ಹೈದರಾಬಾದ್: ಬೇಸಿಗೆ ಕಾಲದಲ್ಲಿ ಎಲ್ಲೆಂದರಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತವೆ. ಆಕಸ್ಮಿಕವಾಗಿ ಸಂಭವಿಸುವ ಈ ಘಟನೆಗಳಿಂದ ಕೆಲವೊಮ್ಮೆ ಸಾಕಷ್ಟು ಹಾನಿಯ ಜೊತೆಗೆ ಪ್ರಾಣಾಪಾಯ ಕೂಡಾ ಸಂಭವಿಸಬಹುದು.
ಇದರಲ್ಲಿ ಪ್ರಮುಖವಾಗಿ ಕಾರುಗಳು ಅಥವಾ ಇತರ ವಾಹನಗಳು ಆಕಸ್ಮಿಕವಾಗಿ ಅಗ್ನಿ ಅನಾಹುತಕ್ಕೆ ಸುಟ್ಟು ಭಸ್ಮವಾಗುತ್ತವೆ. ಅದರಲ್ಲೂ ಚಲಿಸುತ್ತಿರುವ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡು ಸಮಸ್ಯೆ ಸೃಷ್ಟಿಯಾಗುವ ಸನ್ನಿವೇಶಗಳು ಅಲ್ಲಲ್ಲಿ ನಡೆಯುತ್ತವೆ. ಇಂಥಹ ಘಟನೆಗಳಿಗೆ ಕಾರಣಗಳು ಇಲ್ಲಿವೆ.
- ಕಾರುಗಳನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸದೇ ಇರುವುದು
- ಕಾರಿನ ಆಯಿಲ್ ಕಾಲಕಾಲಕ್ಕೆ ಬದಲಾಯಿಸದಿರುವುದರಿಂದ
- ಸಿಸ್ಟಮ್ಯಾಟಿಕ್ ಆಗಿ ಕಾರಿನಲ್ಲಿ ವೈರಿಂಗ್ ಮಾಡದೇ ಇರುವುದು
- ಕಾರಿನಲ್ಲಿ ಕನಿಷ್ಠ 1/4ರಷ್ಟು ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದಿರುವುದು
- ಕಾರುಗಳನ್ನು ದೀರ್ಘ ಸಮಯದವರೆಗೆ ಅತಿ ವೇಗವಾಗಿ ಓಡಿಸುವುದು
- ಕಾರುಗಳಿಗೆ ಅನಧಿಕೃತ ಸಿಎನ್ಜಿ ಮತ್ತು ಎಲ್ಪಿಜಿ ಬಳಸುವುದು
ಇವೆಲ್ಲಾ ಕಾರಣಗಳಿಂದ ಕಾರುಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾರುಗಳನ್ನು ಸರ್ವೀಸ್ ಮಾಡಿಸುವುದರ ಜೊತೆಗೆ ಕಾರಿನ ವೈರಿಂಗ್, ಆಯಿಲ್ ಬದಲಾವಣೆ, ಅಧಿಕೃತ ಸಿಎನ್ಜಿ ಮತ್ತು ಎಲ್ಪಿಜಿ ಬಳಕೆ ಮಾಡಬೇಕಾಗುವುದು ಅನಿವಾರ್ಯವಾಗಿರುತ್ತದೆ.