಟಾಗಿ ಕರೆೆದೊಯ್ಯುವ, ಪಕ್ಷ ಸಂಘಟಿಸುವಂತ ನಾಯಕನ ಆಯ್ಕೆ ಹೈಕಮಾಂಡ್‌ಗೆ ದೊಡ್ಡ ಸವಾಲೇ ಸರಿ. ರಾಜ್ಯದ ನೂರಾರು ಲಿಂಗಾಯತ ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಅವರೇ ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ಒತ್ತಾಯಿಸಿದ್ರು. ಲಿಂಗಾಯತ ಸಮುದಾಯದ ಯಡಿಯೂರಪ್ಪನವರನ್ನು ಕೆಳಗಿಳಿಸಿರುವ ಬಿಜೆಪಿ ಹೈಕಮಾಂಡ್‌, ಯಾವ ನಾಯಕನಿಗೆ ಮಣೆ ಹಾಕುತ್ತೆ ಎಂಬುದನ್ನು ಕಾದು ನೋಡಬೇಕು.

Last Updated :Jul 26, 2021, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.