ETV Bharat / briefs

ಶಿಕ್ಷಕನ ಹತ್ಯೆ ಪ್ರಕರಣ: ಆರೋಪಿಗೆ ಆಶ್ರಯ ನೀಡಿದ ಆತನ ಅಣ್ಣನೂ ಅರೆಸ್ಟ್

author img

By

Published : May 29, 2019, 10:22 PM IST

ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಂ ಜೈನ್​ ಎಂಬುವವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆ ತಂದು ಮಹಜರು ಮಾಡಲಾಯಿತು.

ಕೊಲೆ ನಡೆದ ದಿನ ಧರಿಸಿ ಬಟ್ಟೆಗಳನ್ನು ಮುಚ್ಚಿಟ್ಟದ ಆರೋಪಿಗಳು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಂ ಜೈನ್ ಎಂಬುವವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದವರನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶಿಕ್ಷಕನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆ ತಂದು ಮಹಜರು ನಡೆಸಿದ ಪೊಲೀಸ್​ರು

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಮೇ 28ರಂದು ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಮ್ ಜೈನ್ ಅವರನ್ನು ನಾಗೇಶ್ ಪೂಜಾರಿ ಮತ್ತು ಅಕ್ಕಯ್ಯ ಸೇರಿ ಹತ್ಯೆ ಮಾಡಿದ್ದರು. ಮಂಗಳೂರು ರೈಲ್ವೆ ನಿಲ್ದಾಣದ ಮೂಲಕ ಮುಂಬೈಗೆ ರೈಲಿನಲ್ಲಿ ತಪ್ಪಿಸಿಕೊಂಡು ಹೊರಟವರನ್ನು ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.

ಆರೋಪಿ ನಾಗೇಶ್ ಪೂಜಾರಿ ಅಣ್ಣ ಗಣೇಶ್ ಪೂಜಾರಿ ಮನೆಯಲ್ಲಿ ಆಶ್ರಯ ಪಡೆದಿದ್ದ. ಇನ್ನು ಗಣೇಶ್ ಪೂಜಾರಿ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಕೊಲೆಯ ದಿನ ಧರಿಸಿದ್ದ ಬಟ್ಟೆಗಳನ್ನುಆರೋಪಿಗಳು ಅಡಗಿಸಿಟ್ಟಿದ್ದರು. ಆರೋಪಿಗಳ ಬಂಧನದ ಬಳಿಕ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ಸಂಪೂರ್ಣ ವಿವರವನ್ನು ಬಾಯ್ಬಿಟ್ಟಿದ್ದು. ಗಣೇಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿಸಿದ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದರು.

Intro:ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಂ ಜೈನ್ ಎಂಬವರನ್ನು ಕೊಲೆಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪಿಯೊಬ್ಬನನ್ನು ಕೂಡ ಬೆಳ್ತಂಗಡಿ ಪೊಲೀಸರು ಇಂದು ಬಂಧಿಸಿದ್ದಾರೆ.Body:
ಈ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿತರ ಸಂಖ್ಯೆ ಮೂರಕ್ಕೆ ಏರಿದೆ.
ಮೇ 28 ರಂದು ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಮ್ ಜೈನ್ ನನ್ನು ನಾಗೇಶ್ ಪೂಜಾರಿ ಮತ್ತು ಅಕ್ಕಯ್ಯ ಎಂಬವರು ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ ಬಳಿಕ ಮಂಗಳೂರು ರೈಲ್ವೆ ನಿಲ್ದಾಣದ ಮೂಲಕ ಮುಂಬೈಗೆ ರೈಲಿನಲ್ಲಿ ತೆರಳುತ್ತಿದ್ದಾಗ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಇವರನ್ನು ಪೊಲೀಸರು ಬಂಧಿಸಿದ್ದರು. ಅದಕ್ಕೂ ಮುಂಚೆ ಆರೋಪಿ ನಾಗೇಶ್ ಪೂಜಾರಿಯ ಗಣೇಶ್ ಪೂಜಾರಿ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆರೋಪಿಗಳು ಗಣೇಶ್ ಪೂಜಾರಿ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಕೃತ್ಯದ ಸಂದರ್ಭದಲ್ಲಿ ಬಳಸಿದ ಬಟ್ಟೆಬರೆಗಳನ್ನು ಅಡಗಿಸಿಟ್ಟಿದ್ದ ರು.
ನಿನ್ನೆ ಆರೋಪಿಗಳ ಬಂಧನದ ಬಳಿಕ ಆರೋಪಿಗಳ ವಿಚಾರಣೆ ನಡೆಸಿದಾಗ ಈ ವಿಚಾರ ಬಾಯ್ಬಿಟ್ಟಿದ್ದು ಪೊಲೀಸರು ಇಂದು ಪೂಜಾರಿಯ ಅಣ್ಣ ಗಣೇಶ್ ಪೂಜಾರಿ ಬಂದಿಸಿ ಅವರ ಮನೆಯಲ್ಲಿದ್ದ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಮತ್ತು ಬಟ್ಟೆಬರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿನ್ನೆ ಬಂಧಿಸಲಾದ ಆರೋಪಿಗಳಾದ ನಾಗೇಶ್ ಪೂಜಾರಿ ಮತ್ತು ಡೀಕಯ್ಯ ಅವರನ್ನು ಎಂದು ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದರು.
Reporter- vinodpudu

         Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.