ETV Bharat / briefs

29 ಸಾವಿರ ಕನ್ನಡಿಗರ ಸಾವಿಗೆ BSY ಸರ್ಕಾರವೇ ಕಾರಣ: ನಿರ್ದೇಶಕ ಗುರು ಪ್ರಸಾದ್!

author img

By

Published : Jun 7, 2021, 5:28 PM IST

19‌ ನಿಮಿಷದ ವಿಡಿಯೋದಲ್ಲಿ ಗುರುಪ್ರಸಾದ್​ ಯಡಿಯೂರಪ್ಪ ಸರ್ಕಾರ ಹಾಗು ಕೆಲ ಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗುರುಪ್ರಸಾಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Director Guru Prasad
Director Guru Prasad

ಮಠ, ಎದ್ದೇಳು ಮಂಜುನಾಥ, ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವವರು ನಿರ್ದೇಶಕ ಗುರು ಪ್ರಸಾದ್. ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದೆ, ನನಗೆ ಏನಾದರೂ ಆಗಿ ಸಾವನ್ನಪ್ಪಿದರೆ, ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಕೊರೊನಾ ವೈರಸ್​ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಫೇಸ್​ಬುಕ್​ನಲ್ಲಿ ಲೈವ್​ ಬಂದು ಮಾತನಾಡಿರುವ ಗುರು ಪ್ರಸಾದ್, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಇಂದು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅವರು ಅವರ ಮಗನ, ವಂಶದ ಸೇವೆ ಮಾಡುತ್ತಿದ್ದಾರೆ. ಕೊರೊನಾದಿಂದ ಸಾವಿರಾರು ಜನರು ಸತ್ತಿದ್ದಾರೆ. ನಿಮಗೆ ಪಾಪ ಪ್ರಜ್ಞೆ ಇಲ್ಲವೇ? ಎಂದು ಗುರುಪ್ರಸಾದ್​ ಪ್ರಶ್ನಿಸಿದ್ದಾರೆ.

ವೋಟ್​ ಹಾಕಿದ ನಮಗೆ ಬೆಲೆ ಇಲ್ವಾ? ನಾವು ಮೋದಿ ಮುಖ ನೋಡಿಕೊಂಡು ವೋಟ್​ ಹಾಕಿದ್ವಿ. 29 ಸಾವಿರ ಕನ್ನಡಿಗರು ಸತ್ತಿದ್ದಾರೆ. ಅದಕ್ಕೆ ಯಡಿಯೂರಪ್ಪ ಸರ್ಕಾರವೇ ಹೊಣೆ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲ ನಿಮಗೆ ಪ್ರಾಯಶ್ಚಿತ್ತ ಇಲ್ಲವೇ? ಅದು ಹೇಗೆ ಊಟ ಮಾಡುತ್ತೀರಿ? ನೀವೆಲ್ಲ ಭ್ರಷ್ಟಾಚಾರಿಗಳು. ಅದನ್ನು ನಾನು ಕೋರ್ಟ್​ನಲ್ಲಿ ಸಾಬೀತು ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಗುರುಪ್ರಸಾದ್​ ಹೇಳಿದ್ದಾರೆ.

ಯಡಿಯೂರಪ್ಪ ಹೈಕಮಾಂಡ್​ ಬಗ್ಗೆ ಮಾತನಾಡುತ್ತಾರೆ. ಆದರೆ ಕನ್ನಡಿಗರೇ ಹೈಕಮಾಂಡ್​. ನಾವು ಹೇಳ್ತಾ ಇದ್ದೀವಿ. ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಎಲ್ಲ ಕೆಲಸಗಾರರನ್ನು ಒಂದೂವರೆ ವರ್ಷ ಕೂಡಿ ಹಾಕಿದ್ದೀರಿ. ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು, ಯಾರಿಗೂ ಏನೂ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದು ಗುರುಪ್ರಸಾದ್​ ಗುಡುಗಿದ್ದಾರೆ.

ಸಂಸ್ಕಾರಹೀನ, ಭ್ರಷ್ಟಾಚಾರಿ ರಾಜಕಾರಣಿಗಳ ಯುಗ ಮುಗಿಯುತ್ತಿದೆ. ಆದರೆ ಅದು ಸರಿಹೋಗಲು ಇನ್ನೂ 100 ವರ್ಷ ಬೇಕು. ಅದಕ್ಕೆ ಈಗ ಬೀಗ ಹಾಕುತ್ತಿದ್ದೇನೆ. ಪ್ರತಿಯೊಬ್ಬರ ಜೀವನ ಕಾಪಾಡುವುದು ಸರ್ಕಾರದ ಕೆಲಸ. ವೋಟ್​ ಹಾಕುವವರು ದುಡ್ಡು ತೆಗೆದುಕೊಳ್ಳಬೇಡಿ ಎಂದು ಜನರಿಗೆ ಗುರು ಪ್ರಸಾದ್ ಕಿವಿ ಮಾತು ಹೇಳಿದ್ದಾರೆ.

19‌ನಿಮಿಷದ ವಿಡಿಯೋದಲ್ಲಿ ಗುರುಪ್ರಸಾದ್​ ಯಡಿಯೂರಪ್ಪ ಸರ್ಕಾರ ಹಾಗೂ ಕೆಲ ಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗುರುಪ್ರಸಾಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

FACEBOOK Link :
https://m.facebook.com/story.php?story_fbid=552541982430144&id=100030230410893

ETV Bharat Logo

Copyright © 2024 Ushodaya Enterprises Pvt. Ltd., All Rights Reserved.