ETV Bharat / city

'ಮಲಪ್ರಭಾ' ಅವಾಂತರ: ಮೀನು ಹಿಡಿಯಲು ಹೋದವ ಶವವಾಗಿ ಪತ್ತೆ

author img

By

Published : Jun 19, 2021, 4:46 PM IST

ಸವದತ್ತಿ ತಾಲೂಕು ಆಡಳಿತ ಹಾಗೂ ಎಸ್​ಡಿಆರ್​ಎಫ್ ತಂಡದ ಸಿಬ್ಬಂದಿ ಮಲಪ್ರಭಾ ನದಿಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಹುಡುಕಾಟಕ್ಕೆ ನಿರಂತರ ಶೋಧ ಕಾರ್ಯಾಚರಣೆ‌ ನಡೆಸಿದ್ದರು. ದುರದೃಷ್ಟವಶಾತ್ ಉಸ್ಮಾನ್ ಮೃತದೇಹ ಪತ್ತೆ ಆಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

yakkundi-fisherman-dead-body-found
ಮೀನು ಹಿಡಿಯಲು ಹೋದವ ಶವವಾಗಿ ಪತ್ತೆ

ಬೆಳಗಾವಿ: ನಿರಂತರ ಶೋಧ ಕಾರ್ಯಾಚರಣೆ ನಂತರ ನಿನ್ನೆ ತನ್ನ ಇಬ್ಬರು ಮಕ್ಕಳೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿ ಪತ್ತೆಯಾಗಿದ್ದಾನೆ.

ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಉಸ್ಮಾನ್ ಸಾಬ್ ಅತ್ತಾರ್ (52) ಮೃತ ದುರ್ದೈವಿ. ಉಸ್ಮಾನ್ ನಿನ್ನೆ ತನ್ನ ಇಬ್ಬರು ಮಕ್ಕಳೊಂದಿಗೆ ‌ಮೀನು ಹಿಡಿಯಲು ಮಲಪ್ರಭಾ ನದಿಗೆ ತೆರಳಿದ್ದರು. ಈ ವೇಳೆ ತೆಪ್ಪ ಮುಳುಗಡೆ ಆಗಿತ್ತು. ಇಬ್ಬರು ಮಕ್ಕಳು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದರು.

ಆದ್ರೆ, ಉಸ್ಮಾನ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ತಾಲೂಕು ಆಡಳಿತ ಹಾಗೂ ಎಸ್​ಡಿಆರ್​ಎಫ್ ತಂಡದ ಸಿಬ್ಬಂದಿ ವ್ಯಕ್ತಿಯ ಹುಡುಕಾಟಕ್ಕೆ ನಿರಂತರ ಶೋಧ ಕಾರ್ಯಾಚರಣೆ‌ ನಡೆಸಿದ್ದರು. ದುರದೃಷ್ಟವಶಾತ್ ಉಸ್ಮಾನ್ ಮೃತದೇಹ ಪತ್ತೆ ಆಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.