ETV Bharat / bharat

ಚಿಕಿತ್ಸೆ ನೀಡುತ್ತಿಲ್ಲವೆಂದು ಸ್ಕೈವಾಕ್​ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ರೋಗಿ!

author img

By

Published : Apr 5, 2022, 4:43 PM IST

Updated : Apr 5, 2022, 5:03 PM IST

ರಾಯಪುರದ ಅಂಬೇಡ್ಕರ್​ ಆಸ್ಪತ್ರೆ ಮುಂಭಾಗ ರೋಗಿಯೊಬ್ಬ ತನಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಅಲ್ಲಿಯೇ ಇದ್ದ ಸ್ಕೈವಾಕ್​ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

skywalk
ಮಾನಸಿಕ ರೋಗಿ

ರಾಯ್‌ಪುರ(ಛತ್ತೀಸ್​ಗಢ): ಮಾನಸಿಕ ಅಸ್ವಸ್ಥ ರೋಗಿಯೊಬ್ಬ ತಾನು ದಾಖಲಾದ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಮುಂಭಾಗದ ಸ್ಕೈವಾಕ್​ ಹತ್ತಿ ರಂಪಾಟ ಮಾಡಿದ್ದಾನೆ. ಈ ವೇಳೆ, ರಕ್ಷಣೆಗೆ ಹೋದಾಗ ಅಲ್ಲಿಂದ ಜಿಗಿದು ಗಾಯಗೊಂಡಿದ್ದಾನೆ.

ಛತ್ತೀಸ್​ಗಢದ ರಾಯ್​ಪುರ ಜಿಲ್ಲೆಯ ಅಂಬೇಡ್ಕರ್​ ಆಸ್ಪತ್ರೆಯ ಮುಂಭಾಗ ಈ ಘಟನೆ ನಡೆದಿದೆ. ಮಾನಸಿಕ ರೋಗಿಯು ಮಧ್ಯಪ್ರದೇಶದ ಸುಜಿತ್​ ಸಾಕೇತ್​ ಎನ್ನಲಾಗಿದೆ. ಸುಜಿತ್​ ಸಾಕೇತ್​ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನಂತೆ. ಅಲ್ಲದೇ, ಇವರಿಗೆ ಮೂರ್ಛೆ ರೋಗ ಕೂಡ ಇದೆ. ಕೆಲ ದಿನಗಳ ಹಿಂದಷ್ಟೇ ಈತನನ್ನು ಅಂಬೇಡ್ಕರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ನೀಡುತ್ತಿಲ್ಲವೆಂದು ಸ್ಕೈವಾಕ್​ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ರೋಗಿ!

ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಸುಜಿತ್​ ಆಸ್ಪತ್ರೆ ಮುಂಭಾಗದ ಸ್ಕೈವಾಕ್​ ಹತ್ತಿ ರಂಪಾಟ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೂ ಜಗ್ಗದ ಈ ವ್ಯಕ್ತಿ ಸ್ಕೈವಾಕ್​ ಮೇಲಿಂದ ತಲೆಕೆಳಗಾಗಿ ನೇತಾಡಿ ಭೀತಿ ಉಂಟು ಮಾಡಿದ್ದ.

ಗಂಟೆಗಳ ಕಾಲ ಆತನ ಮನವೊಲಿಕೆಗೆ ಯತ್ನಿಸಿದ ವಿಫಲರಾದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಕರೆತಂದು ಆ ಯುವಕನ ರಕ್ಷಿಸಲು ಸ್ಕೈ ವಾಕ್ ಹತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಅಲ್ಲಿದ ಜಿಗಿದಿದ್ದಾನೆ. ಗಾಯಗೊಂಡ ಯುವಕನನ್ನು ತಕ್ಷಣ ಮೆಕಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಯುವಕನಿಗೆ ಮೂರ್ಛೆ ರೋಗವಿದ್ದು, ಮಾನಸಿಕ ಸ್ಥಿತಿಯೂ ಸರಿಯಿಲ್ಲ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ರೋಗದ ಚಿಕಿತ್ಸೆಗಾಗಿ ಬಂದಿದ್ದು, ಆತ ದಾಖಲಾದ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಓದಿ: ಉಕ್ರೇನ್​ ಬೀದಿಗಳಲ್ಲಿ ನಾಗರಿಕರ ಶವಗಳು ಪತ್ತೆ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ

Last Updated :Apr 5, 2022, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.