ETV Bharat / bharat

ಆಧ್ಯಾತ್ಮಿಕ ನಾಯಕ ಬಂಗಾರು ಅಡಿಗಲರ್ ನಿಧನ- ಸಂತಾಪ ಸೂಚಿಸಿದ ಸಿಎಂ ಸ್ಟಾಲಿನ್

author img

By ETV Bharat Karnataka Team

Published : Oct 20, 2023, 6:09 AM IST

ತಮಿಳುನಾಡಿನ ಆಧ್ಯಾತ್ಮಿಕ ನಾಯಕ ಬಂಗಾರು ಅಡಿಗಲರ್ ನಿಧನರಾಗಿದ್ದಾರೆ. ಗುರುಗಳ ನಿಧನಕ್ಕೂ ಮುಂಚೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಆಧ್ಯಾತ್ಮಿಕ ನಾಯಕ ಬಂಗಾರು ಅಡಿಗಲರ್ ನಿಧನ
ಆಧ್ಯಾತ್ಮಿಕ ನಾಯಕ ಬಂಗಾರು ಅಡಿಗಲರ್ ನಿಧನ

ಚೆನ್ನೈ (ತಮಿಳುನಾಡು) : ‘ಅಮ್ಮ’ ಎಂದೇ ಖ್ಯಾತರಾಗಿದ್ದ ಆಧ್ಯಾತ್ಮಿಕ ಗುರು ಬಂಗಾರು ಅಡಿಗಲರು ಚೆನ್ನೈನ ಮೇಲ್ಮರುವತ್ತೂರಿನ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ. ಗುರುಗಳ ನಿಧನಕ್ಕೂ ಮುನ್ನ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಶಕ್ತಿ ದೇವಾಲಯಗಳ ಗರ್ಭಗುಡಿಗಳಿಗೆ ಮಹಿಳೆಯರು ಪ್ರವೇಶಿಸಲು ದಾರಿ ಮಾಡಿಕೊಡುವಂತಹ ಕ್ರಾಂತಿಕಾರಿ ಸುಧಾರಣೆಗಳನ್ನು ತರಲು ಅಡಿಗಲರು ಹೆಸರುವಾಸಿಯಾಗಿದ್ದರು.

ನಾಲ್ಕು ದಶಕಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಅವರ ಆಧ್ಯಾತ್ಮಿಕ ಸೇವೆಯ ಪ್ರಮುಖ ಅಂಶವೆಂದರೆ, ಅವರ ಆಡಳಿತದ ಅಡಿ ಶಕ್ತಿ ದೇವಾಲಯಗಳನ್ನು ಮಹಿಳಾ ಭಕ್ತರಿಗೆ ತೆರೆಯುವುದು, ಋತುಸ್ರಾವದ ಸಮಯದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದು, ದೀರ್ಘಕಾಲದ ನಿಷೇಧಗಳನ್ನು ಹೋಗಲಾಡಿಸುವುದು ಅವರ ಸೇವೆಯೆ ಮುಖ್ಯ ಉದ್ದೇಶಗಳಾಗಿದ್ದವು. ಅನುಯಾಯಿಗಳು ಅವರನ್ನು 'ಅಮ್ಮ' ಎಂದೇ ಪೂಜಿಸುತ್ತಿದ್ದರು ಮತ್ತು ಶಕ್ತಿ ಪೂಜೆಗೆ ತಮ್ಮ ಭಕ್ತಿಯಲ್ಲಿ ಕೆಂಪು ವಸ್ತ್ರಗಳನ್ನು ಅಲಂಕರಿಸಿದರು.

ಅಡಿಗಲರ್ ಸ್ಥಾಪಿಸಿದ ಆಧಿಪರಾಶಕ್ತಿ ಆಧ್ಯಾತ್ಮಿಕ ಆಂದೋಲನವನ್ನು ಚೆನ್ನೈ ಬಳಿಯ ಮೇಲ್ಮರುವತ್ತೂರ್ ದೇವಸ್ಥಾನ ಮತ್ತು ರಾಜ್ಯಾದ್ಯಂತ ಸ್ಥಳೀಯ ಆರಾಧನಾ ಗುಂಪುಗಳು ಎಂದು ಕರೆಯಲಾಗುತ್ತದೆ. ಒಬಿಸಿ ಸಮುದಾಯದಿಂದ ಬಂದ ಆಧ್ಯಾತ್ಮಿಕ ನಾಯಕ ಜನರ ಬಗ್ಗೆ ಅವರ ಸ್ನೇಹಪರ ಮನೋಭಾವಕ್ಕಾಗಿ ಅಪಾರವಾಗಿ ಗೌರವಿಸಲ್ಪಟ್ಟರು. ಅವರು ಪೂಜೆಯನ್ನು ಸರಳ ಮತ್ತು ಸುಲಭಗೊಳಿಸಿದ್ದರಿಂದ ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದ್ದರಿಂದ ತಮಿಳುನಾಡಿನ ಜನ ಮಾನಸದಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರರಾದರು.

ಇವರಿಗೆ ತಮಿಳುನಾಡು, ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ರಾಷ್ಟ್ರಕ್ಕೆ ಅವರ ಆಧ್ಯಾತ್ಮಿಕ ಸೇವೆಗಳಿಗಾಗಿ 'ಅಮ್ಮ' ಅವರಿಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಬಂಗಾರು ಅಡಿಗರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂತ್ಯಸಂಸ್ಕಾರದ ವೇಳೆ ಅವರಿಗೆ ರಾಜ್ಯ ಗೌರವ ನೀಡುವುದಾಗಿ ಇದೇ ವೇಳೆ ಅವರು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಶುಕ್ರವಾರ ಮೇಲ್ಮರುವತ್ತೂರಿಗೆ ಭೇಟಿ ನೀಡಿ ಆಧ್ಯಾತ್ಮಿಕ ನಾಯಕನ ಅಂತಿಮ ದರ್ಶನ ಪಡೆಯಲಿದ್ದಾರೆ.

ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮತ್ತು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಆಧ್ಯಾತ್ಮಿಕ ಗುರುವಿನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಅರಭಾವಿ ದುರದುಂಡೇಶ್ವರ ಮಠದ ಸ್ವಾಮೀಜಿ ನಿಧನ: ಶೋಕ ಸಾಗರದಲ್ಲಿ ಮುಳುಗಿದ ಭಕ್ತ ಸಮೂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.