ಬೆಳಗಾವಿ: ನಿರಂತರ ಶೋಧ ಕಾರ್ಯಾಚರಣೆ ನಂತರ ನಿನ್ನೆ ತನ್ನ ಇಬ್ಬರು ಮಕ್ಕಳೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿ ಪತ್ತೆಯಾಗಿದ್ದಾನೆ.
ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಉಸ್ಮಾನ್ ಸಾಬ್ ಅತ್ತಾರ್ (52) ಮೃತ ದುರ್ದೈವಿ. ಉಸ್ಮಾನ್ ನಿನ್ನೆ ತನ್ನ ಇಬ್ಬರು ಮಕ್ಕಳೊಂದಿಗೆ ಮೀನು ಹಿಡಿಯಲು ಮಲಪ್ರಭಾ ನದಿಗೆ ತೆರಳಿದ್ದರು. ಈ ವೇಳೆ ತೆಪ್ಪ ಮುಳುಗಡೆ ಆಗಿತ್ತು. ಇಬ್ಬರು ಮಕ್ಕಳು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದರು.
ಆದ್ರೆ, ಉಸ್ಮಾನ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ತಾಲೂಕು ಆಡಳಿತ ಹಾಗೂ ಎಸ್ಡಿಆರ್ಎಫ್ ತಂಡದ ಸಿಬ್ಬಂದಿ ವ್ಯಕ್ತಿಯ ಹುಡುಕಾಟಕ್ಕೆ ನಿರಂತರ ಶೋಧ ಕಾರ್ಯಾಚರಣೆ ನಡೆಸಿದ್ದರು. ದುರದೃಷ್ಟವಶಾತ್ ಉಸ್ಮಾನ್ ಮೃತದೇಹ ಪತ್ತೆ ಆಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.