ETV Bharat / bharat

ಭಾರತದ ಜಲಗಡಿಯಲ್ಲಿ ಇರಾನ್ ಬೋಟ್ ಪತ್ತೆ ಪ್ರಕರಣ : ಎನ್​ಐಎ, ಎನ್​ಸಿಬಿ ತನಿಖೆ

author img

By

Published : Apr 10, 2022, 1:04 PM IST

ತಮಿಳುನಾಡಿನ ಚೆನ್ನೈ ಕರಾವಳಿಯಲ್ಲಿ ಇರಾನಿಯನ್ನರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖೆ ನಡೆಸುತ್ತಿದ್ದು, ಮಾದಕ ವಸ್ತು ಸಾಗಣೆ ಶಂಕೆ ವ್ಯಕ್ತವಾಗಿದೆ..

NIA, NCB begin probe after 11 Iranians held off Chennai coast
ಭಾರತದ ಜಲಗಡಿಯಲ್ಲಿ ಇರಾನ್ ಬೋಟ್ ಪತ್ತೆ ಪ್ರಕರಣ: ಎನ್​ಐಎ, ಎನ್​ಸಿಬಿ ತನಿಖೆ

ಚೆನ್ನೈ, ತಮಿಳುನಾಡು : ಭಾರತದ ಜಲಗಡಿ ಪ್ರವೇಶಿಸಿದ್ದ 11 ಮಂದಿ ಇರಾನಿಯನ್ನರನ್ನು ಚೆನ್ನೈ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​​ಸಿಬಿ) ಈ ಕುರಿತಂತೆ ತನಿಖೆ ಆರಂಭಿಸಿವೆ. ಅಂಡಮಾನ್ ನಿಕೋಬಾರ್ ದ್ವೀಪಗಳ ಇಂದಿರಾ ಪಾಯಿಂಟ್ ಬಳಿ ಈ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಕ್ಕೆ ತೆಗೆದುಕೊಂಡಿತ್ತು.

ಈಗ ಬಂಧಿಸಲ್ಪಟ್ಟವರು ಮಾದಕ ವಸ್ತು ಕಳ್ಳಸಾಗಣೆದಾರರಾಗಿದ್ದು, ಕೋಸ್ಟ್ ಗಾರ್ಡ್ ಇಂಟರ್‌ಸೆಪ್ಟರ್ ಬೋಟ್ ಅನ್ನು ಕಂಡು ತಮ್ಮ ದೋಣಿಯಲ್ಲಿದ್ದ ಮಾದಕವಸ್ತುವನ್ನು ಸಮುದ್ರಕ್ಕೆ ಎಸೆದಿದ್ದಾರೆ. ಆದ್ದರಿಂದಾಗಿ ಏನನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಯಾವುದಾದರೂ ಸಂಘಟನೆ ಭಾಗಿಯಾಗಿದೆಯೇ ಎಂದು ತಿಳಿದುಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆಯನ್ನು ಮುಂದುವರೆಸಿದೆ.

ಆಗಸ್ಟ್ 2021ರಲ್ಲಿ ಶ್ರೀಲಂಕಾದಿಂದ ಭಾರತದ ಕರಾವಳಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಶ್ರೀಲಂಕಾ ತಮಿಳರ ಗುಂಪನ್ನು ಬಂಧಿಸಲಾಗಿತ್ತು. ಅವರನ್ನೂ ಕೋಸ್ಟ್​ ಗಾರ್ಡ್​​ಗಳು ವಶಕ್ಕೆ ಪಡೆದಿದ್ದು, ಎನ್​ಐಎ ಅಧಿಕಾರಿಗಳು ತನಿಖೆ ನಡೆಸಿದ್ದರು. ಈ ಮಾದಕವಸ್ತುಗಳ ಕಳ್ಳಸಾಗಣೆಯಿಂದ ಬರುವ ಹಣವನ್ನು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಎನ್​ಐಎ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿತ್ತು.

ಇದಾದ ನಂತರ ಶ್ರೀಲಂಕಾ ತಮಿಳರ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಐಎ ನಂತರ ಹಲವಾರು ಜನರನ್ನು ವಿಚಾರಣೆ ನಡೆಸಿತ್ತು. ಈಗ ಇರಾನಿಯನ್ನರು ಭಾರತದ ಜಲಗಡಿಯಲ್ಲಿ ಪತ್ತೆಯಾದ ನಂತರ ತಮಿಳುನಾಡು ಕರಾವಳಿ ಪೊಲೀಸರು ಮತ್ತು ಕೋಸ್ಟ್ ಗಾರ್ಡ್​​ ಮತ್ತಷ್ಟು ಚುರುಕಾಗಿದ್ದು, ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ.

ಇದನ್ನೂ ಓದಿ: ಭಾರತದ ಜಲಗಡಿ ಪ್ರವೇಶಿಸಿದ ಇರಾನ್ ಬೋಟ್, 9 ಮಂದಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.