ETV Bharat / bharat

ಕೇದಾರನಾಥ್​ನಲ್ಲಿ ವರುಣನ ಆರ್ಭಟ.. ಒಂದೇ ಕುಟುಂಬದ 7 ಜನ ಸೇರಿ 13 ಮಂದಿ ನಾಪತ್ತೆ

author img

By

Published : Aug 4, 2023, 9:52 AM IST

Updated : Aug 4, 2023, 11:41 AM IST

ಪ್ರಮುಖ ನಿಲ್ದಾಣವಾದ ಗೌರಿಕುಂಡ್‌ನಲ್ಲಿ ಬೆಟ್ಟವೊಂದು ಕುಸಿದು ಅವಶೇಷಗಳು ಬಿದ್ದಿದ್ದರಿಂದ ಎರಡ್ಮೂರು ಅಂಗಡಿಗಳು ನಾಶವಾಗಿವೆ. ಇದರೊಂದಿಗೆ 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

kedarnath landslide  two shops damaged  several people trapped under debris  ಕೇದಾರನಾಥ್​ನಲ್ಲಿ ವರುಣನ ಆರ್ಭಟ  ಎರಡು ಅಂಗಡಿ ನೆಲಸಮ  13ಕ್ಕೂ ಹೆಚ್ಚು ಜನ ನಾಪತ್ತೆ  ಗೌರಿಕುಂಡ್‌ನಲ್ಲಿ ಬೆಟ್ಟವೊಂದು ಕುಸಿದು  ಎರಡು ಅಂಗಡಿಗಳು ನಾಶ  ರಾತ್ರಿಯಿಂದ ಭಾರೀ ಮಳೆ  ಮಳೆ ತನ್ನ ಉಗ್ರ ಸ್ವರೂಪ
ಕೇದಾರನಾಥ್​ನಲ್ಲಿ ವರುಣನ ಆರ್ಭಟ

ಒಂದೇ ಕುಟುಂಬದ 7 ಜನ ಸೇರಿ 13 ಮಂದಿ ನಾಪತ್ತೆ

ಡೆಹ್ರಾಡೂನ್, ಉತ್ತರಾಖಂಡ: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಧಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 13 ಜನರು ನಾಪತ್ತೆಯಾಗಿದ್ದಾರೆ. ಕೇದಾರನಾಥ ದೇವಸ್ಥಾನದ ಪ್ರಮುಖ ರಸ್ತೆಯಾದ ಗೌರಿಕುಂಡ್‌ನಲ್ಲಿ ಈ ಘಟನೆ ನಡೆದಿದೆ. ಹಠಾತ್ ಭೂಕುಸಿತದಿಂದ ಮೂರು ಸ್ಥಳೀಯ ಅಂಗಡಿಗಳು ನಾಶವಾಗಿವೆ. ಇದರಿಂದ ಅದರಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಸೇರಿ ಒಟ್ಟು 13 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ, ಭಾರೀ ಮಳೆಯಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸಂತ್ರಸ್ತರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ನೇಪಾಳ ಮೂಲದವರು ಎಂದು ಸ್ಥಳೀಯರು ಹೇಳಿದ್ದಾರೆ.

ಇವರೆಲ್ಲ ಇಲ್ಲೇ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿರುವುದು ಬಯಲಾಗಿದೆ. ಗುರುವಾರ ರಾತ್ರಿಯಿಂದಲೇ ಪರಿಹಾರ ಕಾರ್ಯಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ. ಸಂತ್ರಸ್ತರು ಮಂದಾಕಿನಿ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಒಂದೇ ಕುಟುಂಬದಲ್ಲಿ ಏಳು ಜನ ನಾಪತ್ತೆ: ನಾಪತ್ತೆಯಾದವರಲ್ಲಿ ಅಮರ್ ಬೋಹ್ರಾ, ಅವರ ಪತ್ನಿ ಅನಿತಾ ಬೊಹ್ರಾ, ಅವರ ಪುತ್ರಿಯರಾದ ರಾಧಿಕಾ ಬೊಹ್ರಾ, ಪಿಂಕಿ ಬೊಹ್ರಾ, ಮಕ್ಕಳಾದ ಪೃಥ್ವಿ ಬೋಹ್ರಾ (7), ಜತಿಲ್ (6) ಮತ್ತು ವಕೀಲ್ (3) ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಜೊತೆಯಲ್ಲಿ ವಿನೋದ್ (26), ಮುಲಾಯಂ (25), ಆಶು (23), ಪ್ರಿಯಾಂಶು ಚಮೋಲಾ (18) ಮತ್ತು ರಣಬೀರ್ ಸಿಂಗ್ (28) ಸಹ ಇದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನು ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೆಲ ಸ್ಥಳೀಯರನ್ನೂ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಹೀಗಿರುವಾಗ ಘಟನೆಯಲ್ಲಿ ನಾಪತ್ತೆಯಾಗಿದ್ದವರು ಮಂದಾಕಿನಿ ನದಿಯ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

ಎಸ್‌ಡಿಆರ್‌ಎಫ್‌ನಿಂದ ಬಂದ ಮಾಹಿತಿಯ ಪ್ರಕಾರ, ಅಂದಾಜು 13 ಜನರು ಕಾಣೆಯಾಗಿದ್ದಾರೆ. ಇವರಲ್ಲಿ ನೇಪಾಳಿ ಮತ್ತು ಸ್ಥಳೀಯ ಜನರು ಸೇರಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಏನೂ ಪತ್ತೆಯಾಗಿಲ್ಲ. ಮಂದಾಕಿನಿ ನದಿಯೂ ರಭಸವಾಗಿ ಹರಿಯುತ್ತಿದೆ. ಮಳೆ ನಿಂತ ನಂತರವೇ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ: ಮೂರು ವರ್ಷ ಪೂರೈಸಿದ ಕೇದಾರನಾಥ್​​ ಸಿನಿಮಾ: ಸಹನಟ ಸುಶಾಂತ್​ ನೆನೆಪು ಬಿಚ್ಚಿಟ್ಟ ಸಾರಾ

Resort Collapse: ಕಳೆದ ತಿಂಗಳು ಕೊನೆಯ ವಾರದಲ್ಲಿ ಉತ್ತರ ಭಾರತದಲ್ಲಿ ವರುಣನ ಅಬ್ಬರ ಮುಂದುವರೆದಿತ್ತು. ಅನಾಹುತಗಳು ಸಂಭವಿಸುತ್ತಲೇ ಇತ್ತು. ಉತ್ತರಾಖಂಡ್​ ರಾಜ್ಯದಲ್ಲಿನ ರುದ್ರಪ್ರಯಾಗದ ಕೇದಾರನಾಥ ಹೆದ್ದಾರಿ ಪಕ್ಕದಲ್ಲಿದ್ದ ರೆಸಾರ್ಟ್ ಕುಸಿದಿದೆ. ಬಡಾಸುನಲ್ಲಿರುವ ಆರು ಕೋಣೆಗಳ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಕೆಲವೇ ಸಮಯದಲ್ಲಿ ಕುಸಿದಿದೆ. ಕುಸಿದು ಬೀಳುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಲತಾಣದಲ್ಲಿ ವೈರಲ್​ ಆಗಿತ್ತು.

Last Updated : Aug 4, 2023, 11:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.