ETV Bharat / bharat

ಟ್ರೈನ್​ನ ಚೈನ್​ ಎಳೆದು ಪಕ್ಕದ ಹಳಿ ಮೇಲೆ ನಿಂತ ಪ್ರಯಾಣಿಕರು.. ಐವರ ಮೇಲೆ ಹರಿಯಿತು ಮತ್ತೊಂದು ರೈಲು!

author img

By

Published : Apr 12, 2022, 7:06 AM IST

ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ನಿಂತಿದ್ದರಿಂದ ಕೆಲ ಪ್ರಯಾಣಿಕರು ಕೆಳಗಿಳಿದು ಪಕ್ಕದ ಹಳಿಯ ಮೇಲೆ ನಿಂತಿದ್ದಾರೆ. ಈ ವೇಳೆ ಹಳಿಯ ಮೇಲೆ ವೇಗವಾಗಿ ಬಂದ ಟ್ರೈನ್​ವೊಂದು ಗುದ್ದಿದೆ. ಪರಿಣಾಮ ಈ ದುರಂತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ.

many people died in Srikakulam train accident, train accident in Andhra Pradesh, Andhra Pradesh news, ಶ್ರೀಕಾಕುಳಂ ರೈಲು ಅಪಘಾತದಲ್ಲಿ ಹಲವರು ಸಾವು, ಆಂಧ್ರಪ್ರದೇಶದಲ್ಲಿ ರೈಲು ಅಪಘಾತ, ಆಂಧ್ರಪ್ರದೇಶ ಸುದ್ದಿ,
ಟ್ರೈನ್​ನ ಚೈನ್​ ಎಳೆದು ಪಕ್ಕದ ಹಳಿಯ ಮೇಲೆ ನಿಂತ ಪ್ರಯಾಣಿಕರು

ಶ್ರೀಕಾಕುಳಂ(ಆಂಧ್ರ ಪ್ರದೇಶ): ಒಂದು ಅಪಘಾತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಿದವರು, ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸಾವಿನಿಂದ ಬಚಾವಾಗಲು ರೈಲಿನಿಂದ ಕೆಳಗಿಳಿದವರಲ್ಲಿ ಕೆಲವರು ದುರಂತ ಅಂತ್ಯ ಕಂಡಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಜಿ.ಸಿಗಡಂ ತಾಲೂಕಿನ ಬಟುವಾ ಗ್ರಾಮದ ಬಳಿ ರೈಲಿಗೆ ಸಿಲುಕಿ ಐವರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಏನಿದು ಘಟನೆ: ಕೊಯಮತ್ತೂರಿನಿಂದ ಸಿಲ್ಚರ್​​ಗೆ ಹೊರಟಿದ್ದ ಗುವಾಹಟಿ ಎಕ್ಸ್​ಪ್ರೆಸ್ ಚೀಪುರುಪಲ್ಲಿ ದಾಟಿದ ನಂತರ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಚೈನ್​ ಎಳೆದು ರೈಲನ್ನು ನಿಲ್ಲಿಸಿದ್ದರು. ಈ ಘಟನೆಯಿಂದ ಹೆದರಿದ ಕೆಲವರು ಕೆಳಗಿಳಿದು ಹಳಿಗಳ ಮೇಲೆ ನಿಂತಿದ್ದಾರೆ.

ಟ್ರೈನ್​ನ ಚೈನ್​ ಎಳೆದು ಪಕ್ಕದ ಹಳಿಯ ಮೇಲೆ ನಿಂತ ಪ್ರಯಾಣಿಕರು

ಟ್ರೈನ್​ಗೆ ಬಲಿ: ಅದೇ ಸಮಯದಲ್ಲಿ ಭುವನೇಶ್ವರದಿಂದ ವಿಶಾಖಪಟ್ಟಣಂ ಕಡೆಗೆ ವೇಗವಾಗಿ ಬಂದ ಕೋನಾರ್ಕ್ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬೊಬ್ಬರ ದೇಹ ಗುರುತು ಸಿಗದಂತೆ ಛಿದ್ರವಾಗಿ ಬಿದ್ದಿದ್ದವು.

ಓದಿ: ಚಲಿಸುತ್ತಿದ್ದ ಟ್ರೈನ್​ನಿಂದ ಇಳಿಯಲು ಹೋಗಿ ಪ್ರಾಣ ಕಳೆದುಕೊಂಡ ಪುರಸಭೆ ಗುತ್ತಿಗೆದಾರ.. ಸಿಸಿ ಟಿವಿಯಲ್ಲಿ ಹೃದಯ ವಿದ್ರಾವಕ ಘಟನೆ!

ಜಿಲ್ಲಾಧಿಕಾರಿ ಭೇಟಿ: ಅಪಘಾತದಲ್ಲಿ ಸಾವನ್ನಪ್ಪಿರುವವರ ಪೈಕಿ ಇಬ್ಬರು ಅಸ್ಸೋಂ ಮೂಲದವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶ್ರೀಕಾಕುಳಂಗೆ ರವಾನಿಸಲಾಗಿದೆ. ಶ್ರೀಕಾಕುಳಂ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಸ್ಥಳದಲ್ಲೇ ಬೀಡು ಬಿಟ್ಟ ಪೊಲೀಸರು: ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಈ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸಿಎಂ ಜಗನ್​ ಸಂತಾಪ: ರೈಲು ಅಪಘಾತದ ಬಗ್ಗೆ ಸಿಎಂ ಜಗನ್ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿ ಸಂತಾಪ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.