ETV Bharat / bharat

ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕೇಂದ್ರ ಸಚಿವರ ಕಾರು.. ಪ್ರಾಣಾಪಾಯದಿಂದ ಪ್ರತಾಪ್​ ಸಾರಂಗಿ ಪಾರು

author img

By

Published : May 9, 2021, 5:39 PM IST

ಕೇಂದ್ರ ಸಚಿವ ಪ್ರತಾಪ್ ಸಿಂಗ್ ಸಾರಂಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಸಚಿವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

Union Minister Pratap Sarangi
Union Minister Pratap Sarangi

ಬಾಲಸೋರ್​(ಒಡಿಶಾ): ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಸಚಿವರು ಸಣ್ಣ-ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಕೇಂದ್ರ ಸಚಿವರ ಕಾರು

ಒಡಿಶಾದ ಬಾಲಸೋರ್​​ ಜಿಲ್ಲೆಯ ನೀಲಗಿರಿ ಪ್ರದೇಶದಲ್ಲಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ತಕ್ಷಣವೇ ಸಚಿವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ವಿಶ್ವ ತಾಯಂದಿರ ದಿನವೇ ಅಮ್ಮ ವಿಧಿವಶ: ತಳ್ಳೋ ಗಾಡಿಯಲ್ಲಿ ಹೆತ್ತಮ್ಮನ ಶವ ಸಾಗಿಸಿ ಮಕ್ಕಳಿಂದ ಅಂತ್ಯಕ್ರಿಯೆ

ಲಭ್ಯವಾಗಿರುವ ಮಾಹಿತಿ ಪ್ರಕಾರ ಸಾರಂಗಿ ಅವರ ಕಾರು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಸಚಿವರೊಂದಿಗೆ ಕಾರಿನಲ್ಲಿದ್ದ ಅವರ ಪಿಎ ಹಾಗೂ ಚಾಲಕನಿಗೂ ಗಾಯಗಳಾಗಿವೆ. ಪ್ರತಾಪ್​ ಚಂದ್ರ ಸಾರಂಗಿ ಪ್ರಧಾನಿ ಮೋದಿ ಸಂಪುಟದಲ್ಲಿ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.