ETV Bharat / briefs

ಗಂಭೀರ್​ ಒಬ್ಬ ಅವಿದ್ಯಾವಂತ... ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ

author img

By

Published : May 25, 2019, 6:31 PM IST

ಪುಲ್ವಾಮ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವ ಸಂಬಂಧ ತೀರಾ ಹಳಸಿದ್ದು, ಇದು ರಾಜಕೀಯವನ್ನು ದಾಟಿ ಕ್ರೀಡೆಯನ್ನು ಆವರಿಸಿಕೊಂಡಿದೆ.

afridi

ಲಾಹೋರ್​: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಮತ್ತೆ ಗಂಭೀರ್​ ವಿರುದ್ಧ ಸಿಡಿದಿದ್ದು, ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್​ನಲ್ಲಿ ಆಡಬಾರದು ಎಂಬ ಮಾತಿಗೆ ಕಿಡಿಕಾರಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವ ಸಂಬಂಧ ತೀರಾ ಹಳಸಿದ್ದು, ಇದು ರಾಜಕೀಯವನ್ನು ದಾಟಿ ಕ್ರೀಡೆಯನ್ನು ಆವರಿಸಿಕೊಂಡಿದೆ.

ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಭಾರತ ಮಾಜಿ ಕ್ರಿಕೆಟಿಗ ಗಂಭೀರ್,​ ಮುಂಬರುವ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಬಾರದು ಎಂದಿದ್ದರು. ಅದೇ ಮಾತನ್ನು ಅವರು ಇಂದಿಗೂ ಪ್ರತಿಪಾದಿಸಿಕೊಂಡೇ ಬಂದಿದ್ದಾರೆ.

ಈ ವೇಳೆ ಆಫ್ರಿದಿ ಹಾಗೂ ಗಂಭೀರ್​ ನಡುವೆ ಟ್ವಿಟರ್​ ವಾರ್​ ಕೂಡ ನಡೆದಿತ್ತು. ಇದೀಗ ಪತ್ರಕರ್ತರೊಬ್ಬರು ಗಂಭೀರ್​ರ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಆಡಬಾರದು ಎಂಬ ಹೇಳಿಕೆ ಪ್ರತಿಕ್ರಿಯೆ ಕೇಳಿದ್ದು, ಇದಕ್ಕುತ್ತರಿಸಿದ ಅಫ್ರಿದಿ" ಗಂಭೀರ್, ಒಬ್ಬ ಪರಿಜ್ಞಾನವಿಲ್ಲದ ವ್ಯಕ್ತಿ,​ ವಿದ್ಯಾವಂತರಾದವರು ಇಂತಹ ಹೇಳಿಕೆ ನೀಡುತ್ತಾರಾ? ಎಂದು ಗಂಭಿರ್​ ಹೇಳಿಕೆಗೆ ಕಿಡಿಕಾಡಿದ್ದಾರೆ.

ಇದಕ್ಕೂ ಮುನ್ನ ಗಂಭೀರ್​ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ " ನಾವು ದೇಶದ ಭಾವನೆಗಳೊಂದಿಗೆ ಆಡುವುದಕ್ಕಾಗುವುದಿಲ್ಲ, ಪಾಕಿಸ್ತಾನದ ವಿರುದ್ಧ ಆಡಿದರೆ ಕೇವಲ 2 ಅಂಕ ಬರಬಹುದು ಅಥವಾ ಹೋಗಬಹುದು ಆದರೆ ಅದಕ್ಕೆ ನಾವು ಮಹತ್ವ ಕೊಡಬೇಕಿಲ್ಲ. ಅಂಕಗಳಿಗಿಂತ ನಮ್ಮ ಸೈನಿಕರ ಪ್ರಾಣಕ್ಕೆ ಹೆಚ್ಚು ಮಹತ್ವನೀಡಬೇಕಿದೆ ಎಂದಿರುವ ಅವರು, ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ ಆಡಲೇ ಬಾರದು ಎಂದು ವಾದಿಸಿದ್ದಾರೆ.

ಒಂದು ವೇಳೆ ಫೈನಲ್​ ತಲುಪಿದರು ಪಾಕಿಸ್ತಾನದ ವಿರುದ್ಧ ಆಡದಿದ್ದರೆ ಇಡೀ ಭಾರತವೇ ತಂಡದ ಪರ ನಿಲ್ಲುತ್ತದೆ ಎಂದಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.