ETV Bharat / business

ಈಗಿನ ಕೋವಿಡ್​ ಪರಿಸ್ಥಿತಿಗೆ ದೂರದೃಷ್ಟಿ ನಾಯಕತ್ವದ ಕೊರತೆಯೇ ಕಾರಣ: RBI ಮಾಜಿ ಗವರ್ನರ್​

author img

By

Published : May 4, 2021, 5:50 PM IST

ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದ ಭಾರತವು ಬಳಲುತ್ತಿದೆ. ನಿತ್ಯ ಹೊಸ ಪ್ರಕರಣಗಳು 3,50,000 ಕ್ಕಿಂತ ಹೆಚ್ಚಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಡುವಿಕೆ ತಡೆಯಲು ಕಟ್ಟುನಿಟ್ಟಾದ ಲಾಕ್​ಡೌನ್​ ಜಾರಿಗೆ ಒತ್ತಡ ಹೇರಲಾಗುತ್ತಿದೆ. ಕಳೆದ ವರ್ಷ ಆರ್ಥಿಕ ವಿನಾಶದ ನಂತರ ಇದೇ ರೀತಿಯ ಕಾರ್ಯತಂತ್ರದ ಕ್ರಮವನ್ನು ಸರ್ಕಾರ ತಪ್ಪಿಸಲು ಯತ್ನಿಸುತ್ತಿದೆ.

Raghuram Rajan
Raghuram Rajan

ನವದೆಹಲಿ: ಕಳೆದ ವರ್ಷದ ಕೋವಿಡ್-19 ಪ್ರಥಮ ಅಲೆಯ ಬಳಿಕದ ಎರಡನೇ ಅಲೆ ಭಾರತದಲ್ಲಿ ಅಗಾದ ಉಲ್ಬಣ ಸೃಷ್ಟಿಸಿದೆ. ಇದು ದೂರದೃಷ್ಟಿಯ ಹಾಗೂ ನಾಯಕತ್ವ ಕೊರತೆಯನ್ನು ಬಹಿರಂಗಪಡಿಸಿದೆ ಎಂದು ಕೇಂದ್ರೀಯ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ನೀವು ಜಾಗರೂಕರಾಗಿ ಇದ್ದರೆ, ನೀವು ಎಚ್ಚರವಾಗಿ ಇದ್ದರೆ, ಇದು ಇನ್ನೂ ಮುಗಿದಿಲ್ಲ ಎಂಬುದನ್ನು ನೀವು ಗುರುತಿಸಬೇಕಾಗಿತ್ತು ಎಂದು ರಾಜನ್ ಅವರು ಬ್ಲೂಮ್‌ಬರ್ಗ್ ಟೆಲಿವಿಷನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಪಂಚದ ಉಳಿದ ಭಾಗಗಳಲ್ಲಿ ಅದರಲ್ಲಿ ಬ್ರೆಜಿಲ್​ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಾದರೂ ಗಮನ ಹರಿಸಸಿದರೇ ವೈರಸ್ ಮರಳಿ ಬರುತ್ತದೆ ಮತ್ತು ರೂಪಾಂತರಗಳಲ್ಲಿ ಕಂಡು ಬರುತ್ತದೆ ಎಂಬುದು ಅಂದಾಜಿಸಬಹುದಿತ್ತು ಎಂದರು.

ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದ ಭಾರತವು ಬಳಲುತ್ತಿದೆ. ನಿತ್ಯ ಹೊಸ ಪ್ರಕರಣಗಳು 3,50,000 ಕ್ಕಿಂತ ಹೆಚ್ಚಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಡುವಿಕೆ ತಡೆಯಲು ಕಟ್ಟುನಿಟ್ಟಾದ ಲಾಕ್​ಡೌನ್​ ಜಾರಿಗೆ ಒತ್ತಡ ಹೇರಲಾಗುತ್ತಿದೆ. ಕಳೆದ ವರ್ಷ ಆರ್ಥಿಕ ವಿನಾಶದ ನಂತರ ಇದೇ ರೀತಿಯ ಕಾರ್ಯತಂತ್ರದ ಕ್ರಮವನ್ನು ಸರ್ಕಾರ ತಪ್ಪಿಸಲು ಯತ್ನಿಸುತ್ತಿದೆ.

ಕಳೆದ ವರ್ಷ ಪ್ರಕರಣಗಳ ಕುಸಿತದ ನಂತರ, ವೈರಸ್ ನಮಗೆ ನೀಡಬಹುದಾದ ಕೆಟ್ಟದ್ದನ್ನು ನಾವು ಸಹಿಸಿಕೊಂಡಿದ್ದೇವೆ. ಆ ತೃಪ್ತಿ ನಮಗೆ ನೋವುಂಟು ಮಾಡಿದೆ ಎಂದು ಇಂಟರ್​ನ್ಯಾಷನಲ್ ಹಣಕಾಸು ನಿಧಿಯ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಈಗಿನ ಚಿಕಾಗೊ ವಿವಿಯ ಹಣಕಾಸು ಪ್ರಾಧ್ಯಾಪಕ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.