ETV Bharat / bharat

ದೀಪಾವಳಿ ಹಬ್ಬದಂದು ಬಾಲಕಿ ಬಲಿ ಪಡೆದ ಚಿರತೆ: ಕಳೆದ 8 ದಿನಗಳಲ್ಲಿ 5 ಮಂದಿ ಸಾವು

author img

By

Published : Oct 24, 2022, 1:00 PM IST

ಕಬ್ಬಿನ ಗದ್ದೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಲಖೀಂಪುರ ಖೇರಿ ಜಿಲ್ಲೆಯ ಭೀರಾ ಕೊತ್ವಾಲಿ ಪ್ರದೇಶದ ರಾಮನಗರ ಕಲನ್ ಗ್ರಾಮದಲ್ಲಿ ನಡೆದಿದೆ.

leopard
ಚಿರತೆ ದಾಳಿ

ಉತ್ತರ ಪ್ರದೇಶ(ಲಖೀಂಪುರ ಖೇರಿ): ಜಿಲ್ಲೆಯಲ್ಲಿ ಹುಲಿ, ಚಿರತೆಗಳ ದಾಳಿಗೆ ಕಡಿವಾಣ ಬೀಳುತ್ತಿಲ್ಲ. ಭೀರಾ ಕೊತ್ವಾಲಿ ಪ್ರದೇಶದ ರಾಮನಗರ ಕಲನ್ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಮೂಲಕ ಎಂಟು ದಿನಗಳಲ್ಲಿ ಹುಲಿ ಮತ್ತು ಚಿರತೆ ದಾಳಿಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ ಐದಕ್ಕೆ ಏರಿಕೆಯಾಗಿದೆ.

ಭೀರಾ ಕೊತ್ವಾಲಿ ಪ್ರದೇಶದ ಬಿಜುವಾ ಚೌಕಿ ಪ್ರದೇಶದ ಶಾರದಾ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ರಾಮನಗರ ಕಲನ್ ಗ್ರಾಮದ ನಿವಾಸಿ ಮಥುರಾ ಅವರ 13 ವರ್ಷದ ಮಗಳು ಚೋಟಿ ತನ್ನ ತಂದೆ ಮತ್ತು ಸಹೋದರನೊಂದಿಗೆ ಮೇವು ತೆಗೆದುಕೊಂಡುಕೊಂಡು ಬರಲು ಕಬ್ಬಿನ ಗದ್ದೆಗೆ ಹೋಗಿದ್ದಳು. ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಪ್ರವಾಹ ಉಂಟಾದ ಹಿನ್ನೆಲೆ ಮೇವಿನ ಕೊರತೆ ಎದುರಾಗಿದೆ. ಜನರು ಕಬ್ಬಿನ ಗದ್ದೆಯಲ್ಲಿರುವ ಪೊದೆಯನ್ನೇ ಕಿತ್ತು ಪ್ರಾಣಿಗಳಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: ತಾಯಿ - ಮಗುವಿನ ಪುನರ್ಮಿಲನ: ಚಿರತೆ ಮರಿ ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ

ಚೋಟಿ ಕೂಡ ತನ್ನ ಅಣ್ಣ ಮತ್ತು ತಂದೆಯೊಂದಿಗೆ ಕಬ್ಬಿನ ಗದ್ದೆಯಲ್ಲಿ ಪೊದೆ ಕೀಳುತ್ತಿದ್ದಾಗ ಅಲ್ಲೇ ಅಡಗಿ ಕುಳಿತಿದ್ದ ಚಿರತೆ ತಕ್ಷಣ ದಾಳಿ ಮಾಡಿದೆ. ದೀಪಾವಳಿ ಹಬ್ಬದಂದು ಹೆಣ್ಣು ಮಗುವಿನ ಸಾವಿನಿಂದ ಮನೆಯಲ್ಲಿ ದುಃಖ ಮನೆ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.