ಬೀದರ್: ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬೀದರ್ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಿಂತ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಎಂಟು ತಿಂಗಳಿನಿಂದ ದೇಶದಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿ ಮತ್ತೊಮ್ಮೆ ನೋಡಬೇಕು ಎಂಬ ಸಂಕಲ್ಪ ಮತದಾರರು ಮಾಡಿಕೊಂಡಿದ್ದಾರೆ. ಜಾತಿ, ಮತ, ಪಂಥ, ಧರ್ಮ, ಹಣ ಹೀಗೆ ಎಲ್ಲವನ್ನು ಮೀರಿ ನಡೆದ ಚುನಾವಣೆ ಇದಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ಪೂರ್ವ ಸಮೀಕ್ಷಾ ಫಲಿತಾಂಶಗಳು ಕೂಡ ಭಾಗಶಃ ಸತ್ಯದ ಹತ್ತಿರದಲ್ಲಿದ್ದಂತಿವೆ. ಇದೆಲ್ಲವನ್ನು ನೋಡಿದರೆ ಅಂದಾಜು 2 ಲಕ್ಷ ಅಂತರದ ಜಯ ಬಿಜೆಪಿಗೆ ಆಗಲಿದೆ ಎಂದು ಭಗವಂತ ಖೂಬಾ ಭರವಸೆ ವ್ಯಕ್ತಪಡಿಸಿದ್ದಾರೆ.ಪಕ್ಷದ ಕಾರ್ಯಕರ್ತರಲ್ಲದೆ ಹಲವಾರು ಕಡೆಯಿಂದ ಮತದಾರರು ಖುದ್ದಾಗಿ ಫೋನ್ ಮಾಡಿ ನನ್ನ ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಇಂದಿನ ಫಲಿತಾಂಶ ನಮ್ಮ ಪಾಲಿಗೆ ಜಯಮಾಲೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.