ETV Bharat / bharat

ಮದುವೆಯಾಗಲು ನಿರಾಕರಿಸಿದ ಅಪ್ರಾಪ್ತೆಯ ಬರ್ಬರ ಹತ್ಯೆ!

author img

By

Published : Feb 21, 2021, 8:32 PM IST

ವಿವಾಹವಾಗುವಂತೆ ಯುವನೋರ್ವ ಅಪ್ರಾಪ್ತೆಯಲ್ಲಿ ಕೇಳಿಕೊಂಡಿದ್ದು, ಆಕೆ ನಿರಾಕರಿಸಿದ್ದಾಳೆ. ಹಾಗಾಗಿ ಆಕೆಯನ್ನು ಆತ ಬರ್ಬರವಾಗಿ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

Man killed girl for rejecting marriage proposal: Police
ವಿವಾಹಕ್ಕೆ ನಿರಾಕರಣೆ.......ಅಪ್ರಾಪ್ತೆಯನ್ನು ಕೊಂದ ಪಾಪಿ!

ನವದೆಹಲಿ: ದೆಹಲಿಯಲ್ಲಿ ರಿಂಕು ಶರ್ಮಾ ಹತ್ಯೆ ಪ್ರಕರಣ ಮಾದ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇದೀಗ ಬೇಗಂಪುರ್​ ಪ್ರದೇಶದಲ್ಲಿ ಅಪ್ರಾಪ್ತೆಯೊಬ್ಬಳ ಹತ್ಯೆ ರಾಷ್ಟ್ರ ರಾಜಧಾನಿಯನ್ನು ನಡುಗಿಸಿದೆ.

ಬೇಗಂಪುರ್​​​ನಲ್ಲಿರುವ ತನ್ನ ಮನೆಯಲ್ಲಿ ಶುಕ್ರವಾರ ಸಂಜೆ 17 ವರ್ಷದ ಅಪ್ರಾಪ್ತೆಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿ ಲಾಯ್ಕ್​​​ ಎಂಬಾತನನ್ನು ಬಂಧಿಸಲು ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ. ಇದರ ನಡುವೆ ಪೊಲೀಸರು ಸಂತ್ರಸ್ತೆಯ ನಿವಾಸದ ಬಳಿ ಭದ್ರತೆ ಹೆಚ್ಚಿಸಿದ್ದಾರೆ.

ಡಿಸಿಪಿ ಪ್ರಮೋದ್ ಕುಮಾರ್ ಮಿಶ್ರಾ

ಪೊಲೀಸರ ಪ್ರಕಾರ, ಅಪ್ರಾಪ್ತೆ ಈ ಹಿಂದೆ ತನ್ನ ಕುಟುಂಬಸ್ಥರೊಂದಿಗೆ ಬವಾನಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಒಂದು ವರ್ಷದ ಹಿಂದೆ ಬೇಗಂಪುರ್​​ ಪ್ರದೇಶಕ್ಕೆ ಈ ಕುಟುಂಬ ಸ್ಥಳಾಂತರಗೊಂಡಿತ್ತು. ಈ ಹಿಂದೆ ಅವರ ನೆರೆಯವನಾಗಿದ್ದ (ಬವಾನಾ ಪ್ರದೇಶದಲ್ಲಿ ) 25 ವರ್ಷದ ಲಾಯ್ಕ್​​​ ಬೇಗಂಪುರ್​​ ಪ್ರದೇಶದ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದನಂತೆ. ಜೊತೆಗೆ ಹುಡುಗಿಯ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಮದುವೆಯಾಗುವಂತೆ ಆಕೆಯಲ್ಲಿ ಕೇಳಿಕೊಂಡಿದ್ದು, ಆಕೆ ನಿರಾಕರಿಸಿದ್ದಾಳೆ ಎಂಬ ಮಾಹಿತಿಯನ್ನು ಡಿಸಿಪಿ ಪ್ರಮೋದ್ ಕುಮಾರ್ ಮಿಶ್ರಾ ನೀಡಿದ್ದಾರೆ.

ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ

ಈ ಕುರಿತು ದೂರು ದಾಖಲಾಗಿದೆ. ಮೃತಳ ಸಹೋದರ ತನ್ನ ದೂರಿನಲ್ಲಿ ಲಾಯ್ಕ್ ತಮ್ಮ​​​​ ಮನೆಯನ್ನು ಲಾಕ್ ಮಾಡಿ ಹೊರಗೆ ಓಡುತ್ತಿರುವುದನ್ನು ನೋಡಿದೆ ಎಂದು ತಿಳಿಸಿದ್ದಾನೆ. ಬಳಿಕ ಆಕೆ ರಕ್ತಸಿಕ್ತವಾಗಿ ಬಿದ್ದಿರುವುದನ್ನು ಸಹೋದರ ನೋಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.