ETV Bharat / bharat

ಬೈಕ್​ ರಿಪೇರಿ, ಹಮಾಲಿ ಬಳಿಕ ಬಡಿಗನಾದ ರಾಹುಲ್​ ಗಾಂಧಿ..ಪೀಠೋಪಕರಣ ತಯಾರಿಸಲು ಯತ್ನ

author img

By ETV Bharat Karnataka Team

Published : Sep 28, 2023, 11:01 PM IST

ರಾಹುಲ್ ಗಾಂಧಿ ಅವರು ಇಲ್ಲಿನ ಕೀರ್ತಿನಗರ ಪೀಠೋಪಕರಣ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಬಡಿಗನಾದ ರಾಹುಲ್​ ಗಾಂಧಿ
ಬಡಿಗನಾದ ರಾಹುಲ್​ ಗಾಂಧಿ

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರು, ಸಾರ್ವಜನಿಕರೊಂದಿಗೆ ಬೆರೆಯುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಬೈಕ್​ ರಿಪೇರಿ, ರೈಲ್ವೆ ಸ್ಟೇಶನ್​ ಬಳಿ ಸೂಟ್​ಕೇಸ್​ ಹೊರುವುದು, ಗದ್ದೆಯಲ್ಲಿ ನಾಟಿ, ರೈಲಿನಲ್ಲಿ ಜನರೊಂದಿಗೆ ಪ್ರಯಾಣ ಮಾಡಿದ ಬಳಿಕ ಇದೀಗ, ಬಡಿಗ ಕೆಲಸವನ್ನೂ ಮಾಡಿ ಗಮನ ಸೆಳೆದಿದ್ದಾರೆ.

ರಾಹುಲ್ ಗಾಂಧಿ ಅವರು ಇಲ್ಲಿನ ಕೀರ್ತಿನಗರ ಪೀಠೋಪಕರಣ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕಾಂಗ್ರೆಸ್ ನಾಯಕನಿಗೆ ಕಾರ್ಪೆಂಟರ್‌ಗಳು ವೃತ್ತಿ ಕೌಶಲ್ಯಗಳನ್ನು ವಿವರಿಸುವಾಗ ಮರಗೆಲಸವನ್ನೂ ಮಾಡಿದರು.

ಇದು ಇತ್ತೀಚಿನ ದಿನಗಳಲ್ಲಿ ರಾಹುಲ್​ ಅವರು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕರೊಂದಿಗೆ ಸೇರಿದ ಮೂರನೇ ಘಟನೆಯಾಗಿದೆ. ಅವರು ಆಗಸ್ಟ್‌ನಲ್ಲಿ ಇಲ್ಲಿನ ಆಜಾದ್‌ಪುರ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರನ್ನು ಭೇಟಿ ಮಾಡಿಧ್ದರು. ಇತ್ತೀಚೆಗೆ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲಿಗಳೊಂದಿಗೆ ಸೂಟ್​ಕೇಸ್​ ಹೊತ್ತು ಸಾಗಿ, ಬಳಿಕ ಅವರೊಂದಿಗೆ ಸಂವಾದ ನಡೆಸಿ ಅಹವಾಲು ಆಲಿಸಿದ್ದರು.

  • दिल्ली के कीर्तिनगर स्थित एशिया के सबसे बड़े फर्नीचर मार्केट जाकर आज बढ़ई भाइयों से मुलाकात की।

    ये मेहनती होने के साथ ही कमाल के कलाकार भी हैं - मज़बूती और खुबसूरती तराशने में माहिर!

    काफ़ी बातें हुई, थोड़ा उनके हुनर को जाना और थोड़ा सीखने की कोशिश की। pic.twitter.com/ceNGDWKTR8

    — Rahul Gandhi (@RahulGandhi) September 28, 2023 " class="align-text-top noRightClick twitterSection" data=" ">

ಇಂದು ಪೀಠೋಪಕರಣ ತಯಾರಿಸುವ ಅಂಗಡಿಗಳಿಗೆ ಭೇಟಿ ನೀಡಿದ ರಾಹುಲ್, ಬಡಗಿಗಳೊಂದಿಗೆ ಸಂವಾದ ನಡೆಸಿದರು. ಜೊತೆಗೆ ಕೆಲವು ಪೀಠೋಪಕರಣ ವಸ್ತುಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿದರು. ಇದನ್ನು ಅವರು ಎಕ್ಸ್​ನಲ್ಲಿ ಚಿತ್ರಗಳ ಸಮೇತ (ಹಿಂದಿನ ಟ್ವಿಟರ್​) ಹಂಚಿಕೊಂಡಿದ್ದು, ದೆಹಲಿಯ ಕೀರ್ತಿ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಭೇಟಿ ನೀಡಿದ್ದೆ. ಅಲ್ಲಿನ ಬಡಗಿ ಕೆಲಸಗಾರ ಸಹೋದರರನ್ನು ಭೇಟಿಯಾದೆ. ಕಠಿಣ ಕೆಲಸವಾಗಿದ್ದರೂ, ಕಟ್ಟಿಗೆಯಲ್ಲಿ ಸೌಂದರ್ಯವನ್ನು ರೂಪಿಸುವ ಅದ್ಭುತ ಕಲಾವಿದರು. ಅವರ ಕೌಶಲ್ಯಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಯತ್ನ ಮಾಡಿದೆ ಎಂದು ರಾಹುಲ್ ಹೇಳಿದ್ದಾರೆ.

ಎಕ್ಸ್​ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ರಾಹುಲ್​ ಗಾಂಧಿ ಅವರು ಪೀಠೋಪಕರಣನ್ನ ತಯಾರಿಕೆಗೆ ಕಟ್ಟಿಗೆಯನ್ನು ಹದ ಮಾಡುವ ಮತ್ತು ಜೋಡಣೆ ಮಾಡುವ ಕೆಲಸದಲ್ಲಿ ತೊಡಗಿದ್ದನ್ನು ಕಾಣಬಹುದಾಗಿದೆ.

ಸೂಟ್​ಕೇಸ್ ಹೊತ್ತಿದ್ದ ರಾಹುಲ್​: ರಾಹುಲ್​ ಗಾಂಧಿ ಅವರು ಈಚೆಗೆ ದೆಹಲಿಯ ಜನನಿಬಿಡ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದರು. ಕೂಲಿಗಳ ಕೆಂಪು ಶರ್ಟ್ ಧರಿಸಿ ತಲೆ ಮೇಲೆ ಸೂಟ್​ಕೇಸ್​ ಹೊತ್ತುಕೊಂಡು ರಾಹುಲ್​ ಗಾಂಧಿ ಹಮಾಲರ ಶ್ರಮ ಹಾಗೂ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರು.

ಕೆಂಪು ಅಂಗಿ ತೊಟ್ಟು ತಲೆಯ ಮೇಲೆ ಟ್ರಾಲಿ ಬ್ಯಾಗ್​ ಹೊತ್ತ ಸ್ವಲ್ಪ ದೂರ ಸಾಗಿಸಿದ ರಾಹುಲ್​ ಅವರನ್ನು ಹಲವು ಹಮಾಲರು ಸುತ್ತುವರೆದಿದ್ದರು. ರಾಹುಲ್ ಗಾಂಧಿ ಜಿಂದಾಬಾದ್ ಎಂಬ ಘೋಷಣೆ ಕೂಡ ಕೇಳಿಬಂದಿತ್ತು. ನಂತರ ರಾಹುಲ್​ ಕೂಲಿಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂವಾದ ನಡೆಸಿದರು. ಕೂಲಿಗಳ ಗುಂಪಿನಲ್ಲಿ ಕುಳಿತು ಸಮಚಿತ್ತದಿಂದ ಸಮಸ್ಯೆಗಳನ್ನು ಆಲಿಸಿದರು. ಕಾಂಗ್ರೆಸ್ ಪಕ್ಷವು ರಾಹುಲ್​ ಗಾಂಧಿ ಅವರನ್ನು ಜನನಾಯಕ ಎಂದು ಬಣ್ಣಿಸಿದೆ. ಶ್ರಮಿಕ ವರ್ಗದ ಹಮಾಲಿಗಳ ಕಷ್ಟಗಳಿಗೆ ಕಿವಿಗೊಡಲು ರಾಹುಲ್​ ಇದ್ದಾರೆ ಎಂದೂ ಒತ್ತಿ ಹೇಳಿದೆ.

ಇದನ್ನೂ ಓದಿ: Rahul Gandhi: ರೈಲು ನಿಲ್ದಾಣದ ಕೂಲಿಗಳ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.