ETV Bharat / bharat

ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ರಾಜೀನಾಮೆ: ಅಣ್ಣಾಮಲೈ ಅಪಾಯಕಾರಿ ಎಂದು ಆರೋಪ

author img

By

Published : Mar 5, 2023, 6:34 PM IST

ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಐಟಿ ಸೆಲ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಪಕ್ಷವನ್ನು ತ್ಯಜಿಸಿದ್ದಾರೆ.

tamil-nadu-bjp-it-cell-chief-quits-party-joins-aiadmk
ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ರಾಜೀನಾಮೆ: ಅಣ್ಣಾಮಲೈ ಅಪಾಯಕಾರಿ ಎಂದು ಆರೋಪ

ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಉಂಟಾಗಿದೆ. ರಾಜ್ಯ ಘಟಕದ ಐಟಿ ಸೆಲ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಬಿಜೆಪಿಯನ್ನು ತ್ಯಜಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಭಾನುವಾರ ಸೇರ್ಪಡೆಗೊಂಡಿದ್ದಾರೆ.

ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸ್ವಾಮಿ ಸಮ್ಮುಖದಲ್ಲಿ ಪಕ್ಷಕ್ಕೆ ನಿರ್ಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ. ನಿರ್ಮಲ್ ಕುಮಾರ್ ಅವರಿಗೆ ಹೂಗುಚ್ಛ ನೀಡಿ ಪಳನಿಸ್ವಾಮಿ ಸ್ವಾಗತಿಸಿದ್ದಾರೆ. 2021ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಮ್ಮುಖದಲ್ಲಿ ನಿರ್ಮಲ್ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಲ್ಪಾವಧಿಯಲ್ಲಿಯೇ ರಾಜ್ಯದ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರ ನಡುವೆ ಕಳೆದ ಒಂದು ವರ್ಷದಿಂದ ನಿರ್ಮಲ್ ಕುಮಾರ್ ಮತ್ತು ಅಣ್ಣಾಮಲೈ ನಡುವೆ ಉತ್ತಮ ಸಂಬಂಧವಿಲ್ಲ ಹೇಳಲಾಗುತ್ತಿತ್ತು. ಇದೀಗ ಬಿಜೆಪಿ ತೊರೆಯುವ ಕುರಿತು ಅಣ್ಣಾಮಲೈ ವಿರುದ್ಧ ನಿರ್ಮಲ್ ಕುಮಾರ್ ಬಹಿರಂಗವಾಗಿ ನಾನಾ ಆರೋಪಗಳನ್ನು ಮಾಡಿದ್ದಾರೆ.

  • என்னால் முடிந்த வரை பல சங்கடங்களை கடந்து கடந்த 1.5 ஆண்டுகளாக பயணித்தேன்!

    உண்மையாக நேர்மையாக உழைத்தேன், வேதனை மட்டுமே மிச்சம்!

    விடைபெறுகிறேன் 🙏 pic.twitter.com/jcXAtJroid

    — CTR.Nirmal kumar (@CTR_Nirmalkumar) March 5, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್​

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ನಿರ್ಮಲ್ ಕುಮಾರ್, ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಸಮಸ್ಯೆಗಳು ಹಾಗೂ ಮುಜುಗರಗಳನ್ನು ಎದುರಿಸುತ್ತಿದ್ದರೂ ನಾನು ಪಕ್ಷದೊಂದಿಗೆ ಪ್ರಯಾಣಿಸಿದ್ದೇನೆ. ಪ್ರಾಮಾಣಿಕವಾಗಿ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡಿದರೂ ದುಃಖ ಮಾತ್ರ ಉಳಿದಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ''ವಿದಾಯ" ಎಂದು ಹೇಳುವ ಮೂಲಕ ತಮ್ಮ ಸಂದೇಶವನ್ನು ಕೊನೆಗೊಳಿಸಿದ್ದಾರೆ.

ರಾಜ್ಯಕ್ಕೆ ಅಪಾಯಕಾರಿ ಎಂದ ನಿರ್ಮಲ್ ಕುಮಾರ್: ತಮ್ಮ ರಾಜೀನಾಮೆ ಕುರಿತು ಒಂದು ಪುಟದ ಪತ್ರ ಬಿಡುಗಡೆ ಮಾಡಿರುವ ನಿರ್ಮಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷರು ಪಕ್ಷ ಮತ್ತು ಅದರ ಕಾರ್ಯಕರ್ತರನ್ನು ಪರಿಗಣಿಸುತ್ತಿಲ್ಲ. ಅವರ ಏಕವ್ಯಕ್ತಿ ಪ್ರದರ್ಶನದ ಧೋರಣೆಯಿಂದ ಪಕ್ಷವು ದುರಂತದ ಹಾದಿಯಲ್ಲಿ ಸಾಗುತ್ತಿದೆ. ಒಟ್ಟಾರೆ ಅವರು ದ್ರಾವಿಡ ಮಾದರಿ ಮಂತ್ರಿಗಳಿಗಿಂತ ಕೆಟ್ಟವರು. #420ಮಲೈ ಆಗಿರುವ ವ್ಯಕ್ತಿ ರಾಜ್ಯ ಬಿಜೆಪಿಗೆ ಮಾತ್ರವಲ್ಲದೆ ರಾಜ್ಯಕ್ಕೂ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಬಿಜೆಪಿಗೆ ಶಾಕ್ ಮೇಲೆ ಶಾಕ್​​: ಕಳೆದ ಮೂರೇ ತಿಂಗಳಲ್ಲಿ ತಮಿಳುನಾಡು ರಾಜ್ಯ ಬಿಜೆಪಿಗೆ ನಿಂತರವಾಗಿ ದೊಡ್ಡ ಶಾಕ್​ಗಳು ಎದುರಾಗುತ್ತಿವೆ. ಇದೇ ಜನವರಿಯಲ್ಲಿ ಇತರ ರಾಜ್ಯ ಮತ್ತು ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿದ್ದ ನಟಿ ಗಾಯತ್ರಿ ರಘುರಾಮ್ ಬಿಜೆಪಿಯನ್ನು ತೊರೆದಿದ್ದರು. ಪಕ್ಷದ ಆಂತರಿಕ ನಿಯಮಗಳ ಮೀರಿ ಮುಗುಗರ ಉಂಟು ಮಾಡಿದ ಆರೋಪದ ಮೇಲೆ ಆರು ತಿಂಗಳ ಕಾಲ ಗಾಯತ್ರಿ ರಘುರಾಮ್​ ಅವರನ್ನು ಅಮಾನತು ಮಾಡಲಾಗಿತ್ತು.

ಇದರ ಬೆನ್ನಲ್ಲೇ, 'ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳನ್ನು ನೀಡುತ್ತಿಲ್ಲ ಎಂದು ಹೇಳಿ ಪಕ್ಷಕ್ಕೆ ಗುಡ್​ ಬೈ ಹೇಳಿದ್ದರು. ಮತ್ತೊಂದೆಡೆ, ಒಬಿಸಿ ಮೋರ್ಚಾದ ರಾಜ್ಯ ನಾಯಕ ತಿರುಚಿ ಸೂರ್ಯ ಕೂಡ ಇತ್ತೀಚೆಗೆ ಪಕ್ಷವನ್ನು ತೊರೆದಿದ್ದರು. ಡಿಎಂಕೆಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ತಿರುಚ್ಚಿ ಶಿವ ಪುತ್ರರಾದ ಸೂರ್ಯ ಕಳೆದ ವರ್ಷದ ಮೇ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: ಮಹಿಳೆಯರಿಗೆ ಗೌರವವಿಲ್ಲ.. ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.