ETV Bharat / city

ಬೆಳಗಾವಿ ಯುವಕನ ಕೊಲೆ ಪ್ರಕರಣ: ಐವರ ಬಂಧನ

author img

By

Published : Jul 3, 2022, 12:38 PM IST

ಬೆಳಗಾವಿ ಮಜಗಾವಿ ಪ್ರದೇಶದಲ್ಲಿ ಜೂ.30ರಂದು ಯಲ್ಲೇಶಪ್ಪ ಶಿವಾಜಿ ಕೋಲಕಾರ್ ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.

belgaum-youth-murder-case-five-arrested
ಬೆಳಗಾವಿ ಯುವಕನ ಕೊಲೆ ಪ್ರಕರಣ: ಐವರ ಬಂಧನ

ಬೆಳಗಾವಿ: ನಗರದ ಮಜಗಾವಿ ಪ್ರದೇಶದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಬಾಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಮಜಗಾವಿಯ ಅಂಬೇಡ್ಕರ್ ಗಲ್ಲಿಯ ಸಂದೀಪ ಕೋಲಕಾರ್ (32), ಕುಮಾರ, ಸಂತೋಷ ರಾಜಂಗಳಿ (19), ಪ್ರದೀಪ ಕೋಲಕಾರ್ (24), ಕಲ್ಲೇಶ್ವರ ನಗರದ ರವಿ ಗಂಗಪ್ಪಾ ಗುಳ್ಳೆದಕೊಪ್ಪ (25), ಶಿವಕುಮಾರ ಮಾನೆ (22) ಬಂಧಿತರು.

ಘಟನೆಯ ಹಿನ್ನೆಲೆ: ಮಹಿಳೆಯನ್ನು ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಮಜಗಾವಿ ಪ್ರದೇಶದಲ್ಲಿ ಜೂ.30ರಂದು ಅಂಬೇಡ್ಕರ್ ಗಲ್ಲಿಯ ಯಲ್ಲೇಶಪ್ಪ ಶಿವಾಜಿ ಕೋಲಕಾರ್ (37) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಯಲ್ಲೇಶ್ ಕೋಲಕಾರ್ ಅವರ ಸಹೋದರಿ ಸವಿತಾ ಮೇತ್ರಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಎರಡು ದಿನಗಳಲ್ಲಿ ಕೊಲೆ ಮಾಡಿದ ಆರೋಪದಡಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಹರಿತವಾದ ಕೊಡ್ಲಿ, ತಲ್ವಾರ್, ಚಾಕು, ಕೊಯ್ತಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಶಸ್ತ್ರಸಜ್ಜಿತ ಎಲ್​ಇಟಿ ಉಗ್ರರ ಹಿಡಿದು ಸೇನೆಗೆ ಒಪ್ಪಿಸಿದ ಜನರು; ₹2 ಲಕ್ಷ ಬಹುಮಾನ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.