ETV Bharat / bharat

ಪಕ್ಷಗಳು ಚುನಾವಣೆಗೆ ಮೊದಲು ನೀಡುವ ಭರವಸೆಗಳ ಕುರಿತ ಕಾನೂನು ಅಗತ್ಯವಿದೆ: ವೆಂಕಯ್ಯ ನಾಯ್ಡು

author img

By

Published : Apr 19, 2022, 10:39 AM IST

ಮತದಾನದ ವೇಳೆ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ಕಾರ್ಯಗತಗೊಳಿಸುವಂತೆ ಒತ್ತಡ ಹೇರುವ ಕಾನೂನಿನ ಅಗತ್ಯವಿದ್ದು, ಈ ಕುರಿತು ರಾಷ್ಟ್ರವ್ಯಾಪಿ ಚರ್ಚೆ ನಡೆಯಬೇಕಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

LAW ON POLL PROMISES: VICE PRESIDENT CALLS FOR DEBATE
ರಾಜಕೀಯ ಪಕ್ಷಗಳು ಚುನಾವಣೆಗೆ ಮೊದಲು ನೀಡುವ ಭರವಸೆಗಳ ಕುರಿತ ಕಾನೂನು ಅಗತ್ಯವಿದೆ: ವೆಂಕಯ್ಯನಾಯ್ಡು

ಮಚಲಿಪಟ್ಟಣಂ(ಆಂಧ್ರಪ್ರದೇಶ): ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಭರವಸೆಗಳ ಅನುಷ್ಠಾನಕ್ಕೆ ಕಾನೂನನ್ನು ಜಾರಿಗೊಳಿಸುವ ಅಗತ್ಯತೆಯ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೋಮವಾರ ಕರೆ ನೀಡಿದ್ದಾರೆ. ರಾಜಕೀಯ ಪಕ್ಷಗಳು ಭರವಸೆಗಳನ್ನು ನೀಡುವಾಗ ಜವಾಬ್ದಾರರಾಗಿರಬೇಕು. ಸಾಧಕ-ಬಾಧಕಗಳನ್ನು ಅಳೆದು, ಕಾರ್ಯಗತಗೊಳಿಸಬಹುದಾದ ಭರವಸೆಗಳನ್ನು ಮಾತ್ರ ನೀಡಬೇಕು. ರಾಜಕೀಯ ಪಕ್ಷಗಳು ಭರವಸೆ ನೀಡಿರುವುದು ಜನರ ಹಿತದೃಷ್ಟಿಯಿಂದಾಗಿರಬೇಕು ಎಂದು ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.

ಕೃಷ್ಣಾ ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷ ಪಿನ್ನಮನೇನಿ ಕೋಟೇಶ್ವರ ರಾವ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಥದ್ದೊಂದು ಕಾನೂನಿಗೆ ಬೇಡಿಕೆಯಿದೆ. ಮತದಾನದ ಭರವಸೆಗಳ ಮೇಲೆ ರಾಜಕೀಯ ಪಕ್ಷಗಳಿಗೆ ಜವಾಬ್ದಾರಿ ಇರುವಂತೆ ಇಂಥಹ ಕಾನೂನುಗಳು ಮಾಡುತ್ತವೆ. ಭರವಸೆಗಳನ್ನು ಗೌರವಿಸಲು ವಿಫಲವಾದ ಸಂದರ್ಭದಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ. ಅಂತಹ ಕಾನೂನಿನ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗುವ ಅಗತ್ಯವಿದೆ ಎಂದಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ಚುನಾವಣೆಗೆ ಮೊದಲು ಅನುಷ್ಠಾನಕ್ಕೆ ತರಲು ಅಸಾಧ್ಯವಾದ ಭರವಸೆಗಳನ್ನು ನೀಡುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ ಅವರು ಜನರು ತಾವು ಆಯ್ಕೆ ಮಾಡುವ ರಾಜಕೀಯ ಪ್ರತಿನಿಧಿಗಳ ಮೇಲೆ ನಿಗಾ ಇಡಬೇಕು. ನಿಮ್ಮ ಚುನಾಯಿತ ಪ್ರತಿನಿಧಿಗಳ ನಡವಳಿಕೆಯನ್ನು ನೀವು ನಿರಂತರವಾಗಿ ಗಮನಿಸಬೇಕು. ಜಾತಿ, ಹಣ, ಅಪರಾಧಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದರಿಂದ ವ್ಯವಸ್ಥೆ ದುರ್ಬಲವಾಗುತ್ತದೆ ಎಂದು ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಥುರಾ-ವೃಂದಾವನದಲ್ಲಿ ಮದ್ಯ-ಮಾಂಸ ಮಾರಾಟ ನಿಷೇಧ ಪ್ರಶ್ನಿಸಿದ್ದ ಪಿಐಎಲ್ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.