ETV Bharat / bharat

ದೇಶದ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ: ನಿತೀಶ್​ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್​

author img

By

Published : Aug 31, 2022, 8:21 PM IST

ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ತೆಲಂಗಾಣ ಸಿಎಂ ಕೆಸಿಆರ್, ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

kcr-shares-stage-with-nitish-in-bihar-lashes-out-at-centre
ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ: ನಿತೀಶ್​ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್​

ಪಾಟ್ನಾ(ಬಿಹಾರ): ಬಿಹಾರ ಪ್ರವಾಸದಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳಿಂದಲೇ ದೇಶವು ಪ್ರತಿಯೊಂದು ವಲಯದಲ್ಲೂ ನಷ್ಟ ಅನುಭವಿಸುತ್ತಿದೆ ಎಂದು ದೂರಿದ್ದಾರೆ.

ರಾಜಧಾನಿ ಪಾಟ್ನಾದಲ್ಲಿ ಸಿಎಂ ನಿತೀಶ್​ ಕುಮಾರ್​ ಅವರೊಂದಿಗೆ ಸೇರಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್​​​, ಮೋದಿ ಸರ್ಕಾರ ಅಧಿಕಾರ ಬರುವುದಕ್ಕಿಂತ ಮೊದಲು ರೂಪಾಯಿ ಮೌಲ್ಯ ಇಷ್ಟೊಂದು ಕುಸಿದಿರಲಿಲ್ಲ. ರೈತರು ಒಂದು ವರ್ಷದ ಕಾಲ ಯಾಕೆ ಪ್ರತಿಭಟನೆ ನಡೆಯಬೇಕಾಯಿತು?. ಇದಕ್ಕೆಲ್ಲ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ನಿತೀಶ್​ ಹಿರಿಯ ರಾಜಕಾರಣಿ: ಇದೇ ವೇಳೆ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ನಿತೀಶ್​ ಕುಮಾರ್ ಅವರು ದೇಶದ ಹಿರಿಯ ರಾಜಕಾರಣಿ. ತೆಲಂಗಾಣದಲ್ಲಿ ಅಭಿವೃದ್ಧಿಗೆ ಬಿಹಾರದಿಂದ ಬಂದಿರುವ ಸಾವಿರಾರು ಕೆಲಸಗಾರರ ಕೊಡುಗೆಯೂ ಇದೆ. ಅನೇಕ ಕ್ಷೇತ್ರದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು ಎಂದರು.

  • Bihar | Telangana CM K Chandrashekar Rao meets RJD chief Lalu Yadav and former Bihar CM Rabri Devi at Rabri Devi's residence in Patna pic.twitter.com/9O1jY2iLSt

    — ANI (@ANI) August 31, 2022 " class="align-text-top noRightClick twitterSection" data=" ">

ಲಾಲೂ ಭೇಟಿಯಾದ ಕೆಸಿಆರ್​: ಆರ್​ಜೆಡಿ ವರಿಷ್ಠ ಲಾಲೂ ಪ್ರಸಾದ್​ ಯಾದವ್​ ಅವರನ್ನೂ ಕೆಸಿಆರ್ ಭೇಟಿ ಮಾಡಿದರು. ಲಾಲೂ ಪತ್ನಿ, ಮಾಜಿ ಸಿಎಂ ರಾಬ್ಡಿ ದೇವಿ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಕುಮಾರ್ ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್‌: ಹೊಸ ರಾಜಕೀಯ ಸಮೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.