ETV Bharat / bharat

ಮರ್ಯಾದಾ ಹತ್ಯೆ: ಕೈ, ಕಾಲುಗಳನ್ನು ಕಟ್ಟಿ ತಂದೆ ಎದುರೇ ಜೀವಂತ ಸುಟ್ಟು ಹಾಕಿದ ಸುಪಾರಿ ಕಿಲ್ಲರ್​!

author img

By

Published : Feb 16, 2021, 11:45 AM IST

ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಸ್ವಂತ ಮಗಳನ್ನೇ ಸಜೀವ ದಹನ ಮಾಡಿಸಿರುವ ಘಟನೆ ಉತ್ತರಪ್ರದೇಶದ ಗೋರಖ್​ಪೂರದಲ್ಲಿ ನಡೆದಿದೆ.

Young woman killed, Young woman killed his father, Young woman killed his father in Gorakhpur, Gorakhpur crime news, ಮಗಳನ್ನು ಕೊಂದ ತಂದೆ, ಗೋರಖ್​ಪುರ್​ನಲ್ಲಿ ಮಗಳನ್ನು ಕೊಂದ ತಂದೆ, ಯುವತಿ ಕೊಲೆ, ಗೋರಖ್​ಪುರ್​ ಅಪರಾಧ ಸುದ್ದಿ,
ಮರ್ಯಾದ ಹತ್ಯೆ

ಗೋರಖ್​ಪೂರ್​: ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಹೆತ್ತ ಮಗಳನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಬೆಲ್​ಘಟ್​ ಗ್ರಾಮದಲ್ಲಿ ನಡೆದಿದೆ.

ಬೆಲ್​ಘಟ್​ ನಿವಾಸಿ ರಂಜನಾ ಯಾದವ್​ ಅನ್ಯ ಕೋಮಿನ ಯವಕನೊಬ್ಬನನ್ನು ಪ್ರೀತಿಸಿದ್ದಳು. ಇವರ ಮದುವೆಗೆ ಯುವತಿ ತಂದೆ ಕೈಲಾಶ್​ ಯಾದವ್​ ಅಂಗೀಕರಿಸಲಿಲ್ಲ. ಆ ಯುವಕನೊಂದಿಗೆ ಮಾತನಾಡಬೇಡ ಅಂತಾ ಹೇಳಿದರೂ ಸಹ ರಂಜನಾ ಕೇಳಿರಲಿಲ್ಲ. ಹೀಗಾಗಿ ಆಕೆಯ ಕೊಲೆಗೆ ಹೆತ್ತ ತಂದೆಯೇ ಸ್ಕೆಚ್​ ಹಾಕಿದ್ದಾನೆ. ಕಾಂಟ್ರಾಕ್ಟ್​ ಕಿಲ್ಲರ್​ಗೆ ತನ್ನ ಮಗಳನ್ನು ಕೊಲ್ಲಲು ಒಂದೂವರೆ ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾನೆ.

ಫೆಬ್ರವರಿ 3ರಂದು ರಂಜಳಾನ್ನು ಆಕೆಯ ತಂದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿಯ ಅಣ್ಣ ಅಜಿತ್​ ಯಾದವ್​, ಬಾವ ಸತ್ಯ ಪ್ರಕಾಶ್ ಯಾದವ್​ ಸಹಾಯದಿಂದ ಆಕೆಯ ಕೈ-ಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಸುಪಾರಿ ಕಿಲ್ಲರ್​ ಆಕೆಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ.

ಫೆಬ್ರವರಿ ನಾಲ್ಕರಂದು ಧಂಗಟ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಗ್ನವಾಗಿ ಸುಟ್ಟು ಕರಕಲವಾಗಿರುವ ಯುವತಿಯ ದೇಹ ಪತ್ತೆಯಾಗಿದೆ. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮೂಲಕ ಯುವತಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ಮಗಳನ್ನು ಕೊಲೆ ಮಾಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸುಪಾರಿ ಕಿಲ್ಲರ್​ ವರುಣ್​ ತಿವಾರಿ ಹುಡುಕಾಟದಲ್ಲಿ ಮಗ್ನರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.