ETV Bharat / bharat

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ರೂಪಿಸುವ ಅಗತ್ಯವಿದೆ: ಆರ್​ಎಸ್ಎಸ್​​

author img

By

Published : Oct 19, 2022, 6:39 PM IST

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ನೀತಿಯನ್ನು ಜಾರಿಗೆ ತರಲೇಬೇಕು ಎಂದು ಆರ್​ಎಸ್​ಎಸ್​ ಒತ್ತಾಯಿಸಿದೆ.

RSS underlines need for population control
ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ಜಾರಿಗೆ ತರುವಂತೆ ಆರ್​ಎಸ್ಎಸ್ ಆಗ್ರಹ

ಪ್ರಯಾಗರಾಜ್: ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ನೀತಿ ರೂಪಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದೆ.

ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ನಾಲ್ಕು ದಿನಗಳ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಆತಂಕಕಾರಿ ಸಂಗತಿ. ದೇಶದಲ್ಲಿ ಜನಸಂಖ್ಯೆಗೆ ತಕ್ಕ ಸಂಪನ್ಮೂಲವಿಲ್ಲ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಅಗತ್ಯ. ಪ್ರತಿಯೊಬ್ಬರೂ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಜನಸಂಖ್ಯೆ ನಿಯಂತ್ರಣಕ್ಕಾಗಿ ನೀತಿ ಜಾರಿಗೆ ತರಬೇಕು ಎಂದು ಹೇಳಿದರು.

ಗಡಿ ಭಾಗಗಳಲ್ಲಿ ನಡೆಯುತ್ತಿರುವ ಮತಾಂತರದಿಂದ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಅಸಮತೋಲನವು ಅನೇಕ ರಾಷ್ಟ್ರಗಳ ವಿಭಜನೆಗೆ ಕಾರಣವಾಗಿದೆ. ಭಾರತವೂ ಈ ಕಾರಣದಿಂದಾಗಿ ವಿಭಜನೆಯನ್ನು ಎದುರಿಸಿತು. ಧರ್ಮ ಆಧಾರಿತ ಜನಸಂಖ್ಯೆಯ ಸಮತೋಲನವು ಇನ್ನು ಮುಂದೆ ನಿರ್ಲಕ್ಷಿಸಲಾಗದ ಪ್ರಮುಖ ವಿಷಯ ಎಂದು ಹೊಸಬಾಳೆ ತಿಳಿಸಿದರು.

ಇದನ್ನೂ ಓದಿ: ದೇಶದಲ್ಲಿ ಹಿಂದುಗಳು‌ ಜನಸಂಖ್ಯೆ ನಿಯಂತ್ರಣ ಮಾಡಬಾರದು: ಹಣಮಂತ ಮಳಲಿ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.