ETV Bharat / bharat

ವಿಪಕ್ಷಗಳ ಸದಸ್ಯರಿಂದ ವಿಧಾನಮಂಡದಲ್ಲಿ ಗದ್ದಲ : ಕಲಾಪ ಮುಂದೂಡಿ ಸಭಾತ್ಯಾಗ ಮಾಡಿದ ಸಭಾಧ್ಯಕ್ಷ

author img

By

Published : Jun 27, 2022, 2:49 PM IST

ಎಷ್ಟು ಸಾರಿ ಹೇಳಿದರೂ ಪ್ರತಿಪಕ್ಷಗಳು ಶಾಂತವಾಗಲು ಸಿದ್ದರಿಲ್ಲದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು. ಆದರೆ, ಮತ್ತೆ ಯಾವಾಗ ಕಲಾಪ ಪ್ರಾರಂಭವಾಗುತ್ತದೆ ಎಂಬುದನ್ನೂ ತಿಳಿಸದೆ ಸಭಾತ್ಯಾಗ ಮಾಡಿದ್ದರು..

Kerala Assembly session adjourned as UDF opposition disrupts question hour with slogans
ವಿಪಕ್ಷಗಳ ಸದಸ್ಯರಿಂದ ವಿಧಾನಮಂಡದಲ್ಲಿ ಗದ್ದಲ

ತಿರುವನಂತಪುರಂ : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯನ್ನು ಎಸ್‌ಎಫ್‌ಐ ಕಾರ್ಯಕರ್ತರು ಧ್ವಂಸಗೊಳಿಸಿರುವುದು ಸೇರಿದಂತೆ ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ ಕಾರಣದಿಂದಾಗಿ 15ನೇ ಕೇರಳ ವಿಧಾನಸಭೆಯ ಐದನೇ ಅಧಿವೇಶನವನ್ನು ಸೋಮವಾರ ಬೆಳಗ್ಗೆ ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು.

ವಿಧಾನಮಂಡಲದ ಪ್ರಶ್ನೋತ್ತರ ಕಲಾಪ ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಮೇಜು ಬಡಿಯಲು ಆರಂಭಿಸಿದ್ದವು. ಅದಲ್ಲದೆ ಮೊದಲ ಪ್ರಶ್ನೆಗೆ ಉತ್ತರ ನೀಡುತ್ತಿದ್ದಂತೆಯೇ ಪ್ರತಿಪಕ್ಷದವರು ಘೋಷಣೆಗಳನ್ನು ಕೂಗಲಾರಂಭಿಸಿದ್ದರು. ಸಭಾಪತಿ ಎಂ.ಬಿ.ರಾಜೇಶ್ ಅವರು ಸದನದ ಪ್ರಶ್ನೋತ್ತರ ವೇಳೆಗೆ ಅಡ್ಡಿಪಡಿಸದಂತೆ ಹಲವು ಬಾರಿ ಕೇಳಿಕೊಂಡರೂ ಪ್ರತಿಪಕ್ಷದ ಸದಸ್ಯರು ಅವರ ಮಾತಿಗೆ ಕಿವಿಗೊಡದೆ ಗಲಭೆ ಸೃಷ್ಟಿಸುವುದರಲ್ಲೇ ನಿರತರಾಗಿದ್ದರು.

ವಿಪಕ್ಷಗಳ ಸದಸ್ಯರಿಂದ ವಿಧಾನಮಂಡದಲ್ಲಿ ಗದ್ದಲ..

ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಬೀಸದಂತೆ, ಹಾಗೇ ಮಾಡುವುದು ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿದಂತೆ ಎಂದು ಹೇಳಿ ವಿಪಕ್ಷಗಳ ಸದಸ್ಯರನ್ನು ಕುಳಿತುಕೊಳ್ಳುವಂತೆ ಸ್ಪೀಕರ್ ತಿಳಿಸಿದ್ದರು. ಆದರೆ, ವಿರೋಧ ಪಕ್ಷದ ಸದಸ್ಯರು "SFI ಗೂಂಡಾವಾದ" ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಕಿವಿಗೊಡದ ಕಾರಣ ಎಲ್​ಡಿಎಫ್​ ಶಾಸಕರು ಹಾಗೂ ಇವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಎಷ್ಟು ಸಾರಿ ಹೇಳಿದರೂ ಪ್ರತಿಪಕ್ಷಗಳು ಶಾಂತವಾಗಲು ಸಿದ್ದರಿಲ್ಲದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು. ಆದರೆ, ಮತ್ತೆ ಯಾವಾಗ ಕಲಾಪ ಪ್ರಾರಂಭವಾಗುತ್ತದೆ ಎಂಬುದನ್ನೂ ತಿಳಿಸದೆ ಸಭಾತ್ಯಾಗ ಮಾಡಿದ್ದರು. ಒಂದು ತಿಂಗಳ ಅವಧಿಯ ಅಧಿವೇಶನವನ್ನು ಮುಖ್ಯವಾಗಿ 2022-23ರ ಹಣಕಾಸು ವರ್ಷದ ಅನುದಾನದ ಬೇಡಿಕೆಗಳನ್ನು ಚರ್ಚಿಸಲು ಮತ್ತು ಅಂಗೀಕರಿಸಲು ಕರೆಯಲಾಗಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಿಂದ ಹಿಡಿದು ಎಸ್‌ಎಫ್‌ಐ ಕಾರ್ಯಕರ್ತರಿಂದ ರಾಹುಲ್ ಗಾಂಧಿ ಕಚೇರಿ ಧ್ವಂಸದವರೆಗಿನ ವಿಷಯಗಳ ಜೊತೆಗೆ ಸಿಪಿಐ(ಎಂ) ನೇತೃತ್ವದ ಎಲ್​ಡಿಎಫ್​ ಸರ್ಕಾರದ ವಿರುದ್ಧ ಚಾಟಿ ಬೀಸಲು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಸಜ್ಜಾಗಿ ಬಂದಿದ್ದರಿಂದ ಐದನೇ ಅಧಿವೇಶನ ಮಧ್ಯದಲ್ಲೇ ತಿರುವು ಪಡೆಯುವ ನಿರೀಕ್ಷೆ ಮೊದಲೇ ಇತ್ತು.

ಇದನ್ನೂ ಓದಿ : ರಾಜ್​ ಠಾಕ್ರೆ ಜತೆ ಏಕನಾಥ ಶಿಂದೆ ಎರಡೆರಡು ಬಾರಿ ಮಾತುಕತೆ: ತೀವ್ರ ಕುತೂಹಲ ಕೆರಳಿಸಿದ ಬಂಡಾಯ ನಾಯಕನ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.