ಶಿಕ್ಷಕ ಆತ್ಮಹತ್ಯೆ ಪ್ರಕರಣ: ಇನ್ಸ್​ಪೆಕ್ಟರ್​ ಸೇರಿ ನಾಲ್ವರು ಪೊಲೀಸರ ವಿರುದ್ಧ ಎಫ್​ಐಆರ್​!

author img

By

Published : Jun 23, 2022, 10:29 AM IST

teacher death in kannauj police custody  sit probe kannauj teacher death  policemen including inspector guilty over teacher death in UP  Uttara Pradesh crime news  ಉತ್ತರಪ್ರದೇಶದ ಕನ್ನೌಜ್ ಪೊಲೀಸ್ ಕಸ್ಟಡಿಯಲ್ಲಿ ಶಿಕ್ಷಕ ಸಾವು ಪ್ರಕರಣ  ಶಿಕ್ಷಕನ ಸಾವಿನ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಸೇರಿ ಪೊಲೀಸರ ಮೇಲೆ ದೂರು  ಉತ್ತರಪ್ರದೇಶ ಅಪರಾಧ ಸುದ್ದಿ

ಉತ್ತರಪ್ರದೇಶದ ಕನೌಜ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಜಲೌನ್‌ನ ಶಿಕ್ಷಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನ್ನ ತನಿಖೆಯಲ್ಲಿ ಅಂದಿನ ತಿರ್ವಾ ಇನ್ಸ್‌ಪೆಕ್ಟರ್ ಸೇರಿದಂತೆ 4 ಪೊಲೀಸರನ್ನು ತಪ್ಪಿತಸ್ಥರೆಂದು ದೂಷಿಸಿದ್ದು, ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಲಖನೌ: ಕನೌಜ್‌ನ ತಿರ್ವಾ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ್ದ ಜಲೌನ್‌ನ ಶಿಕ್ಷಕ ಸಾವನ್ನಪ್ಪಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಎಸ್​ಐಟಿ ಈ ಪ್ರಕರಣದ ತನಿಖೆ ನಡೆಸಿದ್ದು, ಅಂದಿನ ಇನ್ಸ್​ಪೆಕ್ಟರ್​ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಎಫ್​ಐಆರ್​ ದಾಖಲಿಸಿದೆ.

ಠಾಣೆಯ ಶೌಚಾಲಯದಲ್ಲಿ ಶಿಕ್ಷಕನ ಶವ ಪತ್ತೆ: ಜಲೌನ್‌ನ ಗಿಧೌನ್ಸಾದ ಶಿಕ್ಷಕ ಪರ್ವತ್ ಸಿಂಗ್ 20 ಮಾರ್ಚ್ 2020 ರಂದು ತಿರ್ವಾ ಪೊಲೀಸ್​ ಠಾಣಾ ವ್ಯಾಪ್ತಿಯ ಸುಖಪುರವಾದಲ್ಲಿನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದ ತಮ್ಮ ಪತ್ನಿ ನೀರಜಾ ಸಿಂಗ್​ರನ್ನು ಕರೆಯಲು ಬಂದಿದ್ದರು. ರಾತ್ರಿ ಪತ್ನಿ ಹಾಗೂ ಅತ್ತೆ ಜೊತೆ ಪರ್ವತ್​ ಸಿಂಗ್​ ಜಗಳವಾಡಿದ್ದಾರೆ. ಪತ್ನಿ ನೀರಜಾ ದೂರಿನ ಮೇರೆಗೆ ತಿರ್ವ ಪೊಲೀಸರು ಶಿಕ್ಷಕ ಪರ್ವತ್​ ಸಿಂಗ್​ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕ ಪರ್ವತ್ ಸಿಂಗ್ ಶವ ಪತ್ತೆಯಾಗಿತ್ತು. ಮೃತನ ತಂದೆ ಶ್ರೀರಾಮ ಅವರು ಸೊಸೆ ನೀರಜ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದರು.

ಓದಿ: ತಂದೆಯಿಂದಲೇ ಅಪ್ರಾಪ್ತ ಪುತ್ರಿಯ ಕೊಲೆ ಪ್ರಕರಣ: ಪ್ರಿಯಕರನ ವಿಚಾರಣೆ

ಸಿಬಿಸಿಐಡಿ ತನಿಖೆ: ಪೊಲೀಸ್ ಕಸ್ಟಡಿಯಲ್ಲಿದ್ದ ಶಿಕ್ಷಕ ಸಾವನ್ನಪ್ಪಿದ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಸಿಐಡಿಗೆ ವಹಿಸಲಾಗಿತ್ತು. ಇದರ ನಂತರ, ಸಿಬಿಸಿಐಡಿ ಅಂದಿನ ತಿರ್ವಾ ಠಾಣೆಯ ಉಸ್ತುವಾರಿ ತ್ರಿಭುವನ್ ಕುಮಾರ್, ಹೆಡ್ ಮೊಹರ್ರಿರ್ ರಾಧೇಶ್ಯಾಮ್, ಗಾರ್ಡ್ ಕಾನ್ಸ್​​​ಟೇಬಲ್​​ ಅರುಣ್ ಕುಮಾರ್ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದ ಅಂದಿನ ಸದರ್ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್ ವಿಕಾಸ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಪೊಲೀಸರು ತಪ್ಪಿತಸ್ಥರು: ಆರೋಪಿ ಇನ್‌ಸ್ಪೆಕ್ಟರ್ ತ್ರಿಭುವನ್ ಕುಮಾರ್ ಮತ್ತು ಕಾನ್ಸ್​ಟೇಬಲ್​ ಅರುಣ್ ಕುಮಾರ್ ಅವರ ಅರ್ಜಿಯ ಮೇರೆಗೆ ಹೈಕೋರ್ಟ್‌ನ ಉಭಯ ಪೀಠವು ಎಸ್‌ಐಟಿ ರಚಿಸಿ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅದರ ನಂತರ ಆರೋಪಿ ಇನ್ಸ್‌ಪೆಕ್ಟರ್ ತ್ರಿಭುವನ್ ಸಿಂಗ್ ಶಿಕ್ಷಕ ಪರ್ವತ್ ಸಿಂಗ್​ರನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿದ್ದರು. ಅಷ್ಟೇ ಅಲ್ಲ ವೈದ್ಯಕೀಯ ಪರೀಕ್ಷೆಯನ್ನು ಸಹ ಅವರು ಮಾಡಿಲ್ಲ ಎಂದು ಎಸ್‌ಐಟಿ ತನಿಖೆಯಲ್ಲಿ ಪತ್ತೆ ಮಾಡಿದೆ.

ಪೊಲೀಸರ ವಿರುದ್ಧ ಎಫ್​ಐಆರ್​: ಮೃತ ಪರ್ವತ ಸೋದರ ಮಾವ ನೀಡಿದ ದೂರಿನ ಮೇರೆಗೆ ಶಿರಸ್ತೇದಾರ ಮೊಹಿರಾರ್ ರಾಧೇಶ್ಯಾಮ್ ಕಾನೂನು ಕ್ರಮ ಕೈಗೊಳ್ಳದೇ ಮೃತನನ್ನು ಠಾಣೆಯಲ್ಲೇ ಕೂರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ವಾಚ್‌ಮನ್ ಅರುಣ್ ಕುಮಾರ್ ಮೃತನನ್ನು ಶೌಚಾಲಯಕ್ಕೆ ಕರೆದೊಯ್ದು ನಿರ್ಲಕ್ಷ್ಯ ತೋರಿದ್ದಾರೆ. ಆಮೇಲೆ ಪರ್ವತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಎಲ್ಲ ಪೊಲೀಸರು 306 ಐಪಿಸಿ ಸೆಕ್ಷನ್​ ಅನ್ವಯ ತಪ್ಪಿತಸ್ಥರೆಂದು ಎಸ್‌ಐಟಿ ಹೇಳಿದೆ. ಮತ್ತೊಂದೆಡೆ, ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ವಿಕಾಸ್ ರೈ ಅವರು ಮೃತರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯದೆ ತಪ್ಪು ಆಧಾರದ ಮೇಲೆ ಅಂತಿಮ ವರದಿಯನ್ನು ಸಿದ್ದಗೊಳಿಸಿರುವುದು ಎಸ್ಐಟಿ ತನಿಖೆಯಲ್ಲಿ ಪತ್ತೆ ಹಚ್ಚಿದೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.