ಉಳುಮೆ ವೇಳೆ ಹೆದರಿದ ಜೋಡೆತ್ತು.. ಬಾವಿಗೆ ಬಿದ್ದು ರಾಸುಗಳು ದಾರುಣ ಸಾವು

author img

By

Published : Oct 3, 2021, 5:14 PM IST

ಎತ್ತುಗಳ ಕಳೇಬರ
ಎತ್ತುಗಳ ಕಳೇಬರ ()

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಸ್ತವಾಡದ ರೈತ ಲಗಮಣ್ಣ ಹುಕ್ಕೇರಿ ಎಂಬುವರಿಗೆ ಸೇರಿದ ಜೋಡೆತ್ತುಗಳು ಬಾವಿಗೆ ಬಿದ್ದು ಸಾವಿಗೀಡಾಗಿವೆ.

ಬೆಳಗಾವಿ: ಕೃಷಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಬೆದರಿದ ಜೋಡೆತ್ತುಗಳು ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ.

ರಾಯಭಾಗ ತಾಲೂಕು ಬಸ್ತವಾಡ ಗ್ರಾಮದ ರೈತ ಲಗಮಣ್ಣ ಹುಕ್ಕೇರಿ ಎಂಬುವರಿಗೆ ಸೇರಿದ ಜೋಡೆತ್ತುಗಳು ಸಾವಿಗೀಡಾಗಿವೆ. ಅಂದಾಜು 2 ಲಕ್ಷ ರೂ. ಮೌಲ್ಯದ ಜೋಡೆತ್ತುಗಳನ್ನು ಕಳೆದುಕೊಂಡು ರೈತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ.

ಸ್ಥಳೀಯರು ಹರಸಾಹಸಪಟ್ಟು ಎತ್ತುಗಳ ಕಳೇಬರವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.