ETV Bharat / bharat

ಉತ್ತರ ಪ್ರದೇಶದಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡನ ಕೊಲೆ..?

author img

By

Published : Sep 10, 2021, 9:03 AM IST

ಉತ್ತರ ಪ್ರದೇಶದ ಬಾಗ್​ಪತ್​​ನಲ್ಲಿ ಬಿಜೆಪಿ ನಾಯಕರೊಬ್ಬರ ಕೊಲೆಯಾಗಿದೆ. ಮಾಜಿ ಸಚಿವ ಆತ್ಮಾರಾಮ್ ತೋಮರ್ ಅವರು, ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

murder-of-bjp-leader-atmaram-tomar-in-baghpat
ಉತ್ತರ ಪ್ರದೇಶದಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡನ ಅನುಮಾನಾಸ್ಪದ ಸಾವು

ಬಾಗ್‌ಪತ್(ಉತ್ತರ ಪ್ರದೇಶ): ದೆಹಲಿಯಲ್ಲಿ ಕಾಶ್ಮೀರದ ರಾಜಕಾರಣಿಯೊಬ್ಬರ ಶವ ಪತ್ತೆಯಾದ ಬೆನ್ನಲ್ಲೇ, ಉತ್ತರ ಪ್ರದೇಶದ ಬಾಗ್​ಪತ್​​ನಲ್ಲಿ ಬಿಜೆಪಿ ನಾಯಕನೊಬ್ಬನ ಕೊಲೆಯಾಗಿದೆ. ಮಾಜಿ ಸಚಿವ ಆತ್ಮಾರಾಮ್ ತೋಮರ್ ಅವರು, ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ಕತ್ತು ಹಿಸುಕಿ ಆತ್ಮಾರಾಮ್ ತೋಮರ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಕತ್ತಿನ ಸುತ್ತಲೂ ಟವೆಲ್ ಸುತ್ತಿರುವುದು ಕಂಡುಬಂದಿದೆ. ಆತ್ಮಾರಾಮ್ ಅವರ ಸ್ಕಾರ್ಪಿಯೋ ಕಾರು ನಾಪತ್ತೆಯಾಗಿದೆ.

ಕಾಲೇಜೋಂದರ ಮಾಜಿ ಪ್ರಾಂಶುಪಾಲರೂ ಆಗಿದ್ದ ಆತ್ಮರಾಮ್ ತೋಮರ್ ಚಪ್ರೌಲಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಸ್ತುತ, ಅವರು ಬಾಗ್​ಪತ್ ನಗರದ ಬಿಜ್ರೌಲ್ ರಸ್ತೆಯಲ್ಲಿ ವಾಸಿಸುತ್ತಿದ್ದರು

ಸ್ಥಳಕ್ಕೆ ಎಸ್ಪಿ, ಎಎಸ್ಪಿ ಮತ್ತು ಶ್ವಾನದಳ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಆರು ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.