ETV Bharat / bharat

ದೆಹಲಿ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್ ಘೋಷಣೆ

author img

By

Published : Oct 28, 2021, 12:44 AM IST

ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮಹತ್ವದ ಘೋಷಣೆ ಮಾಡಿದ್ದಾರೆ.

Kejriwal
Kejriwal

ನವದೆಹಲಿ: ಎರಡು ದಿನಗಳ ಉತ್ತರ ಪ್ರದೇಶ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಉಚಿತ ಪ್ರವಾಸದ ಭರವಸೆ ನೀಡಿದ್ದು, ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಯುಪಿ ಪ್ರವಾಸದಲ್ಲಿರುವ ಕೇಜ್ರಿವಾಲ್​, ದೆಹಲಿ ಸರ್ಕಾರದ ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ ಮಾಡಲಾಗುವುದು ಎಂದಿದ್ದಾರೆ.

ಮಹಾ ಆರತಿಯಲ್ಲಿ ಭಾಗಿಯಾದ ಕೇಜ್ರಿವಾಲ್​

  • मां सरयू नदी के पवित्र तट पर महाआरती में शामिल होकर मां का वंदन किया एवं उनका आशीर्वाद लिया। बेहद आनंदित माहौल था। pic.twitter.com/xagM50uBZw

    — Arvind Kejriwal (@ArvindKejriwal) October 25, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಯೂಟ್ಯೂಬ್​ ನೋಡಿ, ಮಗುವಿಗೆ ಜನ್ಮ ನೀಡಿದ 17 ವರ್ಷದ ಶಾಲಾ ವಿದ್ಯಾರ್ಥಿನಿ!

ದೆಹಲಿಯಲ್ಲಿನ ವೃದ್ಧರಿಗೆ ಯಾವುದೇ ರೀತಿಯ ವೆಚ್ಚವಿಲ್ಲದೆ ರಾಮ್​ ಲಲ್ಲಾನ ಆಶೀರ್ವಾದ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.ಅಯೋಧ್ಯೆಗೆ ಭೇಟಿ ನೀಡಿ, ರಾಮ್​ ಲಲ್ಲಾನ ಆಶೀರ್ವಾದ ಪಡೆದುಕೊಂಡ ಕೇಜ್ರಿವಾಲ್​, ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ದೆಹಲಿಯಲ್ಲಿ ಈಗಾಗಲೇ ಅನೇಕ ಜನಪ್ರೀಯ ಘೋಷಣೆ ಕೂಗಿ ಜನಮನಗೆದ್ದಿರುವ ಕೇಜ್ರಿವಾಲ್​ ಸರ್ಕಾರ ಇದೀಗ ಗುಜರಾತ್​, ಗೋವಾ, ಪಂಜಾಬ್​, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲೂ ತಮ್ಮ ಪಕ್ಷ ವಿಸ್ತರಣೆ ಮಾಡಲು ಮುಂದಾಗಿದೆ.

ಕೇಜ್ರಿವಾಲ್​ ಸರ್ಕಾರ ಈಗಾಗಲೇ ಪುರಿ ಜಗನ್ನಾಥ, ಉಜ್ಜೈನಿ, ಶಿರಡಿ, ಅಮೃತಸರ,ತಿರುಪತಿ, ದ್ವಾರಕಾ, ರಾಮೇಶ್ವರ, ಹರಿದ್ವಾರ ಹಾಗೂ ಮಥುರಾ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ವೃದ್ಧರಿಗೆ ಯೋಜನೆ ಘೋಷಣೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ 403 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಮ್​ ಆದ್ಮಿ ಪಕ್ಷ ಕೂಡ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.