ETV Bharat / bharat

'ರೈತರ ಭುಜದ ಮೇಲೆ ಬಂದೂಕು ಇಟ್ಟು ರಾಹುಲ್​ ರಾಜಕೀಯದಾಟ ಆಡುತ್ತಿದ್ದಾರೆ': ಸಂಬಿತ್ ಪಾತ್ರ

author img

By

Published : Feb 4, 2021, 10:36 AM IST

ಪ್ರತಿಭಟನೆಯಿಂದ ಯಾರೂ ಹಿಂದೆ ಸರಿಯುವುದಿಲ್ಲ ಎಂದು ರಾಹುಲ್ ಬೆದರಿಕೆ ಹಾಕುತ್ತಿದ್ದಾರೆ. ಈ ಚಳವಳಿಯಲ್ಲಿ ಯಾವುದೇ ರಾಜಕೀಯ ಪಕ್ಷದೊಂದಿಗೆ ತಮಗೆ ಸಂಬಂಧವಿಲ್ಲ ಎಂದು ರೈತರು ಹೇಳಿದ್ದಾರೆ. ಹೀಗಿದ್ದರೂ ನೀವೇಕೆ ಅವರ ವಕೀಲರಾಗುತ್ತಿದ್ದೀರಾ ಎಂದು ಬಿಜೆಪಿ ವಕ್ತಾರ ಸಂಬಿತ ಪಾತ್ರ ಪ್ರಶ್ನಿಸಿದ್ದಾರೆ.

BJP
ರಾಹುಲ್

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರೈತರ ಹೆಸರಿನಲ್ಲಿ ಜನರನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಹುಲ್​ಗೆ ಟಾಂಗ್ ನೀಡಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಕಾಂಗ್ರೆಸ್ ಮುಖಂಡರು "ರೈತರ" ಹೆಸರಿನಲ್ಲಿ ಜನರನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ರೈತರ ಭುಜದ ಮೇಲೆ ಬಂದೂಕುಗಳನ್ನು ಇಟ್ಟು ರಾಜಕೀಯ ಅಸ್ತ್ರ ಪ್ರಯೋಗ ಮಾಡುವ ರಾಹುಲ್ ಗಾಂಧಿ, ರಾಜಕೀಯದ ಆಟದಲ್ಲಿ ಅಂಕ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

  • अभी कुछ देर पहले राहुल गांधी ने प्रेस कॉन्फ्रेंस की और कहीं न कहीं किसान बंधुओं के कंधे पर बंदूक रखकर अपनी राजनीतिक रोटी सेंकने की कोशिश राहुल गांधी जी ने की।

    साथ ही साथ पुनः किसानों के माध्यम से लोगों को भड़काने का भी प्रयत्न उन्होंने किया है।

    - डॉ @sambitswaraj pic.twitter.com/kjn4wzzsZk

    — BJP (@BJP4India) February 3, 2021 " class="align-text-top noRightClick twitterSection" data=" ">

ಪ್ರತಿಭಟನೆಯಿಂದ ಯಾರೂ ಹಿಂದೆ ಸರಿಯುವುದಿಲ್ಲ, ಇಂತಹ ಸಂವಾದವನ್ನು ನಂಬುವುದಿಲ್ಲ ಎಂದು ರಾಹುಲ್ ಬೆದರಿಕೆ ಹಾಕುತ್ತಿದ್ದಾರೆ. ರೈತರು ಈ ಚಳವಳಿಯಲ್ಲಿ ಯಾವುದೇ ರಾಜಕೀಯ ಪಕ್ಷದೊಂದಿಗೆ ತಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದರೂ ನೀವೇಕೆ ಅವರ ವಕೀಲರಾಗುತ್ತಿದ್ದೀರಾ ಎಂದು ಪಾತ್ರ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೆಹಲಿ ರೈತರಿಂದ ಆವೃತವಾಗಿದೆ, ನಮಗೆ ಆಹಾರ ನೀಡುವ ಅನ್ನದಾತರಿಗೆ ಬೆದರಿಸಿ, ಹೊಡೆಯಲಾಗ್ತಿದೆ: ರಾಹುಲ್

ಕೆಲವ ಜನರು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಹಾಕಿದ ಟ್ವೀಟ್‌ಗಾಗಿ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನಾ ಅವರ ಮೇಲೂ ಪಾತ್ರ ಹರಿಹಾಯ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.