ETV Bharat / city

ಚಾಕು ತೋರಿಸಿ ವಾಹನ ಸವಾರರಿಂದ ಸುಲಿಗೆ‌ ಮಾಡುತ್ತಿದ್ದ ಇಬ್ಬರ ಬಂಧನ

author img

By

Published : Nov 29, 2019, 5:16 PM IST

ರಾತ್ರಿ ವೇಳೆ ಒಂಟಿಯಾಗಿ ವಾಹನದಲ್ಲಿ ಹೋಗುವವರನ್ನೇ ಗುರಿಯಾಗಿಸಿಕೊಂಡು ಚಾಕು ತೋರಿಸಿ ಸುಲಿಗೆ‌ ಮಾಡುತ್ತಿದ್ದ ‌ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಬ್ಬರ ಬಂಧನ
ಇಬ್ಬರ ಬಂಧನ

ಬೆಂಗಳೂರು: ರಾತ್ರಿ ವೇಳೆ ಒಂಟಿಯಾಗಿ ವಾಹನದಲ್ಲಿ ಹೋಗುವವರನ್ನೇ ಗುರಿಯಾಗಿಸಿಕೊಂಡು ಚಾಕು ತೋರಿಸಿ ಸುಲಿಗೆ‌ ಮಾಡುತ್ತಿದ್ದ ‌ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಹಮ್ಮದ್ ಯಾಸಿನ್ ಹಾಗೂ ಅಶೋಕ್​ ಬಂಧಿತ ಆರೋಪಿಗಳು. ‌ಕಳೆದ ನಂ. 27 ರ ರಾತ್ರಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕ್ಯಾಬ್ ಚಾಲಕ ರವಿ‌ಕುಮಾರ್ ಎಂಬುವರು ಹೋಗುತ್ತಿರುವಾಗ ಅವರನ್ನು ಅಡ್ಡಗಟ್ಟಿದ್ದ ಖದೀಮರು ಚಾಕು ತೋರಿಸಿ ಬೆದರಿಸಿ, ಹತ್ತು ಗ್ರಾಂ ಬೆಳ್ಳಿ,‌ ಒಂದು ಮೊಬೈಲ್ ಹಾಗೂ ಪರ್ಸಿನಲ್ಲಿದ್ದ 30 ರೂ.ದೋಚಿ ಪರಾರಿಯಾಗಿದ್ದರು.‌‌ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದನ್ವಯ ನಿನ್ನೆ ರಾತ್ರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ಸಹ ದಾಖಲಾಗಿತ್ತು ಎಂದು ತಿಳಿದುಬಂದಿದೆ.

Intro:Body:

ಕಾರನ್ನ ನಿಲ್ಲಿಸಿ ಚಾಕು ಹಿಡಿದು ನಿಲ್ತಾರೆ ಈ ಸುಲಿಗೆಕೋರರು.. ಸಿಕ್ಕಿದಷ್ಟು ದೋಚೋದೆ ಇವರ ಕಾಯಕ

ಬೆಂಗಳೂರು: ಸುಲಿಗೆ‌ ಮಾಡೋದೆ ಕಾಯಕ‌‌‌ ಮಾಡಿಕೊಂಡಿದ್ದ ‌ಇಬ್ಬರು ಆರೋಪಿಗಳು ರಾತ್ರಿ ವೇಳೆ ಒಂಟಿಯಾಗಿ ವಾಹನದಲ್ಲಿ ಹೋಗುವವರನ್ನೇ ಗುರಿಯಾಗಿಸಿಕೊಂಡು ಚಾಕು ತೋರಿಸಿ ರಾಬರಿ ಮಾಡುತ್ತಿದ್ದವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ..
ಮೊಹಮ್ಮದ್ ಯಾಸಿನ್ ಹಾಗೂ ಅಶೋಕ ಬಂಧಿತ ಸುಲಿಗೆಕೋರರು.‌ಕಳೆದ ನ.27 ರಂದು ರಾತ್ರಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕ್ಯಾಬ್ ಚಾಲಕ ರವಿ‌ಕುಮಾರ್ ಎಂಬುವರು ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಅಡ್ಡಗಟ್ಟಿದ್ದ ಖದೀಮರು ಚಾಕು ತೋರಿಸಿ ಬೆದರಿಸಿ ಹತ್ತು ಗ್ರಾಂ ಬೆಳ್ಳಿ ಚೈನು,‌ ಒಂದು ಮೊಬೈಲ್ ಹಾಗೂ ಪರ್ಸಿನಲ್ಲಿದ್ದ 30 ರೂ.ದೋಚಿ ಪರಾರಿಯಾಗಿದ್ದರು..‌‌ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದನ್ವಯ ನಿನ್ನೆ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು..





Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.