ETV Bharat / city

ಒಮ್ಮೆ ಸೋನಿಯಾ ಗೆಲ್ಲಿಸಿ ತಪ್ಪು ಮಾಡಿದ್ದಕ್ಕೆ ಈಗ ಮೋದಿ ಗೆಲ್ಲಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ

author img

By

Published : Apr 15, 2019, 8:58 AM IST

ಅಂದು ನರೇಂದ್ರ ಮೋದಿಗೆ ಬಹುಮತ ಬಂದ್ರೆ ದೇಶ ಬಿಡುತ್ತೇನೆ ಅಂತಾ ದೇವೇಗೌಡರು ಹೇಳಿದ್ದರು. ಇಂದು ಅವರ ಮಗ ರೇವಣ್ಣ ಸಹ ಮೋದಿ ಪ್ರಧಾನಿಯಾದ್ರೆ ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಹೇಳಿದ್ದಾರೆ. ಮೇ 23 ರಂದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಕಣ್ಣಾರೆ ನೋಡುತ್ತೀರಾ ಎಂದು ಚಕ್ರವರ್ತಿ ಸೂಲಿಬೆಲೆ ಟಾಂಗ್​ ನೀಡಿದರು.

ಚಕ್ರವರ್ತಿ ಸೂಲಿಬೆಲೆ

ಬಳ್ಳಾರಿ: ಜಿಲ್ಲೆಯಲ್ಲಿ ಈ ಹಿಂದೆ ಒಂದು ಸಾರಿ ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಪಾಪವಿದೆ. ಆದ್ರೆ, ನರೇಂದ್ರ ಮೋದಿಗೆ ಇನ್ನೊಮ್ಮೆ ಕಮಲ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹೊಣೆಗಾರಿಕೆಯು ಕೂಡ ಬಳ್ಳಾರಿ ಜನರ ಮೇಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲಾ ಮೈದಾನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ಮಾತನಾಡಿದ ಅವರು, ಟೀಂ​ ಮೋದಿ ತಂಡ ನರೇಂದ್ರ ಮೋದಿ ಅವರ ಐದು ವರ್ಷದ ಅಭಿವೃದ್ಧಿ ಕಾರ್ಯಗಳ ಪರಿಚಯ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದ ಕೂಡಲೇ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಪತ್ರ ಬರೆದರು. ಆದ್ರೆ, ಹಿಂದೆ ನಿಮ್ಮ ಅಜ್ಜಿ ಇಂದಿರಾ ಗಾಂಧಿಯನ್ನು ಕರ್ನಾಟಕದಿಂದ, ನಿಮ್ಮ ತಾಯಿ ಸೋನಿಯಾ ಗಾಂಧಿಯನ್ನು ಬಳ್ಳಾರಿಯಿಂದ ಜಯಶೀಲರನ್ನಾಗಿ ಮಾಡಿದ್ದೇವೆ. ನಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿಮ್ಮನ್ನು ಸೋಲಿಸಲು ಸಿದ್ಧರಿದ್ದೇವೆ ಎಂದು ಟಾಂಗ್​ ನೀಡಿದರು.

ಚಕ್ರವರ್ತಿ ಸೂಲಿಬೆಲೆ ಭಾಷಣ

ಯೋಗ್ಯತೆ ಇಲ್ಲದವರು ಅಧಿಕಾರಕ್ಕೆ ಬರುತ್ತಾರೆ ಎಚ್ಚರ!:
ಈ ಬಾರಿ ನರೇಂದ್ರ ಮೋದಿಯನ್ನು ಅಧಿಕಾರದಲ್ಲಿ ಕೂರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಯೋಗ್ಯತೆ ಇಲ್ಲದವರು ಅಧಿಕಾರಕ್ಕೆ ಬರತ್ತಾರೆ. ಅಖಿಲೇಶ್ ಪ್ರಧಾನಮಂತ್ರಿ ಅಭ್ಯರ್ಥಿಯೇ?, ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡು ಬಂಗಲೆ ಬಿಡುವ ಪರಿಸ್ಥಿತಿ ಬಂತು. ಮಮತಾ ಬ್ಯಾನರ್ಜಿ ಪ್ರಧಾನಮಂತ್ರಿ ಅಭ್ಯರ್ಥಿಯೇ?, ಚಿಟ್ ಫಂಡ್ ಹಗರಣದಲ್ಲಿ ಮೋಸ ಮಾಡಿದವರ ಜೊತೆ ಇರುವವರು ಮಮತಾ ಬ್ಯಾನರ್ಜಿಯಾಗಿದ್ದಾರೆ. ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಅಭ್ಯರ್ಥಿಯೇ? ತನ್ನ ರಾಜ್ಯವನ್ನೇ ನಂಬದ ವ್ಯಕ್ತಿಗೆ ಅಧಿಕಾರ ನೀಡೋದಾ? ಒಟ್ಟಾರೆಯಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಯೋಗ್ಯತೆ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂದು ಚಕ್ರವರ್ತಿ ಹೇಳಿದರು.

Intro:ಬೈ ಎಲೆಕ್ಷನ್ ನಲ್ಲಿ ಆದ ಮಾಫಿಯಕ್ಕೆ, ಮೇನ್ ಎಲೆಕ್ಷನ್ ನಲ್ಲಿ ಮಾಫಿಇಲ್ಲ ಮತ್ತು ಬಳ್ಳಾರಿಯಲ್ಲಿ ಈ ಹಿಂದೆ ಒಂದು ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಪಾಪವಿದೆ ಆದ್ರೇ ನರೇಂದ್ರ ಮೋದಿಗೆ ಇನ್ನೊಮ್ಮೆ ಕಮಲ ಕೊಟ್ಟು ಪ್ರಯಾಚಿತ್ತ ಮಾಡಿಕೊಳ್ಳಲು ಹೊಣೆಗಾರಿಕೆಯು ಬಳ್ಳಾರಿ ಜನರ ಮೇಲಿದೆ ಎಂದು ಚಕ್ರವರ್ತಿ ಸೂಲೆಬೆಲೆ ಹೇಳಿದರು.


Body:ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲಾ ಮೈದಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವೇದಿಕೆಯಲ್ಲಿ ನಡೆದ ಟೀಮ್ ಮೋದಿ ನರೇಂದ್ರ ಮೋದಿ ಅವರ ಐದು ವರ್ಷದ ಅಭಿವೃದ್ಧಿ ಕಾರ್ಯಗಳ ಪರಿಚಯ ದೇಶಕ್ಕಾಗಿ ಮೋದಿ , ಮೋದಿಗಾಗಿ ನಾವು ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲೆಬೆಲೆ ಮಾತನಾಡಿದ ಅವರು ಕರ್ನಾಟಕದಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಹೊಂದಾದ ಕೂಡಲೇ ಸಿ.ಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ಪತ್ರ ಬರೆದರು ಕರ್ನಾಟಕದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು, ರಾಹುಲ್ ಗಾಂಧೀ ನಿಮ್ಮ ಅಜ್ಜಿ ಇಂದಿರಾಗಾಂಧಿಯನ್ನು ಕರ್ನಾಟಕದಿಂದ, ನಿಮ್ಮ ತಾಯಿ ಸೋನಿಯ ಗಾಂಧಿಯನ್ನು ಬಳ್ಳಾರಿಯಿಂದ ಜಯಶೀಲರನ್ನಾಗಿ ಮಾಡಿದ್ದೇವೆ. ನಾವು ಮಾಡಿದ ಪಾಪಕ್ಕೆ ಪ್ರಾಯಚಿತ್ತ ಪಡೆಯಲು ನಿಮ್ಮನ್ನು ಸೋಲಿಸಲು ಸಿದ್ದರಿದ್ದೇವೆ ಎಂದರು. ಟೀಮ್ ಮೋದಿ ತಂಡದಿಂದ ರಾಹುಲ್ ಗಾಂಧಿಗೆ ಪತ್ರ ಬರೆಯಿತ್ತು ಕರ್ನಾಟಕದ 28 ಕ್ಷೇತ್ರದಲ್ಲಿ ಎಲ್ಲಿಯಾದರೂ ಚುನಾವಣಾಗೆ ಸ್ಪರ್ಧೆ ಮಾಡಿ, ನಿಮ್ಮನ್ನು ಸೋಲಿದುವ ಕೆಲಸವನ್ನು ಟೀಮ್ ಮೋದಿ ಕೆಲಸ ಮಾಡುತ್ತೇ ಎಂದರು.

ಕರ್ನಾಟಕಕ್ಕೆ ಬರೋಲ್ಲ, ವಾಹಿನಾಡಿಗೆ ಹೋಗತ್ತಿನಿ ಅಂದ ರಾಹುಲ್ ಗಾಂಧಿ ಸೋಲಿನ ಭಯ ಉಂಟಾಯಿತ್ತು.
ತನ್ನ ಜನಾಂಗದವರು ಜಯಶೀಲರನ್ನಾಗಿ ಮಾಡುತ್ತಾರೆ ಎಂದು
ಅಲ್ಲಿ ಸ್ಪರ್ಧೆ ಮಾಡಲು ಹೋರಟರು. ಆದರಿಂದ ಬಳ್ಳಾರಿಯ ಜನರು ಮತ್ತೊಮ್ಮೆ ನರೇಂದ್ರ ಮೋದಿ ಕೈಯಲ್ಲಿ ಕಮಲ‌ ಕೊಡಬೇಕೆಂದು ಚಕ್ರವರ್ತಿ ತಿಳಿಸಿದರು.

ನರೇಂದ್ರ ಮೋದಿಗೆ 300 ಕ್ಕಿಂತ ಹೆಚ್ಚು ಸ್ಥಾನಗಳು ಲಭಿಸುತ್ತೆ ಎಂದರು.

ಅಂದು ನರೇಂದ್ರ ಮೋದಿಗೆ ಬಹಮತ ಬಂದ್ರೇ ದೇಶ ಬಿಡತ್ತಿನಿ ಅಂದ ಜಿ.ಟಿ.ದೇವೆಗೌಡ, ಇಂದು ಅವರ ಮಗ ಜಿ.ಟಿ ರೇವಣ್ಣ ಮೋದಿ ಪ್ರಧಾನಿಯಾದ್ರೇ ರಾಜಕೀಯ್ಇಂದ ನಿವೃತ್ತಿ ಹೊಂದುವೆ ಎಂದು ಹೇಳಿದವರು ಇವರಿಬ್ಬರು ತಂದೆ ಮತ್ತು ಮಗ.
ಮೇ 23 ರಂದು ನರೇಂದ್ರ ಮೋದಿ ವಾಪಾಸ್ ಪ್ರಧಾನಿಯಾಗುವುದನ್ನು ಕಣ್ಣರಾ ನೋಡತ್ತಿರಾ, ನೀವು ಇರ್ತಿರಿ, ನಾವು ಸಹ ಇರ್ತಿವಿ ಎಂದು ಚಕ್ರವರ್ತಿ ತಿಳಿಸಿದರು.

ಯೋಗ್ಯತೆ ಇಲ್ಲದವರು ಅಧಿಕಾರಕ್ಕೆ ಬರತ್ತಾರೆ ಎಚ್ಚರ :

ಈ ಬಾರಿ ನರೇಂದ್ರ ಮೋದಿ ಯನ್ನು ಅಧಿಕಾರದಲ್ಲಿ ಕುರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಯಾರು ಅಧಿಕಾರಕ್ಕೆ ಬರ್ತಾರೆ
ಹೇಳಿ ನೋಡೋಣ - ರಾಹುಲ್ ಗಾಂಧಿ ಐದನೇ ಕ್ಲಾಸ್ ಓದುವ ಮಗು ಸೆಕೆಂಡ್ ಪಿಯುಸಿ ಕ್ಲಾಸ್ ಗೆ ಬಂದ್ ಕುಂತಿರುವೆ ಹಾಗೆ ಆಗುತ್ತೇ, ಅದರ ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದರು.

ಯಾರ್ ? ಪ್ರಧಾನಿ ಆಗಬೇಕು :

ಅಖಿಲೇಶ್ ಪ್ರಧಾನ ಮಂತ್ರಿ ಅಭ್ಯರ್ಥಿಯೇ ? , ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡು ಬಂಗಲೆ ಬಿಡುವ ಪರಿಸ್ಥಿತಿ ಬಂತು, ಸೂಪರಿಂಕೊರ್ಟ್ ನಿಂದ ಆದೇಶ ಬರುತ್ತೇ ಮನನ ಮೊದಲು ಹೊರಗಡೆ ಹೋಗಿ ಅಂತ, ಆದ್ರೇ ಈ ಬಂಗಲೆಯಲ್ಲಿನ ಇದ್ದ ಟೈಲ್ಸ್ಸ್ , ನಲ್ಲಿ, ಬಲ್ಬ್ ಗಳನ್ನು ಕಿತ್ತುಕೊಂಡು ಹೋದವರು.


ಮಮತ ಬ್ಯಾನರ್ಜಿ ಪ್ರಧಾನಮಂತ್ರಿ ಅಭ್ಯರ್ಥಿಯೇ ?

ಚಿಟ್ ಫಂಡ್ ಹಗರಣದಲ್ಲಿ ಮೋಸ ಮಾಡಿದವರು ಜೊತೆಯಲ್ಲಿ ಇರುವವರು ಮಮತ ಬ್ಯಾನರ್ಜಿಯಾಗಿದ್ದಾರೆ.

ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಅಭ್ಯರ್ಥಿಯೇ ?
ತನ್ನ ರಾಜ್ಯವನ್ನೇ ನಂಬದ ವ್ಯಕ್ತಿಗೆ ನೀಡೋದ.


ಒಟ್ಟಾರೆಯಾಗಿ ನೋಡೋದ್ದ್ರೇ ನಮ್ಮ ಎದುರಿಗೆ ಇರುವ ಏಕೈಕ ಪ್ರಧಾನಮಂತ್ರಿ ಸ್ಥಾನಕ್ಕೆ ಯೋಗ್ಯತೆ ಇರುವುದೇ ನರೇಂದ್ರ ಮೋದಿಗೆ ಮಾತ್ರ ಎಂದು ಚಕ್ರವರ್ತಿ ಹೇಳಿದರು.


ನರೇಂದ್ರ ಮೋದಿ ಪ್ರಧಾನ ಸೇವಕ:

ಬಳ್ಳಾರಿ ಅವರಿಗೆ ಅಪರೂಪ ಭಾಗ್ಯವಿದೆ. ಬೈ ಎಲೆಕ್ಷನ್ ಸ್ಥಾನವನ್ನು ನೀಡಿಲ್ಲ, ಕಮಲವನ್ನು ಕಿತ್ತುಕೊಂಡಿದ್ದಿರಾ. ಅದಕ್ಕೆ ಇಲ್ಲಿ ಒಂದು ಉದಾಹರಣೆ ನೀಡಿದ ಚಕ್ರವರ್ತಿ ದೊಡ್ಡದು ಹೋಟಲ್ ಗೆ ಅಲ್ಲಿನ ಸೇವಕ ನೀವು ಕೇಳಿದ ಆಹಾರವನ್ನು ತಂದು ಕೊಡತ್ತಾನೆ, ತಿದ್ದ ನಂತರ ಸೇವಕ ಬಿಲ್ ಕೊಡತ್ತಾನೆ, ಅದನ್ನು ಪಾವತಿ ಮಾಡತ್ತಿರಾ, ಅದರ ಜೊತೆಗೆ ಸೇವಕನಿಗೆ ಹೆಚ್ಚಿನ ಟಿಫ್ಸ್ ನೀಡತ್ತಿರಾ 25, 50, 100 ರೂಪಾಯಿ ನೀಡತ್ತೀರಾ, ನರೇಂದ್ರ ಮೋದಿ ಪ್ರಧಾನ ಸೇವಕ, ಅವರು ಐದು ವರ್ಷದಲ್ಲಿ ಮಾಡಿದ ಸಾಧನೆ ಮಾಡಿದಕ್ಕೆ ಬಿಲ್ ಕಟ್ಟಬೇಕು , 272 ಸೀಟ್ ಗಳು ನೀಡಿಲೇ ಬೇಕು ಅದು ಬಿಲ್ ಆಗುತ್ತೆ, ಜೊತೆಗೆ ನಿನ್ನ ಸೇವೆ ಇಷ್ಟ ಆಗಿದೆ ಅಂತ 25 ಟಿಫ್ಸ್ ಆಗಿ ನೀಡಬೇಕು, ಬಿಲ್ ಕೊಡ ಕೆಲಸ ಉಳುದವರು ನೀಡತ್ತಾರೆ, ಬಳ್ಳಾರಿ ಜನತೆ ಕಳೆದ ಬಾರಿ ಬೈ ಎಲೆಕ್ಷನ್ ನಲ್ಲಿ ನೀವ್ ಕಿತ್ತುಕೊಂಡಿದ್ದರಿಂದ ಈ ಬಾರಿ ಟಿಫ್ಸ್ ಕೊಡಬೇಕೆಂದು ಜನರಿಗೆ ಚಕ್ರವರ್ತಿ ತಿಳಿಸಿದರು.


ನರೇಂದ್ರ ಮೋದಿಗೆ ಏಕೆ ? ಓಟು ನೀಡಬೇಕು :


ಚಕ್ರವರ್ತಿ ಹತ್ತಾರು ಪ್ರಶ್ನೆಗಳನ್ನು ಕೇಳಿದರು.
ಮೋದಿ ದೇಶದ್ರೋಹಿನಾ, ಮೋದಿ ಕೆಕಸ ಮಾಡಿಲ್ಲ ನಾ ಮೈಗಲ್ಲಾ ರಾ, ಮೋದಿ ತಮ್ಮ ಸಂಭಂದಿಕರನ್ನು ರಾಜಕೀಯ ಕರೆತಂದಿದ್ದಾರೆಯೇ, ಮೋದಿ ಭಾರತದ ಘನತೆ ಗೌರವಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆಯೇ, ಮೋದಿ ವಿದೇಶಕ್ಜೆ ಹೋದಾಗ ಭಾರತವನ್ನು ಬೈದಿದ್ದಾರಯೇ ಇನ್ನಿತರ ಪ್ರಶ್ನೆಗಳಿಗೆ ಸಾರ್ವಜನಿಕರು ಇಲ್ಲ ಇಲ್ಲ ಎನ್ನುವ ಉತ್ತರ ನೀಡಿದರು‌‌.

ಚಕ್ರವರ್ತಿ ಕಾರ್ಯಕ್ರಮಕ್ಕೆ ಒಂದು ತಾಸು ತಡ:

ಸಂಜೆ 6 ಗಂಟೆ 45 ನಿಮಿಷಕ್ಕೆ ಚಕ್ರವರ್ತಿ ಸೂಲೆಬೆಲೆ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲು ಬರಬೇಕಿತ್ತು ಆದ್ರೇ ಒಂದು ಕಾಲು ತಾಸು ತಡವಾಗಿ ( 8 ಗಂಟೆಗೆ ಬಂದ್ರು) ಜನರು ಕಾದು ಕಾದು ಸುತ್ತು ಹೊಡೆದರು. ಈ‌ ಸಮಯದಲ್ಲಿ ನರೇಂದ್ರ ಮೋದಿಯ ಅವರ ಐದು ವರ್ಷದ ಸಾಧನೆಯನ್ನು ಪ್ರಾಜೆಕ್ಟ್ರ್ ಮೂಲಕ ಸಾರ್ವಜನಿಕರಿಗೆ ಬಿತ್ತರಿಸಿದರು.


Conclusion:ಒಟ್ಟಾರೆಯಾಗಿ ಈ ಕ್ರಮದಲ್ಲಿ ವೇದಿಕೆ ಮೇಲೆ



ವೇದಿಕೆಯ ಮುಂಭಾಗದಲ್ಲಿ ಜಿ.ಸೋಮಶೇಖರ್ ರೆಡ್ಡಿ, ಮಹೇಂದ್ರ ಮಣಿಪಾಲ್ , ಇನ್ನಿತರ ಬಿಜೆಪಿಯ ನಾಯಕರು

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.