ETV Bharat / bharat

ಧಾರಾಕಾರ ಮಳೆ, ಪ್ರವಾಹಕ್ಕೆ ತತ್ತರ.. ಪ್ರವಾಹದಲ್ಲಿ ಸಿಲುಕಿದ ಐವರು ಅರಣ್ಯಾಧಿಕಾರಿಗಳು ಸೇರಿ 10 ಜನ ರಕ್ಷಿಸಿದ ಸೇನೆ

author img

By

Published : Aug 21, 2023, 7:10 AM IST

Updated : Aug 21, 2023, 12:13 PM IST

Ten people who were stuck in a boat at Kol Dam : ಹಿಮಾಚಲ ಪ್ರದೇಶದ ಮನಾಲಿಯ ಕೋಲ್ಡಮ್‌ನಲ್ಲಿ ಭಾನುವಾರ ನೀರಿನ ಮಟ್ಟ ಏರಿಕೆ ಮತ್ತು ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹತ್ತು ಮಂದಿ ಸಿಲುಕಿಕೊಂಡಿದ್ದಾರೆ.

Himachal rains  10 people including 5 forest officials stuck  t officials stuck in Koldam in Mandi  rescue ops underway  Himachal Pradesh Heavy Rain  ಧಾರಾಕಾರ ಮಳೆ ಪ್ರವಾಹಕ್ಕೆ ತತ್ತರ  ಪ್ರವಾಹದಲ್ಲಿ ಸಿಲುಕಿಕೊಂಡ ಐವರು ಅರಣ್ಯಾಧಿಕಾರಿ  ಹಿಮಾಚಲ ಪ್ರದೇಶದ ಮನಾಲಿಯ ಕೋಲ್ಡಮ್‌  ನೀರಿನ ಮಟ್ಟ ಏರಿಕೆ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆ  ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ  ಎಡೆಬಿಡದೆ ಸುರಿದ ಮಳೆ ಮತ್ತು ನೀರಿನ ಮಟ್ಟ ಏರಿಕೆ  ಅರಣ್ಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಸಿಲುಕಿ  ಮಂಡಿಯ ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ
ಪ್ರವಾಹದಲ್ಲಿ ಸಿಲುಕಿಕೊಂಡ ಐವರು ಅರಣ್ಯಾಧಿಕಾರಿಗಳ ಜೊತೆ 10 ಜನ

ಮಂಡಿ, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತೊಮ್ಮೆ ಅವಾಂತರವನ್ನೇ ಸೃಷ್ಟಿಸಿದೆ. ಭಾನುವಾರದಂದು ಎಡೆಬಿಡದೆ ಸುರಿದ ಮಳೆ ಮತ್ತು ನೀರಿನ ಮಟ್ಟ ಏರಿಕೆಯಿಂದಾಗಿ ಕೋಲ್ಡಮ್‌ನಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಸಿಲುಕಿಕೊಂಡಿದ್ದರು. ಈಗ ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸ್ಟೀಮರ್​ ಸಹಾಯದಿಂದ ಸಂತ್ರಸ್ತರನ್ನು ಸ್ಥಳಾಂತರಿಸುವ ಪ್ರಯತ್ನಗಳು ತಡರಾತ್ರಿಯಿಂದ ಪ್ರಾರಂಭವಾಗಿದ್ದು, ಸೋಮವಾರ ಬೆಳಗಿನ ಜಾವ 3 ಗಂಟೆಯವರೆಗೆ ನಡೆದ ರಕ್ಷಣಾ ಕಾರ್ಯಾಚರಣೆ ಮೂಲಕ ಇವರೆಲ್ಲರನ್ನು ಅಣೆಕಟ್ಟಿನಿಂದ ಹೊರ ತರಲಾಗಿದೆ.

ಕೋಲ್ಡಮ್​ನಲ್ಲಿ ಸಿಲುಕಿಕೊಂಡಿರುವ ಹತ್ತು ಜನರಲ್ಲಿ ಐವರು ಸ್ಥಳೀಯರು ಮತ್ತು ಐವರು ಅರಣ್ಯ ಇಲಾಖೆ ನೌಕರರು ಸೇರಿದ್ದರು. ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಸ್ಥಳದಲ್ಲಿ NTPC ಅಧಿಕಾರಿಗಳು, DC, CISF ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.

Himachal rains  10 people including 5 forest officials stuck  t officials stuck in Koldam in Mandi  rescue ops underway  Himachal Pradesh Heavy Rain  ಧಾರಾಕಾರ ಮಳೆ ಪ್ರವಾಹಕ್ಕೆ ತತ್ತರ  ಪ್ರವಾಹದಲ್ಲಿ ಸಿಲುಕಿಕೊಂಡ ಐವರು ಅರಣ್ಯಾಧಿಕಾರಿ  ಹಿಮಾಚಲ ಪ್ರದೇಶದ ಮನಾಲಿಯ ಕೋಲ್ಡಮ್‌  ನೀರಿನ ಮಟ್ಟ ಏರಿಕೆ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆ  ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ  ಎಡೆಬಿಡದೆ ಸುರಿದ ಮಳೆ ಮತ್ತು ನೀರಿನ ಮಟ್ಟ ಏರಿಕೆ  ಅರಣ್ಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಸಿಲುಕಿ  ಮಂಡಿಯ ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ
10 ಜನ ರಕ್ಷಿಸದ ಸೇನೆ

ಮಂಡಿಯ ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ ಮಾತನಾಡಿ, ಕೋಲ್ ಡ್ಯಾಮ್ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಐವರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಐವರು ಸ್ಥಳೀಯರು ಸೇರಿದಂತೆ ಹತ್ತು ಜನರು ದೋಣಿಯಲ್ಲಿ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಈಗ ಅವರೆಲ್ಲರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಡಿಸಿ ಚೌಧರಿ ಹೇಳಿದ್ದಾರೆ.

ರಕ್ಷಣಾ ತಂಡವನ್ನು ಶ್ಲಾಘಿಸಿದ ಡಿಸಿ: ಮಳೆ ಮತ್ತು ಕಷ್ಟಕರ ಪರಿಸ್ಥಿತಿಯ ನಡುವೆ ಸಂತ್ರಸ್ತರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಡಿಸಿ ಚೌಧರಿ ತಿಳಿಸಿದ್ದಾರೆ. ಬಳಿಕ ರಕ್ಷಣಾ ತಂಡವನ್ನು ಶ್ಲಾಘಿಸಿದರು. ಕೋಲ್ ಅಣೆಕಟ್ಟಿನ ಸ್ಥಳದಲ್ಲಿ ಸಿಕ್ಕಿಬಿದ್ದ ಜನರಲ್ಲಿ ಐವರು ಅರಣ್ಯ ಇಲಾಖೆ ನೌಕರರನ್ನು ಬಹದ್ದೂರ್ ಸಿಂಗ್, ಭೂಪೇಶ್ ಠಾಕೂರ್, ರೂಪ್ ಸಿಂಗ್, ಬಾಬು ರಾಮ್ ಮತ್ತು ಅಂಗದ್ ಕುಮಾರ್ ಎಂದು ಗುರುತಿಸಲಾಗಿದೆ. ಇತರ ಐವರು ಸ್ಥಳೀಯರನ್ನು ನೈನ್ ಸಿಂಗ್, ಡಾಗು ರಾಮ್, ಹೇಮ್ ರಾಜ್, ಬುಧಿ ಸಿಂಗ್ ಮತ್ತು ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಅಣೆಕಟ್ಟಿನಲ್ಲಿ ಸಿಲುಕಿರುವ ಕೆಲವು ವಿಡಿಯೋಗಳು ಸಹ ಹೊರಬಂದಿವೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಅಣೆಕಟ್ಟಿನಲ್ಲಿ ಸಿಲುಕಿರುವ ಜನರನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

Himachal rains  10 people including 5 forest officials stuck  t officials stuck in Koldam in Mandi  rescue ops underway  Himachal Pradesh Heavy Rain  ಧಾರಾಕಾರ ಮಳೆ ಪ್ರವಾಹಕ್ಕೆ ತತ್ತರ  ಪ್ರವಾಹದಲ್ಲಿ ಸಿಲುಕಿಕೊಂಡ ಐವರು ಅರಣ್ಯಾಧಿಕಾರಿ  ಹಿಮಾಚಲ ಪ್ರದೇಶದ ಮನಾಲಿಯ ಕೋಲ್ಡಮ್‌  ನೀರಿನ ಮಟ್ಟ ಏರಿಕೆ ಮತ್ತು ಎಡೆಬಿಡದೆ ಸುರಿಯುತ್ತಿರುವ ಮಳೆ  ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ  ಎಡೆಬಿಡದೆ ಸುರಿದ ಮಳೆ ಮತ್ತು ನೀರಿನ ಮಟ್ಟ ಏರಿಕೆ  ಅರಣ್ಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಸಿಲುಕಿ  ಮಂಡಿಯ ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ
10 ಜನ ರಕ್ಷಿಸದ ಸೇನೆ

ನಿರಂತರ ಮಳೆಯು ಭೂಕುಸಿತ ಮತ್ತು ಹಠಾತ್ ಪ್ರವಾಹಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಗಮನಾರ್ಹ ಹಾನಿಯಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಇಡೀ ರಾಜ್ಯವನ್ನು 'ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ' ಎಂದು ಘೋಷಿಸಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ ಜೂನ್ 24 ರಿಂದ ಹಿಮಾಚಲದಲ್ಲಿ ಒಟ್ಟು ವಿತ್ತೀಯ ನಷ್ಟವು 8014.61 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 2,022 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9,615 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಈ ವರ್ಷದ ಮುಂಗಾರು ಹಂಗಾಮಿನಲ್ಲಿ 113 ಭೂಕುಸಿತಗಳು ಸಂಭವಿಸಿವೆ.

ಮಾನ್ಸೂನ್ ಬಿರುಸಿನಲ್ಲಿ ಒಟ್ಟು 224 ಮಂದಿ ಪ್ರಾಣ ಕಳೆದುಕೊಂಡಿದ್ದರೆ. ಇದುವರೆಗೆ ರಾಜ್ಯದಲ್ಲಿ 117 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಸಮ್ಮರ್ ಹಿಲ್ ಘಟನೆಯಲ್ಲಿ ಇಲ್ಲಿಯವರೆಗೆ ಹದಿನೇಳು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಣೆಯಾದ ದೇಹಗಳನ್ನು ಹೊರತೆಗೆಯಲು ಹೆಚ್ಚಿನ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಸರ್ಕಾರದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಕೆಲವು ವಾರಗಳಿಂದ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಹಿಮಾಚಲದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಸ್ಟ್ 22-24ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಆಗಸ್ಟ್ 21 ರಂದು ಹಳದಿ ಎಚ್ಚರಿಕೆ ನೀಡಲಾಗಿದೆ. ಚಂಬಾ ಮತ್ತು ಮಂಡಿ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನದಿ ಬಳಿ ಹೋಗದಂತೆ ಜನರಿಗೆ ತಿಳಿಸಲಾಗಿದೆ. ಅಪಾಯದ ಪ್ರದೇಶಗಳಿಂದ ದೂರ ಇರುವಂತೆ ಜನರಿಗೆ ತಿಳಿಸಲಾಗಿದೆ.

ಓದಿ: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಯತ್ರಾರ್ಥಿಗಳ ಬಸ್: 7 ಸಾವು, 22 ಮಂದಿಗೆ ಗಾಯ

Last Updated : Aug 21, 2023, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.