ETV Bharat / bharat

5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತ ಮುನ್ನುಗ್ಗುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

author img

By

Published : Feb 1, 2023, 6:42 PM IST

ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

we-are-moving-along-to-become-a-5-dollars-trillion-economy-finance-minister-nirmala-sitharaman
ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತ ಮುನ್ನಗ್ಗುತ್ತಿದೆ: ಬಜೆಟ್ ಬಳಿಕ ವಿತ್ತ ಸಚಿವೆ ನಿರ್ಮಲಾ ಹೇಳಿಕೆ

ನವದೆಹಲಿ: ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇಂದು ಲೋಕಸಭೆಯಲ್ಲಿ 2023ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸಿದ ನಂತರ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ

"ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಸಗಟು ಬೆಲೆ ಸೂಚ್ಯಂಕ ಇಳಿಕೆಯಾಗುವ ಮೂಲಕ ಹಣದುಬ್ಬರ ನಿಯಂತ್ರಣದಲ್ಲಿದೆ. ವಾಸ್ತವ ಬೆಳವಣಿಗೆಗೆ ಅನುಗುಣವಾಗಿ ಹಣದುಬ್ಬರ ಆಧಾರಿತ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದ್ದು ಫಲ ನೀಡಿದೆ" ಎಂದು ಸಚಿವೆ ತಿಳಿಸಿದರು. ಇದೇ ವೇಳೆ, "ಗೋಧಿಯನ್ನು ಮಾರುಕಟ್ಟೆಗೆ ಬಿಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಗೋಧಿ ಬೆಲೆ ಇಳಿಕೆಯಾಗಲಿದೆ. ಬಜೆಟ್‌ಗೂ ಮುನ್ನವೇ ಗೋಧಿ ಬೆಲೆ ತಗ್ಗಿಸಲು ಕ್ರಮ ಕೈಗೊಂಡಿದ್ದೆವು" ಎಂದು ಹೇಳಿದರು.

ನಾಲ್ಕು ಅಂಶಗಳಿಗೆ ಒತ್ತು: "ಬಜೆಟ್​ನಲ್ಲಿ ನಾಲ್ಕು ಅಂಶಗಳಿಗೆ ಒತ್ತು ನೀಡಲಾಗಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮಕ್ಕೆ ಕ್ರಿಯಾ ಯೋಜನೆ, ವಿಶ್ವಕರ್ಮರಿಗೆ (ಕುಶಲ ಕರ್ಮಿಗಳು) ಉಪಕ್ರಮಗಳು ಮತ್ತು ಹಸಿರು ಬೆಳವಣಿಗೆ ಆದ್ಯತೆ ನೀಡಲಾಗಿದೆ" ಎಂದರು. "ಕೃಷಿ ಸಾಲ ಲಭ್ಯತೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಕೃಷಿ ಸಾಲವಾಗಿ 20 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಘೋಷಿಸಿರುವ ಉಪ ಯೋಜನೆಯು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನವಾಗಲಿದೆ" ಎಂದು ತಿಳಿಸಿದರು.

ಕೈಗಾರಿಕಾ ಕ್ರಾಂತಿ 4.0: "ನಾವು ಭವಿಷ್ಯದ ಫಿನ್​ಟೆಕ್​ ವಲಯವನ್ನು ಎದುರು ನೋಡುತ್ತಿದ್ದೇವೆ. ಕೈಗಾರಿಕಾ ಕ್ರಾಂತಿ 4.0 ಮೂಲಕ ಜನರಿಗೆ ತರಬೇತಿ ನೀಡಲಾಗುವುದು. ವಿವಿಧ ಹಂತಗಳಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಸಡಿಲಿಸಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೇ, ಈ ಬಜೆಟ್​ ಬಂಡವಾಳ ಹೂಡಿಕೆಗೆ ದೊಡ್ಡ ಉತ್ತೇಜನ ನೀಡುತ್ತದೆ. ಇದರೊಂದಿಗೆ ಎಂಎಸ್​ಎಂಇಗಳ ಬಗ್ಗೆಯೂ ಗಮನ ನೀಡಲಾಗುತ್ತಿದೆ. ಇವೇ ನಮ್ಮ ಬೆಳವಣಿಗೆಯ ಪ್ರಮುಖ ಎಂಜಿನ್" ಎಂದರು.

ಇದನ್ನೂ ಓದಿ: ಕುಶಲಕರ್ಮಿಗಳ ಅಭಿವೃದ್ಧಿಗೆ 'ಪ್ರಧಾನಿ ವಿಶ್ವಕರ್ಮ ಕೌಶಲ್ ಸಮ್ಮಾನ್': ಏನಿದು ಯೋಜನೆ? ಪ್ರಯೋಜನಗಳೇನು?

"ದೇಶವು ನೇರ ತೆರಿಗೆ ನೀತಿಯನ್ನು ಸರಳೀಕರಿಸಲು ಕಾಯುತ್ತಿದೆ. ಆದ್ದರಿಂದ ನಾವು ಎರಡ್ಮೂರು ವರ್ಷಗಳ ಹಿಂದೆ ನೇರ ತೆರಿಗೆಗಾಗಿ ತಂದ ಹೊಸ ತೆರಿಗೆ ವ್ಯವಸ್ಥೆಯು ಈಗ ಹೆಚ್ಚಿನ ಪ್ರೋತ್ಸಾಹ ಮತ್ತು ಆಕರ್ಷಣೆ ಪಡೆದುಕೊಂಡಿದೆ. ಇದರಿಂದ ಜನರು ಹಿಂಜರಿಯದೆ ಹಳೆಯದರಿಂದ ಹೊಸ ಪದ್ಧತಿಗೆ ವಾಲಬಹುದು. ಇದಕ್ಕಾಗಿ ನಾವು ಯಾರನ್ನೂ ಬಲವಂತ ಮಾಡುತ್ತಿಲ್ಲ. ಆದರೆ, ಹೆಚ್ಚಿನ ರಿಯಾಯಿತಿಗಳನ್ನು ನೀಡುವುದರಿಂದ ಹೊಸ ಪದ್ಧತಿ ಹೆಚ್ಚು ಆಕರ್ಷಕವಾಗಿದೆ" ಎಂದು ವಿತ್ತ ಸಚಿವೆ ನಿರ್ಮಲಾ ವಿವರಿಸಿದರು.

ಇದನ್ನೂ ಓದಿ: ರಕ್ತಹೀನತೆ ಸಮಸ್ಯೆ ನಿರ್ಮೂಲನೆಗೆ ಬಜೆಟ್​ನಲ್ಲಿ ಕ್ರಮ: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಐಎಂಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.