ETV Bharat / business

ಡೆಡ್ಲಿ ವೈರಸ್​ ನಿರ್ಮೂಲನೆಗೆ ದೇಶಾದ್ಯಂತ ಕೈಗೊಂಡ ಕ್ರಮಗಳಿವು..

author img

By

Published : Mar 4, 2020, 9:55 PM IST

ಭಾರತೀಯ ಉದ್ಯಮಿಗಳು ಕೊರೊನಾ ಹಬ್ಬುವಿಕೆಯ ಬಗ್ಗೆ ಮುನ್ನೆಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಮಹೀಂದ್ರ ಗ್ರೂಪ್​ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು, 'ವರ್ಕ್​ ಫ್ರಮ್​ ಹೋಮ್​ನಂತಹ ನಡೆಗಳನ್ನು ಇನ್ನೂ ಹೆಚ್ಚಿಸಬೇಕು. ಸೋಂಕು ಉಲ್ಬಣ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಪ್ರಯಾಣ ಮಾಡುವುದನ್ನು ಕಡಿಮೆ ಮಾಡಿ. ಹೊರ ಹೋಗುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ' ಎಂದು ಸಂದೇಶ ರವಾನಿಸಿದ್ದಾರೆ.

Coronavirus
ಕೊರೊನಾ

ನವದೆಹಲಿ: ಮಾರಣಾಂತಿಕ ಕೊರೊನಾ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ 3,000ಕ್ಕೂ ಅಧಿಕ ಜನರನ್ನು ಬಲಿ ಪಡೆದುಕೊಂಡಿದ್ದಾರೆ. ಜೊತೆಗೆ ಜನ ಜೀವನದ ನಿತ್ಯದ ಚಟುವಟಿಕೆಗಳಿಗೂ ತೀವ್ರ ಅಡ್ಡಿ ಉಂಟುಮಾಡುತ್ತಿದೆ.

ಜರ್ಮನಿ​ ಕೂಡ ಕೋವಿಡ್​ ಸೋಂಕಿಗೆ ಸಿಲುಕಿದ್ದು, ಅಲ್ಲಿನ ಆರೋಗ್ಯ ಸಚಿವಾಲಯವು ಔಷಧಿಗಳ ರಫ್ತು ವಹಿವಾಟನ್ನು ನಿಷೇಧಿಸಿ ನಾಗರಿಕರಿಗೆ ಅಗತ್ಯವಿರುವಷ್ಟು ಮಾಸ್ಕ್​ ಮತ್ತು ಗ್ಲೌಸ್​ಗಳ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.

ಫೇಸ್​ಬುಕ್​ನಿಂದ ಉಚಿತ ಜಾಹೀರಾತು:

ವಿಶ್ವ ಆರೋಗ್ಯ ಸಂಸ್ಥೆಗೆ ಉಚಿತ ಜಾಹೀರಾತು ನೀಡುವ ಮೂಲಕ ಸಾಮಾಜಿಕ ಜಾಲತಾಣವು ವೈರಸ್ ಸಂಬಂಧಿತ ತಪ್ಪು ಮಾಹಿತಿಯನ್ನು ತಡೆಯುವ ಪ್ರಯತ್ನವನ್ನು ಚುರುಕುಗೊಳಿಸುತ್ತಿದೆ ಎಂದು ಫೇಸ್​ಬುಕ್​ ಸಿಇಒ ಮಾರ್ಕ್ ಝುಕರ್​ಬರ್ಗ್ ಹೇಳಿದ್ದಾರೆ.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ಝುಕರ್​ಬರ್ಗ್​, ಕಂಪನಿಯು ರಾಷ್ಟ್ರೀಯ ಆರೋಗ್ಯ ಸಚಿವಾಲಯಗಳು ಮತ್ತು ಜಾಗತಿಕ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವೈರಸ್ ಬಗ್ಗೆ ಸಮಯೋಚಿತ ಮತ್ತು ನಿಖರವಾದ ಮಾಹಿತಿಯನ್ನು ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಹಾಗೂ ಯುನಿಸೆಫ್ ಜತೆಗೆ ಕೈಜೋಡಿಸಲಿದೆ ಎಂದರು.

ಉದ್ಯಮಿಗಳಿಂದ ಮಾರ್ಗದರ್ಶನ:

ಮಹೀಂದ್ರ ಗ್ರೂಪ್​ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು, 'ವರ್ಕ್​ ಫ್ರಮ್​ ಹೋಮ್​ನಂತಹ ನಡೆಗಳನ್ನು ಇನ್ನೂ ಹೆಚ್ಚಿಸಬೇಕು. ಸೋಂಕು ಉಲ್ಬಣ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಪ್ರಯಾಣ ಮಾಡುವುದನ್ನು ಕಡಿಮೆಮಾಡಿ. ಹೊರ ಹೋಗುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ' ಎಂದು ಸಂದೇಶ ನೀಡಿದ್ದಾರೆ.

ಮತ್ತೋರ್ವ ಉದ್ಯಮಿ ಹರೀಶ್ ಮಾರಿವಾಲಾ, ಸೋಂಕಿನ ಕುರಿತು ತಪ್ಪಾದ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಬಾರದು. ವಾಟ್ಸ್​ಆ್ಯಪ್​ನಲ್ಲಿ ಹರಿದಾಡು ಸಂದೇಶಗಳ ಅಧಿಕೃತ ಮೂಲದ ಬಗ್ಗೆ ಗಮನವಹಿಸಿ ಎಂದಿದ್ದಾರೆ.

ಡೈರಿ ದೈತ್ಯ ಅಮೂಲ್​ ಕೂಡ ಕೋವಿಡ್​-19 ವೈರಾಣು ಬಗ್ಗೆ ಜಾಗೃತಿಯ ಸಂದೇಶವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಸುರಕ್ಷತೆ ಹಾಗೂ ಮುಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದೆ.

ಹ್ಯಾಂಡ್​ವಾಸ್​ ಮಾಡುತ್ತಿರುವ ಅಮೂಲ್​ ಬೇಬಿ ಚಿತ್ರದೊಂದಿಗೆ Better saaf than sorry' ಎಂಬ ಸಂದೇಶದ ಕಾರ್ಟೂನ್​ ಚಿತ್ರ ಹಂಚಿಕೊಂಡಿದೆ.

ಇನ್​ಸೈಡರ್​ ಹೋಂ ಶೋ ರದ್ದು:

ಅಮೆರಿಕದ ಷಿಕಾಗೋದ ಮೆಕ್ಕಾರ್ಮಿಕ್​ನಲ್ಲಿ ಮಾರ್ಚ್​ 14 ರಂದು ನಡೆಯಬೇಕಿದ್ದ ಇನ್​ಸೈಡರ್​ ಹೋಂ ಶೋ 2020ನ್ನು ಇಂಟರ್​ನ್ಯಾಷನಲ್​ ಹೌಸ್ ವೇರ್ಸ್ ಅಸೋಸಿಯೇಷನ್ ಇದೀಗ ರದ್ದುಗೊಳಿಸಿದೆ. ಈ ಪ್ರದರ್ಶನಕ್ಕೆ 130 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಉದ್ಯಮಿಗಳನ್ನು ಸೆಳೆಯುವ ನಿರೀಕ್ಷೆಯಿತ್ತು.

ಸದ್ಯಕ್ಕೆ ಗ್ರಾಹಕರೊಂದಿಗಿನ ಮುಖಾಮುಖಿ ಸಂಪರ್ಕಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಮಾರ್ಕೆಟಿಂಗ್ ತಜ್ಞರು ಮತ್ತು ಕಾರ್ಯನಿರ್ವಾಹಕರು ಎಚ್ಚರಿಸಿದ್ದಾರೆ.

ವರ್ಕ್​ ಇನ್​ ಹೋಮ್​ಗೆ ಆದೇಶ:

ಐಟಿ ಹಬ್‌ನಲ್ಲಿರುವ ರಹೇಜಾ ಮೈಂಡ್‌ಸ್ಪೇಸ್ ಐಟಿ ಪಾರ್ಕ್‌ನಲ್ಲಿರುವ ಕೆಲವು ಐಟಿ ಕಂಪನಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದವು.

ಸೋಂಕು ಹರಡುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಆದೇಶಿಸಿವೆ. ಕೆಲಸ ಮಾಡುತ್ತಿದ್ದ ಕಚೇರಿಯ ಪಕ್ಕದಲ್ಲಿಯೇ ಇರುವ ಬಹುರಾಷ್ಟ್ರೀಯ ಕಂಪನಿಯು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (ಡಬ್ಲ್ಯುಎಚ್‌ಎಫ್) ಪಡೆಯಲು ಸೂಚಿಸಿವೆ.

ಹಲವು ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಂಡಿವೆ. ಎಚ್​ಆರ್​ ಮುಖ್ಯಸ್ಥರು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುವಾಗ ಕೈಗವಸು ಮತ್ತು ಮಾಸ್ಕ್​ ಧರಿಸುವಂತೆ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳಾ ಟೆಕಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೆಚ್ಚಿನ ಪರೀಕ್ಷೆಗಾಗಿ ಪುಣೆಯಲ್ಲಿರುವ ನ್ಯಾಷನಲ್​ ಇನ್​ಸ್ಟಿಟ್ಯೂಟ್ ಆಫ್​ ವೈರಾಲಾಜಿಗೆ (ಎನ್​​ಐವಿ) ಕಳುಹಿಸಲಾಗಿದೆ.

ಮಾಸ್ಕ್​ ದರದಲ್ಲಿ ಭಾರಿ ಏರಿಕೆ:

ಮುಖಗವಸು ಬಳಕೆ, ಆಗಾಗ್ಗೆ ಕೈ ತೊಳೆಯುವ ಮತ್ತು ಸ್ಯಾನಿಟೈಜರ್‌ಗಳ ಬಳಕೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳು ಹೊರಡಿಸುತ್ತಿದ್ದಂತೆ ಈ ವಸ್ತುಗಳ ಮಾರಾಟ ಯಥೇಚ್ಛವಾಗಿದೆ.

ಕೊರೊನಾ ವೈರಸ್ ತಂದಿಟ್ಟ ಪಜೀತಿ

ಅಂಗಡಿಯಲ್ಲಿ ಸ್ಯಾನಿಟೈಜರ್‌ಗಳು ಮತ್ತು ಮುಖವಾಡಗಳ ದಾಸ್ತಾನು ಸಾಕಷ್ಟಿದೆ. ಈ ವಸ್ತುಗಳ ಮಾರಾಟವು ಏರಿಕೆಯಾಗಿದೆ. ಜನರು ಸೋಂಕಿನ ಬಗ್ಗೆ ಜಾಗ್ರತ ಎಚ್ಚರವಾಗಿರುತ್ತಾರೆ ಮತ್ತು ಮುಖವಾಡಗಳು ಮತ್ತು ಸ್ಯಾನಿಟೈಜರ್‌ಗಳನ್ನು ಬಳಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.