ETV Bharat / bharat

ವಾಕಿಂಗ್​ ವೇಳೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಉತ್ತರಾಖಂಡ ಸಿಎಂ ಧಾಮಿ

author img

By

Published : Feb 24, 2023, 4:52 PM IST

ತಮ್ಮ ಕ್ಷೇತ್ರವಾದ ಚಂಪಾವತ್​​ ಪ್ರವಾಸದಲ್ಲಿರುವ ಸಿಎಂ ಪುಷ್ಕರ್​​ ಧಾಮಿ, ಜನರ ಸಮಸ್ಯೆ ಆಲಿಸುವ ಜೊತೆಗೆ ಸರ್ಕಾರದ ಯೋಜನೆಗಳ ಕುರಿತು ಪ್ರತಿಕ್ರಿಯೆಯನ್ನು ಪಡೆದಿದ್ದಾರೆ

uttarakhand-cms-conversation-with-the-people-of-the-constituency-while-walking
uttarakhand-cms-conversation-with-the-people-of-the-constituency-while-walking

ಚಂಪಾವತ್​ (ಉತ್ತರಾಖಂಡ್​): ತಮ್ಮ ತವರು ಕ್ಷೇತ್ರವಾದ ಚಂಪಾವತ್ ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಉತ್ತರಾಖಂಡ​​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಇಲ್ಲಿನ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಆಲಿಸಿದ್ದಾರೆ. ಇದೇ ವೇಳೆ ಅವರು ತಮ್ಮ ನೇತೃತ್ವದರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಭಿಪ್ರಾಯವನ್ನು ಪಡೆದಿದ್ದಾರೆ.

ಚಹಾ ಸವಿದು ಸಂಭಾಷಣೆ: ಗುರುವಾರ ಟೆಂಪಲ್​ ರನ್​ ನಡೆಸಿದ ಸಿಎಂ ಇಂದು ಮುಂಜಾನೆ ಚಂಪಾವತ್​ನ ರಸ್ತೆಯಲ್ಲಿ ಮುಂಜಾನೆ ವಾಕ್​ ಮಾಡುವ ಮೂಲಕ ಸ್ಥಳೀಯರಿಂದಿಗೆ ಸಂಭಾಷಣೆ ಇಳಿದಿದ್ದುರು. ಅವರ ಈ ವರ್ತನೆ ಕಂಡ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಿರಿ ಕಿರಿಯರೆನ್ನದೇ ಎಲ್ಲರನ್ನು ಪ್ರೀತಿಯಂದ ಮಾತನಾಡಿದ ಅವರ ಪರಿಗೆ ಜನರು ಕೂಡ ಹರ್ಷ ವ್ಯಕ್ತಪಡಿಸಿದರು. ಬೆಳಗಿನ ಸೂರ್ಯ ನಮಸ್ಕಾರದ ಬಳಿಕ ನಗರದ ರಸ್ತೆಯಲ್ಲಿ ವಾಕಿಂಗ್​ ಆರಂಭಿಸಿದ ಅವರು, ಅಲ್ಲಿಯೇ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಗೆ ಹೋಗಿ ಚಹಾ ಸವಿದಿದ್ದಾರೆ. ನಗರದ ಬ್ಲಾಕ್​ ರೋಡ್​ನಲ್ಲಿದ್ದ ನಿತ್ಯಾನಂದ ಜೋಶಿ ಅವರ ಚಹಾದ ಅಂಗಡಿಗೆ ತೆರಳಿದ ಸಿಎಂ, ಚಹಾದಂಗಡಿ ನಡೆಸುತ್ತಿದ್ದ ಹಿರಿಯ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸಿ, ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಅವರ ಸಮಸ್ಯೆ ಆಲಿಸಿದ ಅವರು, ತಮ್ಮ ಸರ್ಕಾರದ ಕಲ್ಯಾಣ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸಿಎಂ ಧಾಮಿ, ಸಾರ್ವಜನಿಕರ ಮುಖದಲ್ಲಿ ಕಾಣುವ ಸಂತೃಪ್ತಿಯ ಭಾವವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.

ಜನರ ಸಮಸ್ಯೆ ಆಲಿಸಿದ ಸಿಎಂ: ಇನ್ನು ಟೀ ಅಂಗಡಿಯಲ್ಲಿ ಅವರು ಸಂಭಾಷಣೆ ನಡೆಸುತ್ತಿದ್ದ ವೇಳೆ ತಮ್ಮನ್ನು ನೋಡುತ್ತಿದ್ದ ಪುಟ್ಟ, ಮುಗ್ದ ಬಾಲಕನನ್ನು ರಿಯಾಂಶ್​​ನನ್ನು ಕೂಡ ಅವರು ಮಾತನಾಡಿಸಿ, ಗಮನ ಸೆಳೆದರು. ಇದಾದ ಬಳಿಕ ಅವರು ನಾಗನಾಥ್​ ವಾರ್ಡ್​ಗೆ ಬಂದು ಅಲ್ಲಿ ಕುಡಿಯುವ ನೀರು ತುಂಬಿಸುತ್ತಿದ್ದ ಮಹಿಳೆಯರನ್ನು ಮಾತನಾಡಿಸಿದ್ದು, ನೀರಿನ ವ್ಯವಸ್ಥೆ ಕುರಿತು ಕೇಳಿದ್ದಾರೆ. ಈ ವೇಳೆ ಮಹಿಳೆಯರು ನೀರು ಪ್ರತಿನಿತ್ಯ ಸಿಗುತ್ತಿದ್ದು, ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ ಎಂದಿದ್ದಾರೆ

ಇದಾದ ಬಳಿಕ ಗೊರಲ್ಗೊಂಡ್​ ಮೈದಾನದ ಸಣ್ಣ ಮಾರುಕಟ್ಟೆಗೆ ಅವರು ಭೇಟಿ ನೀಡಿದರು. ಇಲ್ಲಿ ತರಕಾರಿ ಮಾರಾಟಗಾರರು ಮತ್ತು ಇತರೆ ಅಂಗಡಿ ಮಾಲೀಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ಕೀಡಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಯುವಕರನ್ನು ಭೇಟಿಯಾಗಿ ಅವರ ಭವಿಷ್ಯಕ್ಕೆ ಹಾರೈಸಿದರು.

ಗುರುವಾರ ಅವರು ಚಂಪಾವತ್​ನಲ್ಲಿ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಶುಕ್ರ ವಾರ ಅವರು ಸಾರಿಗೆ ಇಲಾಖೆಯ ವಲಯ ಇನ್ಸ್​ಪೆಕ್ಟರ್​ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಅವರು ನಕಲು ವಿರೋಧಿ ಕಾಯ್ದೆಯನ್ನು ಜಾರಿಗೆ ತಂದ ಹಿನ್ನಲೆ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಮತ್ತು ಅಬಾರ್​ ಮೆರವಣಿಗೆಯಲ್ಲಿ ಭಾಗಿಯಾದರು. ಚಂಪಾವತ್‌ನಲ್ಲಿ ಜಿಐಸಿ ಚೌಕ್‌ನಿಂದ ಗೋರಲ್‌ಚೋಡ್ ಮೈದಾನದವರೆಗೆ ಈ ಮೆರವಣಿಗೆ ಸಾಗಿತು.

ಇದನ್ನೂ ಓದಿ: 140 ಸಿನಿಮಾಗಳಲ್ಲಿ ಅಭಿನಯ, 6 ಬಾರಿ ಸಿಎಂ ಹುದ್ದೆ!: ಜಯಲಲಿತಾ ವರ್ಣರಂಜಿತ ಬದುಕಿನ ಚಿತ್ರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.