ETV Bharat / bharat

300 ರೂ ಸಾಲ ಪಡೆದು ವಾಪಸ್​ ನೀಡದ ಅಣ್ಣ.. ಸಹೋದರನನ್ನು ಕೊಂದೇಬಿಟ್ಟ ತಮ್ಮ

author img

By

Published : Dec 17, 2022, 11:05 AM IST

ಕೇವಲ 300 ರೂಪಾಯಿ ವಿಷಯಕ್ಕೆ ಅಣ್ಣ ತಮ್ಮನ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Man kills bother over Rs 300  brother killed by sibling in Betul  Man kills bother over Rs 300 in Madhya Pradesh  ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ  ಪತ್ನಿಯಿಂದ ಸಾಲ ಪಡೆದು ವಾಪಸ್​ ನೀಡದ ಅಣ್ಣ  ಸಹೋದರನನ್ನು ಕೊಲೆ ಮಾಡಿದ ತಮ್ಮ  300 ರೂಪಾಯಿ ವಿಷಯಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ  ಸಹೋದರ ಸಾವನ್ನಪ್ಪಿದ್ದ ಬೆನ್ನಲ್ಲೇ ರಮೇಶ್​ ಪರಾರಿ
ಪತ್ನಿಯಿಂದ ಸಾಲ ಪಡೆದು ವಾಪಸ್​ ನೀಡದ ಅಣ್ಣ

ಬೆತುಲ್ (ಮಧ್ಯಪ್ರದೇಶ): ಸಹೋದರರ ಮಧ್ಯೆ ಕೇವಲ 300 ರೂಪಾಯಿ ವಿಷಯಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಪ್ರಕರಣ ಬೆತುಲ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಇಲ್ಲಿನ ಕುಪ್ಪಾ ಗ್ರಾಮದಲ್ಲಿ ನಡೆದಿದ್ದು, ಮೃತರು ಸುಮನ್ ಸಿಂಗ್ ಕಕೋಡಿಯಾ ಎಂದು ಗುರುತಿಸಲಾಗಿದ್ದು, ಆರೋಪಿ ರಮೇಶ್​ ಕಕೋಡಿಯಾನನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಪತ್ನಿಯಿಂದ ಸುಮನ್ 300 ರೂಪಾಯಿ ಸಾಲ ಪಡೆದಿದ್ದರು. ಇದೇ ವಿಷಯಕ್ಕೆ ರಮೇಶ್ ಮತ್ತು ಸುಮನ್ ನಡುವೆ ಜಗಳವಾಗಿದೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ರಮೇಶ್​ ಕಬ್ಬಿಣದ ಪೈಪ್​ನಿಂದ ಸುಮನ್​ ತಲೆಗೆ ಜೋರಾಗಿ ಹಲ್ಲೆ ಮಾಡಿದ್ದಾರೆ. ಸುಮನ್ ನೆಲಕ್ಕೆ​ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಹೋದರ ಸಾವನ್ನಪ್ಪಿದ್ದ ಬೆನ್ನಲ್ಲೇ ರಮೇಶ್​ ಪರಾರಿಯಾಗಿದ್ದರು. ಬಳಿಕ ಆತನನ್ನು ಬಂಧಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಅಪಾಲ ಸಿಂಗ್ ಹೇಳಿದ್ದಾರೆ.

ಓದಿ: ನಾಪತ್ತೆಯಾಗಿದ್ದ ಮನೆ ಮಗಳು 10 ವರ್ಷಗಳ ಬಳಿಕ ಮತ್ತೆ ಸಿಕ್ಕಿದ್ದು ಹೀಗೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.